ನಾಲ್ವರು ಅಂಧರ ಪಾಲಿಗೆ ಬೆಳಕಾಗಿರುವ 'ಅಪ್ಪು' ಕಣ್ಣುಗಳು!

ನಾಲ್ವರು ಅಂಧರ ಪಾಲಿಗೆ ಬೆಳಕಾಗಿರುವ 'ಅಪ್ಪು' ಕಣ್ಣುಗಳು!

Published : Oct 30, 2024, 05:21 PM IST

ಪುನೀತ್ ಅಗಲಿಕೆ ಬಳಿಕ ರಾಜ್ಯಾದ್ಯಂತ ನೇತ್ರದಾನ ಮಾಡುವವವರ ಸಂಖ್ಯೆ ಹೆಚ್ಚಾಗಿದೆ. ಪುನೀತ್ ಹುಟ್ಟುಹಬ್ಬದ ದಿನ ಒಂದೊಂದು ಜಿಲ್ಲೆಯಲ್ಲೂ ಸಾವಿರಾರು ಜನರು ನೇತ್ರದಾನ ಮಾಡ್ತಾರೆ. ರಾಜ್ಯಾದ್ಯಂತ ಲಕ್ಷಾಂತರ ಪುನೀತ್ ಅಭಿಮಾನಿಗಳು..

ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಅನ್ನೋದು ಪುನೀತ್ ನಟನೆಯ ಪರಮಾತ್ಮದ ಸಿನಿಮಾ ಸಾಲು. ಪುನೀತ್ ಪಾಲಿಗೆ ಇದು ಅತ್ಯಂತ ಹೇಳಿ ಮಾಡಿಸಿದ ಸಾಲು. ಅಪ್ಪು ನಮ್ಮನ್ನ ಅಗಲಿದ್ರೂ ಅವರು ನಮ್ಮೊಂದಿಗೆ ಜೀವಂತವಾಗಿದ್ದಾರೆ. ಅದ್ರಲ್ಲೂ ಅಪ್ಪು ನೇತೃದಾನ ಮಾಡಿದ್ದು ನಾಲ್ವರು ಅಂಧರ ಪಾಲಿಗೆ ಕಣ್ಣಾಗಿದ್ದಾರೆ. ಆ ಕಣ್ಣುಗಳ ಮೂಲಕವೇ ನಮ್ಮನ್ನ ನೋಡ್ತಾ ಇದ್ದಾರೆ.

ನಾಲ್ವರು ಅಂಧರ ಪಾಲಿಗೆ ಬೆಳಕಾಗಿರೋ ಅಪ್ಪು ಕಣ್ಣುಗಳು; ಆ ನಾಲ್ಕು ಕಂಗಳ ಮೂಲಕ ನಮ್ಮನ್ನೇ ನೋಡ್ತಿದ್ದಾರೆ  ಪುನೀತ: ತಂದೆ ವರನಟ, ಡಾ.ರಾಜ್‌ಕುಮಾರ್ ಅವರಂತೆಯೇ ಪುತ್ರ ಪುನೀತ್ ರಾಜ್‌ಕುಮಾರ್ ಕೂಡ ನೇತ್ರದಾನ ಮಾಡಿದ್ರು. ಪುನೀತ್ ರಾಜ್‌ಕುಮಾರ್  ಅಕಾಲಿಕ ಮರಣದ ನಂತರ ಅವರ ಕಣ್ಣುಗಳನ್ನ ದಾನ ಮಾಡಲಾಯಿತು. ಪುನೀತ್ ದಾನ ಮಾಡಿದ ಎರಡು ಕಣ್ಣುಗಳಿಂದ ನಾರಾಯಣ ನೇತ್ರಾಲಯ ನಾಲ್ವರು ದೃಷ್ಟಿ ವಿಕಲಚೇತನರಿಗೆ ಬೆಳಕು ಕೊಡಿಸಿದೆ. 

