ಬಡವ, ಶ್ರಮಿಕರಿಗೆ ಸಿಗುತ್ತಾ ಗುಡ್‌ನ್ಯೂಸ್? ಕುತೂಹಲ ಮೂಡಿಸಿದ ಸಿಎಂ ಸುದ್ದಿಗೋಷ್ಠಿ

May 18, 2021, 3:30 PM IST

ಬೆಂಗಳೂರು, (ಮೇ.18): ರಾಜ್ಯದಲ್ಲಿ ಕೊರೋನಾ ಮಿತೀ ಮೀರುತ್ತಿದ್ದು, ಸೋಂಕು ನಿಯಂತ್ರಣಕ್ಕೆ ಈಗಾಗಲೇ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಮೇ.24ರವರೆಗೆ ಘೋಷಣೆಯಾಗಲಿರುವಂತ ಲಾಕ್ ಡೌನ್, ಕೊರೋನಾ ನಿಯಂತ್ರಣಕ್ಕಾಗಿ ಮತ್ತಷ್ಟು ಬಿಗಿ ಕೂಡ ಆಗಲಿದೆ ಎನ್ನಲಾಗುತ್ತಿದೆ. 

ಕೋವಿಡ್ ನಿಯಂತ್ರಣಕ್ಕೆ ಡೀಸಿಗಳಿಗೆ ಪ್ರಧಾನಿ ಮೋದಿ ಸಲಹೆ ನೀಡಿದ್ಹೀಗೆ

ಈ ಸಂಬಂಧ ನಾಳೆ (ಮೇ.19) ಬೆಳಿಗ್ಗೆ 11.30ಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ತುರ್ತು ಸುದ್ದಿಗೋಷ್ಠಿ ಕರೆದಿದ್ದು, ಲಾಕ್‌ಡೌನ್ ಬಗ್ಗೆ ಸ್ಪಷ್ಟಪಡಿಸಲಿದ್ದಾರೆ. ಇದರ ಜೊತೆಗೆ ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆಗಳಿವೆ. ಈ ಹಿನ್ನಲೆಯಲ್ಲಿ ಸಿಎಂ ಸುದ್ದಿಗೋಷ್ಠಿ ಕುತೂಹಲ ಮೂಡಿಸಿದೆ.