ತೋತಾಪುರಿ; ಚರ್ಚೆಗೆ ಗ್ರಾಸವಾದ ಜಗ್ಗೇಶ್ ಸಿನಿಮಾದ ಈ ಒಂದು ದೃಶ್ಯ

Oct 4, 2022, 1:25 PM IST

ನವರಸ ನಾಯಕ ಜಗ್ಗೇಶ್ ನಟನೆಯ ತೋತಾಪುರಿ ಸಿನಿಮಾ ರಿಲೀಸ್ ಆಗಿದೆ. ಸೆಪ್ಟಂಬರ್ 30ರಂದು ರಿಲೀಸ್ ಆಗಿರುವ ತೋತಾಪುರಿ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೀಗ ಸಿನಿಮಾ ಒಂದು ದೃಶ್ಯ ಚರ್ಚೆಗೆ ಗ್ರಾಸವಾಗಿದೆ. ಜಗ್ಗೇಶ್ ಮತ್ತು ಅದಿತಿ ಪ್ರಭುದೇವ ನಡುವಿನ ಸಂಭಾಷಣೆಯ ದೃಶ್ಯ ಅದಾಗಿದೆ. ನಟ ಜಗ್ಗೇಶ್, ಅದಿತಿ ಬಳಿ ಶ್ರೀರಾಮನಿಗೆ ಮಂದಿರ ಇಷ್ಟನಾ ಅಥವಾ ಮಳೆ ಇಷ್ಟನಾ ಎಂದು ಕೇಳುತ್ತಾರೆ. ಅದಕ್ಕೆ ಅದಿತಿ ಮಳೆ ಎಂದು ಹೇಳುತ್ತಾರೆ. ಬಳಿಕ ರಾಮನ ಬಗ್ಗೆ ವಿವರಣೆ ನೀಡಿದರು. ಈ ವೀಡಿಯೋ ಈಗ ವೈರಲ್ ಆಗಿದೆ.