ದರ್ಶನ್​ ನಂಬಿ ಹಣ ಕೊಟ್ಟವರು ಹೈರಾಣ: ಬಡ್ಡಿ ದುಡ್ಡು ಕಟ್ಟುವ ಸಂಕಷ್ಟದಲ್ಲಿ ದಚ್ಚು ನಿರ್ಮಾಪಕರು.!

ದರ್ಶನ್​ ನಂಬಿ ಹಣ ಕೊಟ್ಟವರು ಹೈರಾಣ: ಬಡ್ಡಿ ದುಡ್ಡು ಕಟ್ಟುವ ಸಂಕಷ್ಟದಲ್ಲಿ ದಚ್ಚು ನಿರ್ಮಾಪಕರು.!

Published : Sep 03, 2024, 12:03 PM IST

ಜೈಲು ಹಕ್ಕಿ ದರ್ಶನ್ ಬಳ್ಳಾರಿ ದಾಸನಾಗಿ ನಾಲ್ಕು ದಿನ ಆಯ್ತು. ದರ್ಶನ್ ಜೈಲು ಸೇರಿ 80 ದಿನ ಆಗಿದೆ. ದಾಸನ ಭವಿಷ್ಯ ಬರೆದಿರೋ ಚಾರ್ಜ್​ ಶೀಟ್​ ಸಲ್ಲಿಕೆ ಇನ್ನೇನು ಮೂರ್ನಾಲು ದಿನದಲ್ಲಾಗುತ್ತೆ. ಇದೀಗ ದಚ್ಚು ನಂಬಿ ಕೋಟಿ ಕೋಟಿ ಸುರಿದವರೆಲ್ಲಾ ಕಂಗಾಲಾಗಿದ್ದಾರೆ. 
 

ಜೈಲು ಹಕ್ಕಿ ದರ್ಶನ್ ಬಳ್ಳಾರಿ ದಾಸನಾಗಿ ನಾಲ್ಕು ದಿನ ಆಯ್ತು. ದರ್ಶನ್ ಜೈಲು ಸೇರಿ 80 ದಿನ ಆಗಿದೆ. ದಾಸನ ಭವಿಷ್ಯ ಬರೆದಿರೋ ಚಾರ್ಜ್​ ಶೀಟ್​ ಸಲ್ಲಿಕೆ ಇನ್ನೇನು ಮೂರ್ನಾಲು ದಿನದಲ್ಲಾಗುತ್ತೆ. ಇದೀಗ ದಚ್ಚು ನಂಬಿ ಕೋಟಿ ಕೋಟಿ ಸುರಿದವರೆಲ್ಲಾ ಕಂಗಾಲಾಗಿದ್ದಾರೆ. ಬಡ್ಡಿ ಕಟ್ಟಲಾಗದೇ ಒದ್ದಾಡುತ್ತಿದ್ದಾರೆ. ಈ ಬಗ್ಗೆ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ. ಒಂದು ಕೊಲೆ ನಟ ದರ್ಶನ್​ ಮತ್ತವರನ್ನ ನಂಬಿ ಕೂತಿದ್ದವರನ್ನ ಹೇಗೆಲ್ಲಾ ಸಂಕಷ್ಟಕ್ಕೆ ಸಿಲುಕಿಸಿದೆ ಅನ್ನೋದಕ್ಕೆ ಇದಕ್ಕಿಂತ ಬೆಸ್ಟ್​ ಎಕ್ಸಾಂಪಲ್ ಮತ್ತೊಂದಿಲ್ಲ. ಜೈಲು ಸೇರೋ ಮುಂಚೆ ದಚ್ಚು ಓಡೋ ಕುದುರೆ. ರೇಸ್​​ನಲ್ಲಿ ಕುದುರೆ ಮೇಲೆ ಬಾಜಿ ಕಟ್ಟುತ್ತಾರಲ್ಲ ಅದೇ ತರ ದರ್ಶನ್​ ನಂಬಿ ಹಲವು ನಿರ್ಮಾಪಕರು ಕೋಟಿ ಕೋಟಿ ಸುರಿದಿದ್ರು. ಅವರೆಲ್ಲ ಈಗ ಹೈರಾಣಾಗಿದ್ದಾರೆ. 

