ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?

ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?

Published : Dec 10, 2025, 11:37 AM IST

ರಿಷಬ್​ ಶೆಟ್ಟಿಯ ಸಿನಿಮಾ ಬಾಕ್ಸ್​​ ಆಫೀಸ್​ನಲ್ಲಿ ಎಷ್ಟು ಸದ್ದು ಮಾಡ್ತೋ ಅಷ್ಟೇ ಸಿನಿಮಾದ ಹೊರಗಿನ ವಿಷಯಗಳಿಗೆ ಸುದ್ದಿ ಮಾಡಿದೆ... ಇವತ್ತು ಮತ್ತೊಂದು ಕಾಂಟ್ರವರ್ಸಿಯಲ್ಲಿ ರಿಷಬ್​​ ಹೆಸರು ಕೇಳಿ ಬಂದಿದೆ.

ತುಳುನಾಡಿನ ದೈವಾರಾಧನೆಯ ಎಳೆ ಹಿಡಿದುಕೊಂಡು ನಿರ್ಮಿಸಿದ ಕಾಂತಾರ ಸಿನಿಮಾ ಇಡೀ ದೇಶವನ್ನೇ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದೆ. ಪ್ರೀಕ್ವೆಲ್​ ಸೀಕ್ವೆಲ್​ ಎಲ್ಲವೂ ಸೂಪರ್​​ ಹಿಟ್​​. ಆದ್ರೆ ಈ ರಿಷಬ್​ ಶೆಟ್ಟಿಯ ಸಿನಿಮಾ ಬಾಕ್ಸ್​​ ಆಫೀಸ್​ನಲ್ಲಿ ಎಷ್ಟು ಸದ್ದು ಮಾಡ್ತೋ ಅಷ್ಟೇ ಸಿನಿಮಾದ ಹೊರಗಿನ ವಿಷಯಗಳಿಗೆ ಸುದ್ದಿ ಮಾಡಿದೆ... ಇವತ್ತು ಮತ್ತೊಂದು ಕಾಂಟ್ರವರ್ಸಿಯಲ್ಲಿ ರಿಷಬ್​​ ಹೆಸರು ಕೇಳಿ ಬಂದಿದೆ. ಕೇವಲ ರಿಷಬ್​ ಶೆಟ್ಟಿ ಮಾತ್ರವಲ್ಲ ದೈವ ನರ್ತರಕೊರಬ್ಬರ ವಿರುದ್ಧವೂ ಆಕ್ರೋಶ ವ್ಯಕ್ತವಾಗ್ತಿದೆ. ಅಷ್ಟಕ್ಕೂ ಏನಿದು ಕಾಂತಾರದ ಹೊಸ ಕಾಂಟ್ರವರ್ಸಿ..? ದೈವ ನರ್ತಕರ ಮೆಲೆ ಕೇಳಿ ಬಂದಿರೋ ಆರೋಪವೇನು..? ಅನ್ನೋದೇ ಇವತ್ತಿನ ಎಫ್ಐಆರ್​​.

ಇದೇ ವಿಡಿಯೋ.. ಇದೊಂದು ವಿಡಿಯೋ ಈಗ ಕೆಲ ದೈವಾರಾಧಕರ ಆಕ್ರೋಶಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ ಸಾಮಾಜಿಕ ಜಾಲತಾಣಗಳಲ್ಲು ದೈವ ನರ್ತಕ ಮತ್ತು ರಿಷಬ್ ಶೆಟ್ಟಿ ವಿರುದ್ಧ ಪೋಸ್ಟ್​ಗಳನ್ನ ಹಾಕುತ್ತಿದ್ದಾರೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಅಂಥದ್ದೇನಿದೆ..? ಹರಕೆ ತೀರಿಸುವಾಗ ಏನಾಯ್ತು..? ರಿಷಬ್​ ಶೆಟ್ಟಿ ದೈವ ಅಪ್ಪಣೆ ಪಡೆದೇ ನಾನು ಸಿನಿಮಾ ಮಾಡಿದ್ದೇನೆ ಅಂತ ಹೇಳುತ್ತಿದ್ದಾರೆ. ಕೆಲ ಸಾಮಾಜಿಕ ವಿಡಿಯೋಗಳಲ್ಲೂ ಅದನ್ನ ನೋಡಿದ್ದೇವೆ. ಆದ್ರೆ ಕೆಲ ದೈವಾರಾಧಕರಿಗೆ ಮಾತ್ರ ಈ ಸಿನಿಮಾದಿಂದ ಬೇಸರಗೊಂಡಿದ್ದಾರೆ. ಆದ್ರೆ ಇವರುಗಳ ಬೇಸರ ಆಕ್ರೋಶವಾಗಿ ಮಾರ್ಪಟ್ಟಿದ್ದು ಮಾತ್ರ ಮೊನ್ನೆ ಶೆಟ್ರು ಹರಕೆ ತೀರಿಸಲು ಹೋದಾಗ.

ರಿಷಬ್ ಮೊನ್ನೆ ಹರಕೆ ನೇಮ ತೀರಿಸಿದ್ರು. ಈ ಟೈಂನಲ್ಲಿ ದೈವನರ್ತಕರು ನೇಮ ಮಾಡುವಾಗ ರಿಷಬ್​​ ಮಡಿಲಲ್ಲಿ ಮಲಗುತ್ತಾರೆ. ಇದೇ ಘಟನೆ ಈಗ ಕಾಂಟ್ರವರ್ಸಿಗೆ ತಿರುಗಿದೆ. ಪಂಜುರ್ಲಿ ದೈವ ಹೀಗೆಲ್ಲಾ ಮಾಡಲ್ಲ ಅಂತಿದ್ದಾರೆ. ಇದು ದೈವ ಮಾಡಿದಲ್ಲ ದೈವ ನರ್ತಕ ಮಾಡಿದ್ದು ಅಂತಿದ್ದಾರೆ. ಸದ್ಯದಲ್ಲೇ ಈ ವಿಷಯಕ್ಕೂ ತುಳು ನಾಡಿನ ಜನ ಪ್ರಶ್ನೆ ಇಟ್ಟರೂ ಅಚ್ಚರಿ ಇಲ್ಲ.. ಆದ್ರೆ ಒಂದು ಸಂಸ್ಕೃತಿಯ ಬಗ್ಗೆ ಮಾತನ್ನಾಡೋದ್ದಾಗಲಿ.. ಅದನ್ನ ಇಯಾಳಿಸೋದನ್ನಾಗಲಿ ಮಾಡುವ ದೈರ್ಯ ಯಾರೂ ಮಾಡಬಾರದು.. ಎಲ್ಲಾದಕ್ಕೂ ಆ ಪಂಜುರ್ಲಿಯೇ ಉತ್ತರ ಕೊಡಬೇಕು.

02:45ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?
24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
Read more