ಹೊಸ ತಂತ್ರಜ್ಞಾನ ಬಳಸಿಕೊಂಡು ಅಪ್ಪು ಎರಡು ನೇತ್ರಗಳಿಂದ ನಾಲ್ವರಿಗೆ ಬಳಕೆ ಮಾಡಿದ್ದು, ನಾಲ್ಕು ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿವೆ. ಪುನೀತ್​ರಿಂದ ದೃಷ್ಠಿ ಪಡೆದ ನಾಲ್ವರು ಕೂಡ ಕಡಿಮೆ ವಯಸ್ಸಿವರು. ಅದರಲ್ಲಿ ಒಬ್ಬ  ಮಹಿಳೆ, ಮತ್ತು ಮೂವರು ಯುವಕರು ದೃಷ್ಟಿ ಪಡೆದುಕೊಂಡಿದ್ದಾರೆ. ಆದರೆ ಅವರು ಯಾರು ಅಂತ  ಯಾರಿಗೂ ಗೊತ್ತಿಲ್ಲ. ಅಪ್ಪು ಕಣ್ಣಿನಿಂದ ಬೆಳಕು ಪಡೆದವರಿಗೂ ಈ ವಿಷಯ ಗೊತ್ತಿಲ್ಲ. ಅಪ್ಪು ನೇತ್ರ ಪಡೆದವರು ಯಾರು ಎಂಬುದು ಜೀವನ ಪರ್ಯಂತ ನಿಗೂಢವಾಗಿಯೇ ಉಳಿಯಲಿದೆ. ಆದ್ರೆ ಆ ಕಣ್ಣುಗಳ ಮೂಲಕ ಅಪ್ಪು ನಮ್ಮನ್ನ ನೋಡ್ತಾ ಇದ್ದಾರೆ ಅನ್ನೋದಂತೂ ಸತ್ಯ.

ಪುನೀತ್ ಸ್ಪೂರ್ತಿಯಿಂದ ಸಾವಿರಾರು ಜನರಿಂದ ನೇತ್ರದಾನ: ಹೌದು, ಪುನೀತ್ ಅಗಲಿಕೆ ಬಳಿಕ ರಾಜ್ಯಾದ್ಯಂತ ನೇತ್ರದಾನ ಮಾಡುವವವರ ಸಂಖ್ಯೆ ಹೆಚ್ಚಾಗಿದೆ. ಪುನೀತ್ ಹುಟ್ಟುಹಬ್ಬದ ದಿನ ಒಂದೊಂದು ಜಿಲ್ಲೆಯಲ್ಲೂ ಸಾವಿರಾರು ಜನರು ನೇತ್ರದಾನ ಮಾಡ್ತಾರೆ. ರಾಜ್ಯಾದ್ಯಂತ ಲಕ್ಷಾಂತರ ಪುನೀತ್ ಅಭಿಮಾನಿಗಳು ನೇತ್ರದಾನ ಮಾಡಿದ್ದಾರೆ.

ಅಲ್ಲಿಗೆ ಪುನೀತ್ ಬದುಕಿದ್ದಾಗ ಎಷ್ಟು ಒಳ್ಳೆಯ ಕೆಲಸ ಮಾಡಿದ್ದಾರೋ, ಅವರ ಅಗಲಿಕೆ ನಂತರವೂ ಅವರ ಹೆಸರಲ್ಲಿ ಅಷ್ಟೇ ಒಳ್ಳೆಯ ಕಾರ್ಯಗಳು ನಡೀತಾ ಇವೆ. ಪರಮಾತ್ಮ ನಮ್ಮನ್ನ ಅಗಲಿದ್ರೂ ಆತನ ಒಳ್ಳೆತನ ಜೀವಂತವಾಗಿದೆ. ಅನೇಕರ ಬದುಕಲ್ಲಿ ಕತ್ತಲೆಯನ್ನ ಕಳೆದು ಬೆಳಕನ್ನ ತಂದುಕೊಡ್ತಾ ಇದೆ. 

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
Read more