ಗಲಭೆಗೆ ಪಕ್ಕಾ ಪ್ಲಾನ್, ಪಕ್ಕಾ ಸಿದ್ಧತೆ; ಗಲಭೆಗೆ ಪ್ರಚೋದನೆ ಕೊಟ್ಟನಾ ಆ ನಾಯಕ.?

Aug 14, 2020, 9:42 AM IST

ಬೆಂಗಳೂರು (ಆ. 14): ಬೆಂಗಳೂರು ಗಲಭೆಗೆ ಬೆಂಗಳೂರು ನಗರ ಜಿಲ್ಲಾ ಎಸ್‌ಡಿಪಿಐ ಕಾರ್ಯದರ್ಶಿ ಮುಜಾಮಿಲ್ ಪಾಷಾ, 'ಮಾಸ್ಟರ್ ಮೈಂಡ್' ಎನ್ನುವ ಆರೋಪ ಕೇಳಿ ಬಂದಿದೆ. ಕೆಜಿ ಹಳ್ಳಿ ಸಗಾಯಪುರದ ನಿವಾಸಿ ಪಾಷಾ, ರಾಜಕೀಯ ದ್ವೇಷಕ್ಕೆ ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿ ಮೇಲೆ ದಾಳಿ ನಡೆಸಿದ್ಧಾನೆ. 

2019 ರ ಮೇ ನಲ್ಲಿ ಬಿಬಿಎಂಪಿ ಸಗಾಯಪುರ ವಾರ್ಡ್‌ಗೆ ಉಪ ಚುನಾವಣೆ ನಡೆದಿತ್ತು. ಆಗ ಎಸ್‌ಡಿಪಿಐನಿಂದ ಸ್ಪರ್ಧಿಸಿದ್ದ ಪಾಷಾ, ಶಾಸಕರ ಬೆಂಬಲಿಗ ಅಭ್ಯರ್ಥಿ ಎದುರು ಪರಾಜಿತನಾಗಿದ್ದ. ಅಂದಿನಿಂದ ಅಖಂಡ ಮೇಲೆ ಜಿದ್ದು ಸಾಧಿಸುತ್ತಿದ್ದ ಎನ್ನಲಾಗಿದೆ. ಇದೊಂದು ಸಂದರ್ಭವನ್ನು ಬಳಸಿಕೊಂಡು ಈ ಗಲಭೆ ಎಬ್ಬಿಸಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಸುವರ್ಣ ನ್ಯೂಸ್ ಡಿಬೇಟ್‌ನಲ್ಲಿ ರಾಜಕೀಯ ನಾಯಕರು ಹೇಳೋದೇನು? ಇಲ್ಲಿದೆ ನೋಡಿ..!

ಅನಂತ್‌ ಕುಮಾರ್‌ ಹೆಗಡೆಗೆ ಒಮ್ಮೆಯಾದ್ರೂ ಬುದ್ದಿ ಹೇಳಿದ್ದೀರಾ? ಸಂತೋಷ್‌ಗೆ ಜಮೀರ್‌ ತಿರುಗೇಟು