ಯಾಕಂದ್ರೆ ಬಡ್ಡಿ ಕಟ್ಟಿ ಕಟ್ಟಿ ಆ ನಿರ್ಮಾಪಕರೆಲ್ಲಾ ತಂಡಾ ಹೊಡೆದಿದ್ದಾರೆ. ಸಾಮಾನ್ಯವಾಗಿ ಸಿನಿಮಾಗಳು ಆಗೋದೇ ಬಡ್ಡಿಗೆ ತಂಡ ಹಣದಿಂದ. ಇನ್ನು ದರ್ಶನ್​ ಕಾಲ್​ ಶೀಟ್ ನಿರ್ಮಾಪಕನಿಗೆ ಸಿಕ್ತು ಅಂದ್ರೆ ಮುಗೀತು. ದಚ್ಚು ಓಡೋ ಕುದುರೆ ಅಂತ ಗೊತ್ತಿರೋ ಎಲ್ಲರು ಆ ಸಿನಿಮಾ ನಿರ್ಮಾಪಕನಿಗೆ ಬಣ್ಣಿಗೆ ಹಣ ಕೊಡೋದಕ್ಕೆ ಯೋಚ್ನೆ ಮಾಡಲ್ಲ. ಯಾಕಂದ್ರೆ ದರ್ಶನ್ ಸಿನಿಮಾ ಲಾಸ್ ಆಗಲ್ಲ ಹಣ ವಾಪಸ್ ಬರುತ್ತೆ ಅನ್ನೋ ನಂಬಿಕೆ. ಆದ್ರೆ ಈಗ ದಚ್ಚು ಜೈಲು ಸೇರಿದ್ಮೇಲೆ ಬಡ್ಡಿಗೆ ದುಡ್ಡು ತಂದು ದಾಸನ ಕೈಗಿಟ್ಟವರೆಲ್ಲಾ ಕಂಗಾಲಾಗಿದ್ದಾರೆ. ಚಾರ್ಜ್ ಶೀಟ್ ಸಲ್ಲಿಕೆಗೆ ಸಿದ್ಧತೆ ಆಗಿದೆ. ದರ್ಶನ್ ಭವಿಷ್ಯ ಮುಂದೇನಾಗುತ್ತೋ..? 

ದಚ್ಚು ಹೊರ ಬರುತ್ತಾರೋ ಇಲ್ಲವೋ..? ಅನ್ನೋ ಟೆನ್ಷನ್ ಒಂದ್ ಕಡೆ ಆದ್ರೆ,  ಬಡ್ಡಿ ದುಡ್ಡುನ್ನ ಕಟ್ಟಲಾಗದೇ ಒದ್ದಾಡುತ್ತಿದ್ದಾರೆ. ದರ್ಶನ್ ವರ್ಷಕ್ಕೆ ನುರಾರು ಕೋಟಿ ಬ್ಯುಸಿನೇಸ್ ಮಾಡುತ್ತುದ್ದ ಸ್ಟಾರ್. ಹಾಗಾಗಿನೆ ನಿರ್ಮಾಪಕರಿಗೆ ಸಿನಿಮಾದಲ್ಲಿ ದರ್ಶನ್ ಹೀರೊ ಅಂದರೆ, ನಿರಾಳ. ಯಾಕಂದರೆ, ಸಿನಿಮಾ ಚೆನ್ನಾಗಿ ಮಾಡಿದರೆ, ಥಿಯೇಟರ್ನಲ್ಲಿ ಭರ್ಜರಿ ಕಲೆಕ್ಷನ್ ಆಗುತ್ತೆ ಅನ್ನೋದು ಅವರಿಗೂ ಗೊತ್ತಿದೆ. ರಾಬರ್ಟ್, ಕಾಟೇರ ಈ ಎರಡು ಸಿನಿಮಾಗಳು ಸ್ಯಾಂಡಲ್ವುಡ್ ಬಾಕ್ಸಾಫೀಸ್ನಲ್ಲಿ ಹೊಸ ದಾಖಲೆಯನ್ನೇ ಬರೆದಿವೆ. ಇಲ್ಲಿಂದ ದರ್ಶನ್ ಸಿನಿಮಾಗಳಿಗೆ ಹೂಡಿಕೆ ಮಾಡುವ ಬಜೆಟ್ನಲ್ಲೂ ಏರಿಕೆಯಾಗಿದೆ. ಹಾಗೇ ದರ್ಶನ್ ಸಂಭಾವನೆ ಕೂಡ ಹೆಚ್ಚಾಗಿದೆ. ವರದಿ ಪ್ರಕಾರ, ದರ್ಶನ್ ಡೆವಿಲ್ ಸಿನಿಮಾಗೆ ಸುಮಾರು 22 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ.

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
Read more