Sakrebailu Elephant: ಪುನೀತ್ ನೋಡಲು ಜನವೋ ಜನ!

Nov 28, 2021, 4:00 PM IST

ಶಿವಮೊಗ್ಗದ ಸಕ್ಕರೆಬೈಲು ಆನೆ ಬಿಡಾರ ಮರಿಯಾನೆಗೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಎಂದು ನಾಮಕರಣ ಮಾಡಲಾಗಿತ್ತು. ಸಾವಿಗೂ ಎರಡು ತಿಂಗಳು ಮುನ್ನ ಪುನೀತ್ ಅವರು ಆನೆ ಬಿಡಾರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮರಿಯಾನೆಯನ್ನು ಅಪ್ಪಿ ಮುದ್ದಾಡಿದ್ದರು. ಹೀಗಾಗಿ ಈ ಮರಿ ಗಜಕ್ಕೆ ಅಪ್ಪು ಎಂದು ಹೆಸರಿಡಲಾಗಿದೆ. ಈಗ ಯಾರೇ ಸಕ್ಕರೆಬೈಲಿಗೆ ಹೋದರೂ ತಪ್ಪದೇ ಅಪ್ಪು ಆನೆಯನ್ನು ನೋಡಿಕೊಂಡು ಬರುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment