ಕೋಚಿಮುಲ್ ಪ್ರತ್ಯೇಕಕ್ಕೆ ಸಂಪುಟ ಒಪ್ಪಿಗೆ, ರಮೇಶ್ ಕುಮಾರ್ ವಿರುದ್ಧದ ಸಮರದಲ್ಲಿ ಸುಧಾಕರ್‌ಗೆ ಜಯ

Nov 8, 2021, 5:06 PM IST

ಚಿಕ್ಕಬಳ್ಳಾಪುರ (ನ. 08):  ಕಾಂಗ್ರೆಸ್ ಬಿಜೆಪಿ ನಾಯಕರ ಸ್ವಪ್ರತಿಷ್ಠಿಗೆ ಕಾರಣವಾಗಿದ್ದು ಚಿಕ್ಕಬಳ್ಳಾಪುರ-ಕೋಲಾರ (Chikkaballapura-Kolar) ಹಾಲು ಉತ್ಪಾದಕರ ಸಹಕಾರ ಸಂಘ, ಕೊನೆಗೂ ಪ್ರತ್ಯೇಕವಾಗಿದೆ. ಕೋಲಾರದಿಂದ ಹಾಲು ಒಕ್ಕೂಟ (Kochimul) ಪ್ರತ್ಯೇಕಿಸಿ ಸಂಪುಟ ಸಭೆಯಲ್ಲಿ ಇಂದು ಒಪ್ಪಿಗೆ ಸೂಚಿಸಲಾಗಿದೆ. 

ಚಿಕ್ಕಬಳ್ಳಾಪುರ ಜಿಲ್ಲೆಗೆ ಸಚಿವ ಸುಧಾಕರ್ ಗುಡ್‌ನ್ಯೂಸ್

ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಡಾ. ಸುಧಾಕರ್ ಒತ್ತಾಸೆಯಂತೆ ಸಂಪುಟ ಒಪ್ಪಿಗೆ ನೀಡಿದ್ದು, ರಮೇಶ್ ಕುಮಾರ್‌ಗೆ ಹಿನ್ನಡೆಯಾಗಿದೆ. ಕೋಚಿಮುಲ್ ವಿಚಾರವಾಗಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ನಾಯಕರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿತ್ತು.