ಯುವ ಕಾರ್ಯಕ್ರಮದಲ್ಲಿ ದೊಡ್ಮನೆ ಕುಟುಂಬ ಭಾಗಿ!ಯುವ ನನ್ನ ಮಗ ಅಲ್ಲ ಅಶ್ವಿನಿ, ಅಪ್ಪು ಪುತ್ರ ಎಂದ ರಾಘಣ್ಣ!

ಯುವ ಕಾರ್ಯಕ್ರಮದಲ್ಲಿ ದೊಡ್ಮನೆ ಕುಟುಂಬ ಭಾಗಿ!ಯುವ ನನ್ನ ಮಗ ಅಲ್ಲ ಅಶ್ವಿನಿ, ಅಪ್ಪು ಪುತ್ರ ಎಂದ ರಾಘಣ್ಣ!

Published : Mar 25, 2024, 10:07 AM IST

ದೊಡ್ಮನೆ ಮೂರನೇ ತಲೆಮಾರು ಯುವರಾಜ್  ಕುಮಾರ್ ಕ್ರೇಜ್ ಹೇಗಿದೆ ಅಂತ ಹೊಸಪೇಟೆಯಲ್ಲಿ ಪ್ರ್ಯೂ ಆಗಿತ್ತು. ಯುವ ರಾಜ್ ಕುಮಾರ್ ಸ್ಟೇಜ್ ಮೇಲೆ ಎಂಟ್ರಿ ಕೊಡುತ್ತಿದ್ದಂತೆ ಇಡೀ ಹೊಸಪೇಟೆಯೇ ಅಭಿಮಾನಿಗಳ ಕೂಗಿನಿಂದ ಗೂಯಿಗುಡುತ್ತಿತ್ತು.
 

ವಿಜಯನಗರ ಜಿಲ್ಲೆ ಹೊಸಪೇಟೆ ಸ್ಯಾಂಡಲ್‌ವುಡ್‌ನ(Sandalwood) ದೊಡ್ಮನೆ ರಾಜವಂಶದ ಭದ್ರಕೋಟೆ. ಈ ಕೋಟೆಯಲ್ಲಿರೋ ಒಬ್ಬೊಬ್ಬ ಅಭಿಮಾನಿಗಳೂ ದೊಡ್ಮನೆಯ ಸೈನಿಕರಂತೆ ಇರುವರು. ಅಣ್ಣಾವ್ರ ಮನೆಯ ಯಾವುದೇ ಸಿನಿಮಾ ಬಂದ್ರು ಅದನ್ನ ನೋಡಿ ಖುಷಿ ಪಟ್ಟು ಆರಾಧಿಸಿ ಅನುಭವಿಸೋದ್ರ ಜೊತೆಗೆ ಗೆಲ್ಲಿಸೋ ಜಬಾಬ್ಧಾರಿಯನ್ನೂ ಸೈನಿಕರಂತೆ ಹೆಗಲ ಮೇಲೆ ಹೊತ್ತು ಮೆರಿತಾರೆ. ಇದೀಗ ಇಂತಹ ಡೈ ಹಾರ್ಡ್ ಅಭಿಮಾನಿಗಳ ಎದುರೇ ದೊಡ್ಮನೆಯ ಯುವರಾಜ, ಅಣ್ಣಾವ್ರ ಮೊಮ್ಮಗ, ರಾಘವೇಂದ್ರ ರಾಜ್ ಕುಮಾರ್ ಪುತ್ರ, ಅಪ್ಪು ಚಿತ್ರರಂಗಕ್ಕೆ ಲಾಚ್ ಮಾಡಬೇಕಿದ್ದ ಯುವ ರಾಜ್ ಕುಮಾರ್(Yuvaraj kumar) ದರ್ಶನ ಆಗಿದೆ. ಅದಕ್ಕೆ ಕಾರಣ ಯುವರಾಜ್ ಕುಮಾರ್ ನಟನೆಯ ಯುವ ಸಿನಿಮಾ(Yuva movie). ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್‌ ಅಚ್ಚು ಮೆಚ್ಚಿನ ನೆಚ್ಚಿನ ತಾಣ. ಈಗ ಅದೇ ಅಪ್ಪು ನೆಚ್ಚಿನ ಊರಿನಲ್ಲಿ ಸಾವಿರಾರು ಅಭಿಮಾನಿಗಳ ಎದುರು ಯುವ ಸಿನಿಮಾದ ಅದ್ದೂರಿ ಪ್ರೀ ರಿಲೀಸ್ ಕಾರ್ಯಕ್ರಮ ನಡೆದಿದೆ. ಯುವ ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ದೊಡ್ಮನೆ ಕುಟುಂಬ ಭಾಗಿ ಆಗಿತ್ತು. ರಾಘವೇಂದ್ರ ರಾಜ್ ಕುಮಾರ್ ದಂಪತಿ, ವಿನಯ್ ರಾಜ್ ಕುಮಾರ್ ಆಶ್ವಿನಿ ಪುನೀತ್ ರಾಜ್ ಕುಮಾರ್ ಬಂದಿದ್ರು. ನಟ ರಾಘವೇಂದ್ರ ರಾಜ್ ಕುಮಾರ್ ತನ್ನ ಮಗನ ಬಗ್ಗೆ ಮಾತನಾಡಿದ್ದು ಅಪ್ಪು ಬಗ್ಗೆ ಮಾತನಾಡಿದ್ದನ್ನ ಕೇಳಿ ಕಾರ್ಯಕ್ರಮದಲ್ಲಿದ್ದವರು ಒಂದು ಕ್ಷಣ ಮೌನವಾಗಿದ್ರು.

ಇದನ್ನೂ ವೀಕ್ಷಿಸಿ:  ಬಬಲಾದಿ ಮುತ್ಯಾರ ಬೆಂಕಿ ಭವಿಷ್ಯಕ್ಕೆ ತಬ್ಬಿಬ್ಬಾದವರು ಯಾರು? ಭವಿಷ್ಯ ನುಡಿದ ಮೂರೇ ದಿನದಲ್ಲಿ ರಾಜಕಾರಣದಲ್ಲಿ ಗಢಗಢ!

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!