ಹರಿಕಥೆ ಅಲ್ಲ ಗಿರಿಕಥೆ: ಎದುರಾದ ಸವಾಲುಗಳ ಬಗ್ಗೆ ಸಂದೇಶ್‌ ನಾಗರಾಜ್‌ ಮಾತು

Jun 18, 2022, 2:58 PM IST

ಸ್ಯಾಂಡಲ್‌ವುಡ್‌ನ ನಿರ್ದೇಶಕ, ನಟ ರಿಷಬ್ ಶೆಟ್ಟಿ ಸದ್ಯ ‘ಹರಿಕಥೆ ಅಲ್ಲ ಗಿರಿಕಥೆ’ ಸಿನಿಮಾದ ರಿಲೀಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಚಿತ್ರದ ಪ್ರಮೋಷನ್ ಕೆಲಸಗಳಲ್ಲಿ ಚಿತ್ರತಂಡ ತೊಡಗಿದ್ದು, ನಿರ್ಮಾಪಕ  ಸಂದೇಶ್ ನಾಗರಾಜ್ ಸಿನಿಮಾ ಬಗ್ಗೆ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾರೆ. ಕೋವಿಡ್‌ಗೂ ಮೊದಲು 4 ತಿಂಗಳ ಹಿಂದೆ ಚಿತ್ರದ ಶೂಟಿಂಗ್ ಶುರು ಮಾಡಿದ್ವಿ. ಕೋವಿಡ್ ಬಂದ ನಂತರ 3 ತಿಂಗಳು ಚಿತ್ರೀಕರಣ ನಿಲ್ಲಿಸಿದೆವು. ಅದಾದ ಮೇಲೆ ನಾವು 3 ತಿಂಗಳು ಶೂಟಿಂಗ್‌ಗೆ ಬ್ರೇಕ್ ಹಾಕಿದ್ವಿ. ಅನಂತರ ಚಿತ್ರದ ಚಿತ್ರೀಕರಣವನ್ನು ಮಾಡಬೇಕೋ? ಬೇಡವೋ? ಎಂಬ ಗೊಂದಲದಲ್ಲೇ ಹೆದರಿಕೊಂಡು ಶೂಟಿಂಗ್ ಮಾಡಿದೆವು. ಬಳಿಕ ರಾಜಾರೋಷವಾಗಿ ಚಿತ್ರದ ಚಿತ್ರೀಕರಣವನ್ನು ಮಾಡಿ ಮುಗಿಸಿದೆವು ಎಂದು ಸಂದೇಶ್ ನಾಗರಾಜ್ ತಿಳಿಸಿದ್ದಾರೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies