ರಾಜ್ಯದ ವಿವಿಧೆಡೆ 3 ಭೀಕರ ಅಪಘಾತಗಳು; 8 ಮಂದಿ ಸಾವು

Jun 26, 2022, 12:24 PM IST

ಬೆಂಗಳೂರು(ಜೂ.26):  ಕರುನಾಡ ಪಾಲಿಗೆ ಇಂದು ಸಾವಿನ ಸಂಡೆ, ಹೌದು, ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ 8 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಪ್ರತ್ಯೇಕ ಸ್ಥಳಗಳಲ್ಲಿ 3 ಅಪಘಾತಗಳು ಸಂಭವಿಸಿದ್ದು ಒಟ್ಟು ಎಂಟು ಮಂದಿ ಮೃತಪಟ್ಟಿದ್ದಾರೆ. ಬೆಳಗಾವಿ, ಹೊಸಕೋಟೆ ಹಾಗೂ ತುಮಕೂರಿನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಈ ಮೂಲಕ ಕರುನಾಡ ಪಾಲಿಕೆ ಭಾನುವಾರ ಕರಾಳವಾಗಿದೆ. ಬೆಳಗಾವಿಯಲ್ಲಿ ಕ್ರೂಸರ್‌ ಪಲ್ಟಿಯಾಗಿ ಏಳು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬ್ರಿಡ್ಜ್‌ನಿಂದ ಕೆಳಗೆ ಬಿದ್ದು ಟೆಕ್ಕಿ ಬಲಿಯಾದ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್‌ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ. ಹೊಸಕೋಟೆ ಟೋಲ್‌ ಬಳಿ ಸರಣಿ ಅಪಘಾತ ಸಂಭವಿಸಿದೆ.