News Hour: ಕುರ್ಚಿ ಬದಲಾವಣೆ ಕೂಗಿಗೆ ‘ಹೈ’ ಬ್ರೇಕ್

Oct 17, 2024, 11:10 PM IST

ಬೆಂಗಳೂರು (ಅ.17): ಕುರ್ಚಿ ಬದಲಾವಣೆ ಕೂಗಿಗೆ ವೇಣುಗೋಪಾಲ್ ಬ್ರೇಕ್ ಹಾಕಿದ್ದಾರೆ. ಬೈ ಎಲೆಕ್ಷನ್​ ಗೆಲ್ಲಲೇಬೇಕೆಂದು ಸಿಎಂ, ಡಿಸಿಎಂಗೆ ಟಾರ್ಗೆಟ್​ ನೀಡಲಾಗಿದೆ. ಗೊಂದಲದ ಹೇಳಿಕೆ ನೀಡಿದ್ರೆ ಮುಲಾಜಿಲ್ಲದೇ ಕ್ರಮ ಎಂದು ಎಚ್ಚರಿಕೆ ನೀಡಿದ್ದಾರೆ.

ಉಪಚುನಾವಣೆ ವಿಚಾರದಲ್ಲಿ ಮೂರು ಪಕ್ಷದಲ್ಲೂ ಚನ್ನಪಟ್ಟಣ ಟಿಕೆಟ್ ಆಯ್ಕೆ ಫೈಟ್​ ಶುರುವಾಗಿದೆ. ಸಂಡೂರಲ್ಲಿ ತುಕಾರಾಂ ಕುಟುಂಬಕ್ಕೆ ಟಿಕೆಟ್ ನೀಡಲು ಭಾರಿ ವಿರೋಧ ವ್ಯಕ್ತವಾಗಿದ್ದರೆ, ಶಿಗ್ಗಾಂವಿಯಲ್ಲಿ ಮಗನಿಗೆ ಟಿಕೆಟ್ ಕೊಡಿಸಲು ಬೊಮ್ಮಾಯಿ ಪ್ರಯತ್ನ ಆರಂಭಿಸಿದ್ದಾರೆ.

News Hour: ಮೂರು ಪಕ್ಷಕ್ಕೂ ಅಭ್ಯರ್ಥಿ ಆಯ್ಕೆ ಟೆನ್ಷನ್!

ಹರಿಯಾಣದಲ್ಲಿ ಮೂರನೇ ಬಾರಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಏರಿದೆ. ಎರಡನೇ ಬಾರಿ ಸಿಎಂ ಆಗಿ ನಯಾಬ್ ಸಿಂಗ್​ ಪದಗ್ರಹಣ ಮಾಡಿದ್ದಾರೆ. ಕಾರ್ಯಕ್ರಮಕ್ಕೆ   ಮೋದಿ ಸೇರಿ 19 ರಾಜ್ಯಗಳ ಸಿಎಂಗಳು ಭಾಗಿಯಾಗಿದ್ದರು.