ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?

ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?

Published : Dec 10, 2025, 11:37 AM IST

ರಿಷಬ್​ ಶೆಟ್ಟಿಯ ಸಿನಿಮಾ ಬಾಕ್ಸ್​​ ಆಫೀಸ್​ನಲ್ಲಿ ಎಷ್ಟು ಸದ್ದು ಮಾಡ್ತೋ ಅಷ್ಟೇ ಸಿನಿಮಾದ ಹೊರಗಿನ ವಿಷಯಗಳಿಗೆ ಸುದ್ದಿ ಮಾಡಿದೆ... ಇವತ್ತು ಮತ್ತೊಂದು ಕಾಂಟ್ರವರ್ಸಿಯಲ್ಲಿ ರಿಷಬ್​​ ಹೆಸರು ಕೇಳಿ ಬಂದಿದೆ.

ತುಳುನಾಡಿನ ದೈವಾರಾಧನೆಯ ಎಳೆ ಹಿಡಿದುಕೊಂಡು ನಿರ್ಮಿಸಿದ ಕಾಂತಾರ ಸಿನಿಮಾ ಇಡೀ ದೇಶವನ್ನೇ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದೆ. ಪ್ರೀಕ್ವೆಲ್​ ಸೀಕ್ವೆಲ್​ ಎಲ್ಲವೂ ಸೂಪರ್​​ ಹಿಟ್​​. ಆದ್ರೆ ಈ ರಿಷಬ್​ ಶೆಟ್ಟಿಯ ಸಿನಿಮಾ ಬಾಕ್ಸ್​​ ಆಫೀಸ್​ನಲ್ಲಿ ಎಷ್ಟು ಸದ್ದು ಮಾಡ್ತೋ ಅಷ್ಟೇ ಸಿನಿಮಾದ ಹೊರಗಿನ ವಿಷಯಗಳಿಗೆ ಸುದ್ದಿ ಮಾಡಿದೆ... ಇವತ್ತು ಮತ್ತೊಂದು ಕಾಂಟ್ರವರ್ಸಿಯಲ್ಲಿ ರಿಷಬ್​​ ಹೆಸರು ಕೇಳಿ ಬಂದಿದೆ. ಕೇವಲ ರಿಷಬ್​ ಶೆಟ್ಟಿ ಮಾತ್ರವಲ್ಲ ದೈವ ನರ್ತರಕೊರಬ್ಬರ ವಿರುದ್ಧವೂ ಆಕ್ರೋಶ ವ್ಯಕ್ತವಾಗ್ತಿದೆ. ಅಷ್ಟಕ್ಕೂ ಏನಿದು ಕಾಂತಾರದ ಹೊಸ ಕಾಂಟ್ರವರ್ಸಿ..? ದೈವ ನರ್ತಕರ ಮೆಲೆ ಕೇಳಿ ಬಂದಿರೋ ಆರೋಪವೇನು..? ಅನ್ನೋದೇ ಇವತ್ತಿನ ಎಫ್ಐಆರ್​​.

ಇದೇ ವಿಡಿಯೋ.. ಇದೊಂದು ವಿಡಿಯೋ ಈಗ ಕೆಲ ದೈವಾರಾಧಕರ ಆಕ್ರೋಶಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ ಸಾಮಾಜಿಕ ಜಾಲತಾಣಗಳಲ್ಲು ದೈವ ನರ್ತಕ ಮತ್ತು ರಿಷಬ್ ಶೆಟ್ಟಿ ವಿರುದ್ಧ ಪೋಸ್ಟ್​ಗಳನ್ನ ಹಾಕುತ್ತಿದ್ದಾರೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಅಂಥದ್ದೇನಿದೆ..? ಹರಕೆ ತೀರಿಸುವಾಗ ಏನಾಯ್ತು..? ರಿಷಬ್​ ಶೆಟ್ಟಿ ದೈವ ಅಪ್ಪಣೆ ಪಡೆದೇ ನಾನು ಸಿನಿಮಾ ಮಾಡಿದ್ದೇನೆ ಅಂತ ಹೇಳುತ್ತಿದ್ದಾರೆ. ಕೆಲ ಸಾಮಾಜಿಕ ವಿಡಿಯೋಗಳಲ್ಲೂ ಅದನ್ನ ನೋಡಿದ್ದೇವೆ. ಆದ್ರೆ ಕೆಲ ದೈವಾರಾಧಕರಿಗೆ ಮಾತ್ರ ಈ ಸಿನಿಮಾದಿಂದ ಬೇಸರಗೊಂಡಿದ್ದಾರೆ. ಆದ್ರೆ ಇವರುಗಳ ಬೇಸರ ಆಕ್ರೋಶವಾಗಿ ಮಾರ್ಪಟ್ಟಿದ್ದು ಮಾತ್ರ ಮೊನ್ನೆ ಶೆಟ್ರು ಹರಕೆ ತೀರಿಸಲು ಹೋದಾಗ.

ರಿಷಬ್ ಮೊನ್ನೆ ಹರಕೆ ನೇಮ ತೀರಿಸಿದ್ರು. ಈ ಟೈಂನಲ್ಲಿ ದೈವನರ್ತಕರು ನೇಮ ಮಾಡುವಾಗ ರಿಷಬ್​​ ಮಡಿಲಲ್ಲಿ ಮಲಗುತ್ತಾರೆ. ಇದೇ ಘಟನೆ ಈಗ ಕಾಂಟ್ರವರ್ಸಿಗೆ ತಿರುಗಿದೆ. ಪಂಜುರ್ಲಿ ದೈವ ಹೀಗೆಲ್ಲಾ ಮಾಡಲ್ಲ ಅಂತಿದ್ದಾರೆ. ಇದು ದೈವ ಮಾಡಿದಲ್ಲ ದೈವ ನರ್ತಕ ಮಾಡಿದ್ದು ಅಂತಿದ್ದಾರೆ. ಸದ್ಯದಲ್ಲೇ ಈ ವಿಷಯಕ್ಕೂ ತುಳು ನಾಡಿನ ಜನ ಪ್ರಶ್ನೆ ಇಟ್ಟರೂ ಅಚ್ಚರಿ ಇಲ್ಲ.. ಆದ್ರೆ ಒಂದು ಸಂಸ್ಕೃತಿಯ ಬಗ್ಗೆ ಮಾತನ್ನಾಡೋದ್ದಾಗಲಿ.. ಅದನ್ನ ಇಯಾಳಿಸೋದನ್ನಾಗಲಿ ಮಾಡುವ ದೈರ್ಯ ಯಾರೂ ಮಾಡಬಾರದು.. ಎಲ್ಲಾದಕ್ಕೂ ಆ ಪಂಜುರ್ಲಿಯೇ ಉತ್ತರ ಕೊಡಬೇಕು.

04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:23Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
Read more