ರಾಜ್ಯಾದ್ಯಂತ ತೆರೆಗೆ ಬಂದಿದೆ ಕೊತ್ತಲವಾಡಿ: ಹಳ್ಳಿ ಕಥೆಗೆ ಪೃಥ್ವಿ ಅಂಬರ್ ಮಾಸ್ ಟಚ್!

ರಾಜ್ಯಾದ್ಯಂತ ತೆರೆಗೆ ಬಂದಿದೆ ಕೊತ್ತಲವಾಡಿ: ಹಳ್ಳಿ ಕಥೆಗೆ ಪೃಥ್ವಿ ಅಂಬರ್ ಮಾಸ್ ಟಚ್!

Published : Aug 02, 2025, 04:40 PM ISTUpdated : Aug 02, 2025, 04:41 PM IST

ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ ಅರುಣ್​ಕುಮಾರ್ ನಿರ್ಮಾಣದ ಕೊತ್ತಲವಾಡಿ ಸಿನಿಮಾ ರಾಜ್ಯಾದ್ಯಂತ ತೆರೆಗೆ ಬಂದಿದೆ. ಸದ್ಯ ಅದೇ ಭರವಸೆಯೊಂದಿಗೆ ಚಿತ್ರ ನೋಡಿದ ಪ್ರೇಕ್ಷಕರು ಏನಂದ್ರು..? ಪ್ರೇಕ್ಷಕರ ರೆಸ್ಪಾನ್ಸ್ ನೋಡಿ ಚಿತ್ರತಂಡದವರು ಏನಂದ್ರು. ನೋಡೋಣ ಬನ್ನಿ.

ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ ಅರುಣ್​ಕುಮಾರ್ ನಿರ್ಮಾಣದ ಕೊತ್ತಲವಾಡಿ ಸಿನಿಮಾ ರಾಜ್ಯಾದ್ಯಂತ ತೆರೆಗೆ ಬಂದಿದೆ. ಪೃಥ್ವಿ ಅಂಬರ್-ಕಾವ್ಯ ಶೈವ ನಟಿಸಿರೋ ಈ ಸಿನಿಮಾ ತನ್ನ ಟ್ರೈಲರ್ & ಸಾಂಗ್ಸ್ ನಿಂದ ಭರವಸೆ ಮೂಡಿಸಿತ್ತು. ಈ ಸಿನಿಮಾ ಔಟ್ ಅಂಡ್ ಔಟ್ ಹಳ್ಳಿ ಸೊಗಡಿನ ಕಥೆಯಾಗಿದೆ. ರಾಜ್ಯದೆಲ್ಲೆಡೆ ಮರಳು ಮಾಫಿಯಾ ನಡೆಯುತ್ತದೆ ಅನ್ನೋ ಸುದ್ದಿ ಕೇಳ್ತಾನೆ ಇರ್ತೀವಿ. ಇಂಥದ್ದೇ ಕಥೆಯನ್ನು ಕೊತ್ತಲವಾಡಿ ಒಳಗೊಂಡಿದೆ. ಕೊತ್ತಲವಾಡಿ ಹಳ್ಳಿ ಸುತ್ತ ಹಚ್ಚ ಹಸಿರ ಅರಣ್ಯ. ಇದರ ಮಧ್ಯೆ ಕಾವೇರಿ ನದಿ ಹರಿದು ಹೋಗುತ್ತದೆ. ಈ ನದಿಗೂ ಕೊತ್ತಲವಾಡಿ ಹಳ್ಳಿಯ ಜನರಿಗೂ ಒಂದು ಸಂಬಂಧವಿದೆ. ಅದು ಏನು ಅನ್ನೋದನ್ನು ನೀವು ಚಿತ್ರಮಂದಿರಗಳಲ್ಲೇ ನೋಡಬೇಕು.

ಪಕ್ಕಾ ಹಳ್ಳಿ ಹೈದನಾಗಿ ಪೃಥ್ವಿ ಅಂಬಾರ್​ ಪ್ರೇಕ್ಷಕರಿಗೆ ದರ್ಶನ ಕೊಟ್ಟಿದ್ದಾರೆ. ಅತ್ಯುತ್ತಮ ಅಭಿನಯದ ಜೊತೆಗೆ ಆ್ಯಕ್ಷನ್​​ನಿಂದಾಗಿ ಸಖತ್​ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಪೃಥ್ವಿ ಪ್ರೇಯಸಿಯಾಗಿ ಕಾವ್ಯ ಶೈವ ಹಳ್ಳಿ ಹುಡುಗಿ ಪಾತ್ರದಲ್ಲಿ ಮಿಂಚಿದ್ದಾರೆ. ಗುಜಾರಿ ಬಾಬು ಎಂಬ ಸಮಾಜ ಸೇವಕನ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ಅವರು ಕುತಂತ್ರಿಯಾಗಿ ಕೊತ್ತಲವಾಡಿ ಚಿತ್ರಪೂರ್ತಿ ಅವರಿಸಿಕೊಂಡಿದ್ದಾರೆ. ಉಳಿದಂತೆ ರಾಜೇಶ್ ನಟರಂಗ, ಅವಿನಾಶ್, ಬಲ ರಾಜ್ವಾಡಿ ಹಾಗೂ ರಘು ರಾಮನಕೊಪ್ಪ ತಮಗೆ ಕೊಟ್ಟ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಸದ್ಯ ಅದೇ ಭರವಸೆಯೊಂದಿಗೆ ಚಿತ್ರ ನೋಡಿದ ಪ್ರೇಕ್ಷಕರು ಏನಂದ್ರು..? ಪ್ರೇಕ್ಷಕರ ರೆಸ್ಪಾನ್ಸ್ ನೋಡಿ ಚಿತ್ರತಂಡದವರು ಏನಂದ್ರು. ನೋಡೋಣ ಬನ್ನಿ.

24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
Read more