ಸುಮಲತಾ- ಎಚ್ಡಿ ಕುಮಾರಸ್ವಾಮಿಗೆ ನಡುವಿನ ವಾಕ್ಸಮರ ನಿಲ್ಲುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಕೆಆರ್ಎಸ್ ಬಿರುಕು ವಿಚಾರದಿಂದ ಶುರುವಾಗಿ ಮೈಷುಗರ್ ಕಾರ್ಖಾನೆ, ಈಗ ಅಂಬಿ ಸ್ಮಾರಕ ವಿಚಾರದವರೆಗೆ ಬಂದು ನಿಂತಿದೆ. ಇದೀಗ ಅಭಿಷೇಕ್ ಪ್ರತಿಕ್ರಿಯೆ ಇದು.
ಬೆಂಗಳೂರು (ಜು. 09): ಸುಮಲತಾ- ಎಚ್ಡಿ ಕುಮಾರಸ್ವಾಮಿಗೆ ನಡುವಿನ ವಾಕ್ಸಮರ ನಿಲ್ಲುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಕೆಆರ್ಎಸ್ ಬಿರುಕು ವಿಚಾರದಿಂದ ಶುರುವಾಗಿ ಮೈಷುಗರ್ ಕಾರ್ಖಾನೆ, ಈಗ ಅಂಬಿ ಸ್ಮಾರಕ ವಿಚಾರದವರೆಗೆ ಬಂದು ನಿಂತಿದೆ.
' ನಾವೇ ಗಣಿಗಾರಿಕೆ ಮಾಡ್ತಾ ಇದ್ದಿದ್ರೆ , ಬ್ಯುಸಿನೆಸ್ ಇದ್ದಿದ್ರೆ ನಾವ್ಯಾಕೆ ಕ್ಲೋಸ್ ಮಾಡಿಸ್ತಾ ಇದ್ದೀವಾ..? ನಾವ್ಯಾಕೆ ಅಕ್ರಮ ಗಣಿಗಾರಿಕೆ ವಿರುದ್ದ ಧ್ವನಿ ಎತ್ತುತ್ತಿದ್ದೆವು ಹೇಳಿ..? ಎಂದು ಅಭಿಷೇಕ್ ಅಂಬರೀಶ್ ಪ್ರತಿಕ್ರಿಯಿಸಿದ್ಧಾರೆ. ನಮ್ಮ ಅಮ್ಮನ ಪರವಾಗಿ ಎಂದಿಗೂ ನಿಲ್ಲುತ್ತೇವೆ' ಎಂದಿದ್ದಾರೆ.