ಅಂತೆ ಕಂತೆ ಅಲ್ಲ, ದುರಂತ ನಾಯಕ ಆಗ್ಬಿಟ್ರಾ ದರ್ಶನ್? ಇಳಿದ ತೂಕ.. ಕಳಾಹೀನ ಮುಖ..!

ಅಂತೆ ಕಂತೆ ಅಲ್ಲ, ದುರಂತ ನಾಯಕ ಆಗ್ಬಿಟ್ರಾ ದರ್ಶನ್? ಇಳಿದ ತೂಕ.. ಕಳಾಹೀನ ಮುಖ..!

Published : Nov 05, 2025, 02:20 PM IST

ಜೈಲಿನ ವಾತಾವರಣ ಹೊಂದದೇ 10 ಕೆಜಿಯಷ್ಟು ತೂಕ ಕಳೆದುಕೊಂಡಿರೋ ದರ್ಶನ್ ಲುಕ್ ಗುರುತೇ ಸಿಗದಷ್ಟು ಪದಲಾಗಿದೆ. ಕೋರ್ಟ್ ನಲ್ಲಿ ಬೆಂಚ್ ಮೇಲೆ ಕುಳಿತ ದರ್ಶನ್ ಫೋಟೊವಂತೂ ಶಾಕಿಂಗ್ ಆಗಿದೆ. ಮುಂದೇನು ಗತಿ?

ಬರೊಬ್ಬರಿ ಎರಡೂವರೇ ತಿಂಗಳ ಬಳಿಕ ಜೈಲಿಂದ ಹೊರಬಂದು, ಕೋರ್ಟ್ ಅಟೆಂಡ್ ಮಾಡಿರೋ ದರ್ಶನ್ (Darshan Thoogudeepa), ಮೇಲೆ ಚಾರ್ಜ್​ಫ್ರೇಮ್ ಮಾಡಲಾಗಿದೆ. ಕೋರ್ಟ್​ಗೆ ಬಂದ ಸ್ಟಾರ್ ನಟ ದರ್ಶನ್ ಅವತಾರ ನೋಡಿದವರು ಶಾಕ್ ಆಗಿದ್ದಾರೆ. 10 ಕೆಜಿಯಷ್ಟು ತೂಕ ಕಳೆದುಕೊಂಡಿರೋ ದರ್ಶನ್ ಮುಖ ಕಳಾಹೀನವಾಗಿದೆ. ನೋಡಲಿಕ್ಕೆ ಆಗದಷ್ಟು ಕೃಶವಾಗಿರೋ ದರ್ಶನ್​ನ ನೋಡ್ತಾ ಇದ್ರೆ, ಈತನನ್ನ ದುರಂತ ನಾಯಕ ಅನ್ನದೇ ವಿಧಿಯಿಲ್ಲ.

ಎರಡೂವರೇ ತಿಂಗಳ ಬಳಿಕ ಹೊರಜಗತ್ತಿನ ದರ್ಶನ..!

ಸುಪ್ರೀಂ ಕೋರ್ಟ್ ಬೇಲ್ ರದ್ದು ಮಾಡಿದ  ಎರಡೂವರೇ ತಿಂಗಳ ಬಳಿಕ ದರ್ಶನ್​ಗೆ ಹೊರಜಗತ್ತಿನ ದರ್ಶನವಾಗಿದೆ. ಸೋಮವಾರ 64ನೇ ಸಿಸಿಎಚ್ ಕೋರ್ಟ್​ಗೆ ಬಂದ ದಾಸನ ಅವತಾರ ಕಂಡು ಫ್ಯಾನ್ಸ್ ಶಾಕ್ ಆಗಿದ್ದಾರೆ.

ಜೈಲಿನ ವಾತಾವರಣ ಹೊಂದದೇ 10 ಕೆಜಿಯಷ್ಟು ತೂಕ ಕಳೆದುಕೊಂಡಿರೋ ದರ್ಶನ್ ಲುಕ್ ಗುರುತೇ ಸಿಗದಷ್ಟು ಪದಲಾಗಿದೆ. ಕೋರ್ಟ್ ನಲ್ಲಿ ಬೆಂಚ್ ಮೇಲೆ ಕುಳಿತ ದರ್ಶನ್ ಫೋಟೊವಂತೂ ಶಾಕಿಂಗ್ ಆಗಿದೆ.

