ಬಿಳಿಗಿರಿರಂಗನ ಬೆಟ್ಟದಲ್ಲಿ ಸುವರ್ಣ ನ್ಯೂಸ್ - ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ

Mar 22, 2021, 3:44 PM IST

ಮೈಸೂರು (ಮಾ. 22): ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ. ಇದು ಅಗಾಧ ವೈಶಿಷ್ಟ್ಯವುಳ್ಳ ಸಸ್ಯ ವೈವಿಧ್ಯ ಹಾಗೂ ಪ್ರಾಣಿ ವೈವಿಧ್ಯವನ್ನು ಹೊಂದಿದೆ. 240 ಕ್ಕೂ ಹೆಚ್ಚು ವಿಧದ ಪಕ್ಷಿ ಸಂಕುಲ ಇಲ್ಲಿದೆಯಂತೆ. ಕಾಂಡಂಚಿನ ಗ್ರಾಮಗಳಲ್ಲಿ ಜನಜಾಗೃತಿ ಮೂಡಿಸಲು ಏಷ್ಯಾನೆಟ್ ಸುವರ್ಣ ನ್ಯೂಸ್ - ಕನ್ನಡ ಪ್ರಭ ಅರಣ್ಯ ಇಲಾಖೆ ಸಹಯೋಗದಲ್ಲಿ ನಮ್ಮ ತಂಡ ಕ್ಯಾತೆ ದೇವರ ಗುಡಿಯನ್ನು ತಲುಪಿತು. ಅಲ್ಲಿಂದ 3 ತಂಡಗಳು ಜೀಪುಗಳಲ್ಲಿ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಯಿತು. ಹೇಗಿತ್ತು ಜನಜಾಗೃತಿ...? ಇಲ್ಲಿನ ಪ್ರಾಣಿ ಸಂಕುಲದ ವೈಶಿಷ್ಟ್ಯತೆಗಳೇನು..? ನೀವೇ ನೋಡಿ..