ಅಣ್ಣನಿಗೆ ಯಾರೂ ಏನೂ ಮಾಡಕ್ಕಾಗಲ್ಲ: ದರ್ಶನ್ ಪರ ದಿನಕರ್ ತೂಗುದೀಪ ಬ್ಯಾಟಿಂಗ್

Oct 7, 2024, 12:53 PM IST

ದರ್ಶನ್ ಜೈಲು ಸೇರಿದಾಗಿನಿಂದಲೂ ಅವ್ರ ಸೋದರ ದಿನಕರ್ ತೂಗುದೀಪ , ಅಣ್ಣನ ಬೆಂಬಲಕ್ಕೆ ನಿಂತಿದ್ದಾರೆ. ಅತ್ತಿಗೆ ಜೊತೆಗೆ ಹೋಗಿ ಜೈಲಿನಲ್ಲಿ ದರ್ಶನ್ ಭೇಟಿ ಮಾಡಿಬಂದಿರೋ ದಿನಕರ್ , ದರ್ಶನ್​ಗೆ ಬೇಲ್ ಕೊಡಿಸೋದಕ್ಕೂ ಅವಿರತ ಪ್ರಯತ್ನ ಪಡ್ತಾ ಇದ್ದಾರೆ. ಈ ನಡುವೆ ದಿನಕರ್ ನಿರ್ದೇಶನದ ರಾಯಲ್ ಸಿನಿಮಾದ ಪ್ರಮೋಷನ್ಸ್​ ನಡೀತಾ ಇದ್ದು, ಪ್ರಚಾರದ ವೇಳೆ ದಿನಕರ್ , ಅಣ್ಣನ ಪರ ಬ್ಯಾಟ್ ಬೀಸಿದ್ದಾರೆ. ದರ್ಶನ್ ಮತ್ತವರ ಸೋದರ ದಿನಕರ್ ಸಂಬಂಧ ಎಂಥದ್ದು ಅಂತ ಇಡೀ ಸಿನಿ ಇಂಡಸ್ಟ್ರಿಗೆ ಗೊತ್ತಿದೆ. ದಿನಕರ್ ಚಿತ್ರರಂಗದಲ್ಲಿ ನೆಲೆನಿಲ್ಲೋದ್ರಲ್ಲಿ ದರ್ಶನ್ ಸಹಾಯ ತುಂಬಾನೇ ಇದೆ.  ದರ್ಶನ್​ಗೆ ಹೋಲಿಸಿದ್ರೆ ದಿನಕರ್ ಸಿಕ್ಕಾಪಟ್ಟೆ ಸೈಲೆಂಟ್ ವ್ಯಕ್ತಿ. 

ತಾನಾಯ್ತು ತನ್ನ ಕೆಲಸವಾಯ್ತು ಅಂದುಕೊಂಡು ವಿವಾದಗಳಿಂದ ದೂರ ಇರೋ ವ್ಯಕ್ತಿತ್ವ ಅವರದ್ದು. ಇಂಥಾ ದಿನಕರ್​ಗೆ ಅಣ್ಣನ ಕೃತ್ಯ ಶಾಕ್ ತಂದಿರೋದು ಸುಳ್ಳಲ್ಲ. ದರ್ಶನ್ ಜೈಲುಪಾಲಾದ ಮೇಲೆ ದಿನಕರ್ ಹಲವು ಬಾರಿ ಜೈಲಿಗೆ ಹಗಿ ಅಣ್ಣನನ್ನ ಭೇಟಿ ಮಾಡಿ ಬಂದಿದ್ದಾರೆ. ದರ್ಶನ್​ಗೆ ಧೈರ್ಯ ತುಂಬಿ ಬಂದಿದ್ದಾರೆ. ಈ ನಡುವೆ ದಿನಕರ್ ನಿರ್ದೇಶನದ ರಾಯಲ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಜಯಣ್ಣ ಕಂಬೈನ್ಸ್ ನಿರ್ಮಸಿರೋ ಈ ಸಿನಿಮಾದಲ್ಲಿ ವಿರಾಟ್ ನಾಯಕನಾಗಿ ಕಾಣಿಸಿಕೊಂಡಿದ್ದು, ಸಂಜನಾ ಅನಂದ್ ನಾಯಕಿಯಾಗಿ ಮಿಂಚಿದ್ದಾರೆ. ಇತ್ತೀಚಿಗೆ ತುಮಕೂರಿನಲ್ಲಿ ರಾಯಲ್ ಸಿನಿಮಾದ ಎರಡನೇ ಹಾಡಿನ ಬಿಡುಗಡೆ ಸಮಾರಂಭ ನಡೆದಿದೆ. ಈ ವೇಳೆ ಇವೆಂಟ್​​ನಲ್ಲಿ ದಿನಕರ್ ಮಾತನಾಡ್ತಾ ವೇಳೆ ದರ್ಶನ್ ಫ್ಯಾನ್ಸ್, ಡಿ ಬಾಸ್ ಡಿ ಬಾಸ್ ಅಂತ ಕೂಗಿದ್ದಾರೆ. 

ಇದಕ್ಕೆ ರಿಯ್ಯಾಕ್ಟ್ ಮಾಡಿರೋ ದಿನಕರ್, ನಮ್ಮ ಕುಟುಂಬದ ಮೇಲಿನ ಅಭಿಮಾನಕ್ಕೆ ಶರಣು. ನಿಮ್ಮ ಬೆಂಬಲ ಇರೋವರೆಗೂ ಅಣ್ಣನಿಗೆ ಏನೂ ಮಾಡಕ್ಕಾಗಲ್ಲ ಎಂದಿದ್ದಾರೆ. ದಿನಕರ್ ಆಡಿದ ಈ ಮಾತುಗಳ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೀತಾ ಇದೆ. ಕೇಸ್ ಮುಗಿಯೋವರೆಗೂ ಆರೋಪಿ ಅಣ್ಣನ ಪರ ದಿನಕರ್ ನಿಂತುಕೊಳ್ಳುವ ಅಗತ್ಯ ಇರಲಿಲ್ಲ ಅಂತ ಕೆಲವರು ಹೇಳಿದ್ರೆ, ಮತ್ತೆ ಕೆಲವರು ದಿನಕರ್ ಪರ ನಿಂತಿದ್ದಾರೆ. ಇನ್ನೂ ಇಮ್ಮ ನಿರ್ದೇಶನದ ರಾಯಲ್ ಸಿನಿಮಾ ಬಗ್ಗೆಯೂ ಮಾತನಾಡಿರೋ ದಿನಕರ್, ಈ ಸಿನಿಮಾಗೂ ನಿಮ್ಮ ಬೆಂಬಲ ಇರಲಿ ಅಂದಿದ್ದಾರೆ. ಈ ಸಿನಿಮಾದ ‘ಅಣ್ಣಂಗೆ ಟಾಂಗ್ ಕೊಡ್ತಿಯಲ್ಲೇ’ ಅನ್ನೋ ಸಾಂಗ್ ರಿಲೀಸ್ ಆಗಿದ್ದು ಸಖತ್ ಸದ್ದು ಮಾಡ್ತಾ ಇದೆ.