ಮುಖ ಬಾಡಿದೆ.. ಕಣ್ಣುಗಳಲ್ಲಿ ಕಾಂತಿಯಿಲ್ಲ.. ಗಲ್ಲ ಒಳಗೆ ಹೋಗಿದೆ. ನೆರೆತ ಕೂದುಲು.. ಗಡ್ಡ.. ಅರೇ ಇದು ಕನ್ನಡ ಚಿತ್ರರಂಗದಲ್ಲಿ ಚಕ್ರವರ್ತಿಯಂತೆ ಮೆರೆದ ದಾಸನಾ ಅಂತ ಫ್ಯಾನ್ಸ್ ಕನ್​ಫ್ಯೂಸ್ ಆಗಬೇಕು ಹಾಗಿದೆ ದರ್ಶನ್ ಅವತಾರ.

ಅಸಲಿಗೆ ಜೈಲು ಎಂಥವರನ್ನೂ ಜರ್ಜರಿತರನ್ನಾಗಿ ಮಾಡಿಬಿಡುತ್ತೆ. ಮಾನಸಿಕವಾಗಿ ದೈಹಿಕವಾಗಿ ಕುಗ್ಗಿಸಿಬಿಡುತ್ತೆ. ದರ್ಶನ್​ ರೀತಿ ಹೊರಗಡೆ ಐಷಾರಾಮಿಯಾಗಿ ಬದುಕಿದವರಂತೂ ಜೈಲಿನ ವಾತಾವರಣದಲ್ಲಿ ಕಂಗಾಲಾಗಿ ಬಿಡ್ತಾರೆ.. ಸದ್ಯ ದರ್ಶನ್​ಗೂ ಅದೇ ಆಗಿರೋದು.

ಡಿ-ಗ್ಯಾಂಗ್ ಮೇಲೆ ದೋಷಾರೋಪ ಮಾಡಿದ ಕೋರ್ಟ್
ಹೌದು ಎ-1 ಪವಿತ್ರಾ, ಎ-2 ದರ್ಶನ್ ಸೇರಿದಂತೆ ರೇಣುಕಾಸ್ವಾಮಿ ಮರ್ಡರ್ ಕೇಸ್​​ನ ಆರೋಪಿಗಳ ಮೇಲೆ ಏನೆಲ್ಲಾ ಆರೋಪ ಇದೆಯೋ ಅದೆಲ್ಲವನ್ನ ನ್ಯಾಯಾದೀಶರು ಓದಿ ಹೇಳಿ,  ನಿಮ್ಮ ವಿರುದ್ದ ಇಂತಿಂಥಾ ಆರೋಪಗಳಿವೆ ಅಂತ ಚಾರ್ಜ್ ಫ್ರೆಮ್ ಮಾಡಿದ್ದಾರೆ.

ನಟ ದರ್ಶನ್ ವಿರುದ್ದ  ಒಂದಲ್ಲ ಎರಡಲ್ಲ ಬರೊಬ್ಬರಿ 11 ಸೆಕ್ಷನ್ ಹಾಕಲಾಗಿದೆ. ಈ ಎಲ್ಲಾ ಆರೋಪಗಳನ್ನ ಕೋರ್ಟ್ ದರ್ಶನ್ ಮೇಲೆ ಹೊರಿಸಿದ್ದು, ನಾನೇನು ಮಾಡಿಲ್ಲ ಸ್ವಾಮಿ ಅಂತ ದಾಸ ಅಲವತ್ತುಕೊಂಡಿದ್ದಾನೆ. ಆದ್ರೆ ಆರೋಪಿ ನಾ ಮಾಡಿಲ್ಲ ಅಂದಕೂಡಲೇ ಕೇಸ್ ಮುಗಿಯಲ್ಲ. ನವೆಂಬರ್ 10ರಿಂದ ಸಾಕ್ಷಿಗಳ ವಿಚಾರಣೆ ಮಾಡೋದಕ್ಕೆ ಕೋರ್ಟ್ ಆದೇಶ ನೀಡಿದೆ.

ಮುಂದಿನ ದಿನಗಳಲ್ಲಿ ಸಾಕ್ಷಿಗಳ ವಿಚಾರಣೆ ನಡೆಯಲಿದೆ. ಆ ಸಾಕ್ಷಿಗಳು, ಆಧಾರಗಳು, ಫೋರೆನ್ಸಿಕ್ ವರದಿ, ಟೆಕ್ನಿಕಲ್ ಎವಿಡೆನ್ಸ್​ಗಳು ದಾಸನ ಮುಂದಿನ ಭವಿಷ್ಯವನ್ನ ನಿರ್ಧಾರ ಮಾಡಲಿವೆ. ಒಟ್ಟಾರೆ ದರ್ಶನ್ ಸ್ಥಿತಿ ನೊಡಿದ್ರೆ  ಈತನನ್ನ ದುರಂತ ನಾಯಕ ಅಂತ ಕರೆಯದೇ ವಿಧಿಯಿಲ್ಲ..! ಹೆಚ್ಚಿನ ಮಾಹಿತಿಗೆ ವಿಡಿಯೋ ನೊಡಿ.. 

02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
Read more