ಸೈಮಾ ವೆದಿಕೆಯಲ್ಲಿ ಕಣ್ಣೀರಿಟ್ಟ ಶಿವಣ್ಣ; ತಬ್ಬಿ ಸಮಾಧಾನ ಮಾಡಿದ ಯಶ್

Sep 13, 2022, 1:58 PM IST

ಸೈಮಾ 2022 ಸಮಾರಂಭ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನೆರವೇರಿದೆ. ಮೊದಲ ಬಾರಿಗೆ ಸೈಮಾ ಬೆಂಗಳೂರಿನಲ್ಲಿ ನಡೆದಿದ್ದು ಕನ್ನಡಿಗರು ಹೆಮ್ಮೆಪಡುವಂತಾಗಿದೆ. ರಾಕಿಂಗ್ ಸ್ಟಾರ್ ಕಾರಣದಿಂದ ಸೈಮಾ ಬೆಂಗಳೂರಿಗೆ ಬರುವಂತೆ ಆಗಿದ್ದು ವಿಶೇಷ. ಈ ಬಾರಿಯ ಸೈಮಾ ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಿಸಲಾಗಿದೆ. ಸೈಮಾ 2022 ಸಮಾರಂಭದಲ್ಲಿ ಅಪ್ಪುಗೆ ವಿಶೇಷ ಗೌರವ ನೀಡಲಾಗಿದೆ. ಸೈಮಾ ವೇದಿಕೆಯಲ್ಲಿ ಶಿವಣ್ಣ ಪ್ರೀತಿಯ ತಮ್ಮನಗೆ ಸಾಲಿ ಹಾಡು ಹೇಳಿ ಕಣ್ಣೀರಾಗಿದ್ರು. ಹೌದು, ಶಿವರಾಜ್ ಕುಮಾರ್, ಅಪ್ಪು ಪ್ರೀತಿಯ ಬಾನದಾರಿಯಲ್ಲಿ ಹಾಡು ಹೇಳಿದ್ರು. ಬಳಿಕ ಬಿಕ್ಕಿ ಬಿಕ್ಕಿ ಅತ್ತರು. ಅಲ್ಲೇ ಪಕ್ಕದಲ್ಲಿದ್ದ ಯಶ್ ಶಿವಣ್ಣ ಅವರನ್ನು ಸಮಾಧಾನ ಪಡಿಸಿದರು. ಯಶ್ ಮತ್ತು ಶಿವಣ್ಣ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.