ದರ್ಶನ್ ನೆನೆದು ಬೇಸರ ಹೊರ ಹಾಕಿದ ಅಭಿನಯ ಚಕ್ರವರ್ತಿ: ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ಕಿಚ್ಚ ಸುದೀಪ್​!

ದರ್ಶನ್ ನೆನೆದು ಬೇಸರ ಹೊರ ಹಾಕಿದ ಅಭಿನಯ ಚಕ್ರವರ್ತಿ: ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ಕಿಚ್ಚ ಸುದೀಪ್​!

Published : Sep 01, 2024, 12:55 PM IST

ಕಿಚ್ಚ ತನ್ನ ಮಾಜಿ ಸ್ನೇಹಿತ ದರ್ಶನ್ ಬಗ್ಗೆ ಬೇಸರದ ಮಾತನಾಡಿದ್ದು. ದರ್ಶನ್ ನಾನು ಮಾತೇ ಆಡುತ್ತಿಲ್ಲ. ನಾವಿಬ್ಬರು ಒಟ್ಟಿಗೆ ಸೇರಿಲ್ಲ. ಸೂರ್ಯ- ಚಂದ್ರ ಬೆಳಗ್ಗೆ-ರಾತ್ರಿ ಇದ್ರೆನೆ ಚೆಂದ. ಒಟ್ಟಿಗೆ ಬಂದ್ರೆ ಸಮಸ್ಯೆ. ಹಾಗಂತ ಸಮಾಜಕ್ಕೆ ಹೆದರಿ ಇರಲ್ಲ.

ಸ್ಯಾಂಡಲ್ ವುಡ್​ ಮಂದಿಗೆ ಸ್ನೇಹಿತರು ಅಂದ್ರೆ ನೆನಪಾಗುತ್ತಿದ್ದದ್ದೇ ನಟ ಕಿಚ್ಚ ಸುದೀಪ್ ಹಾಗು ದರ್ಶನ್. ಆದ್ರೆ ಇವರಿಬ್ಬ ಸ್ನೇಹ ಕಿತ್ತು ಹೋಗಿ ವರ್ಷಗಳೇ ಉರುಳಿವೆ. ಆದ್ರೂ ದಚ್ಚು ನನ್ನ ಸ್ನೇಹಿತನೇ ಅವರಿಗೆ ಒಳ್ಳೆಯದಾಗ್ಲಿ ಅಂತ ಸುದೀಪ್ ಹೇಳ್ತಾನೆ ಇದ್ದಾರೆ. ಇದೀಗ ದಿಢೀರ್ ಸುದ್ದಿಗೋಷ್ಟಿ ಮಾಡಿದ್ದ ಬಾದ್​ ಷಾ ಸುದೀಪ್​, ಜೈಲಲ್ಲಿರೋ ದಚ್ಚು ಬಗ್ಗೆ ಮನದ ಮಾತನಾಡಿದ್ದಾರೆ. ಹಾಗಾದ್ರೆ ಸುದೀಪ್ ಏನಂದ್ರು.? ಇಲ್ಲಿದೆ ನೋಡಿ ಫುಲ್ ಡಿಟೈಲ್ಸ್. ಸ್ನೇಹ ಎಂಬ ಸುಂಧರ ಸಂಬಂಧಕ್ಕೆ ನಾನು ನನ್ನದು ಅನ್ನೋ ಯಾವ್ದೇ ಸ್ವಾರ್ಥ ಇರಲ್ಲ. ಕಷ್ಟ ಅಂತ ಬಂದಾಗ ರಕ್ತ ಸಂಬಂಧಿಕರಿಗಿಂತ ಮೊದಲು ಬರೋದೇ ಸ್ನೇಹಿತರು. ಖುಷಿ ಇದ್ದಾಗೆ ಮತ್ತಷ್ಟು ಖುಷಿ ಕೊಡೋದೇ ಸ್ನೇಹಿತರು. ಅಂತಹ ಸ್ನೇಹಿತರು ನಮ್ ಸ್ಯಾಂಡಲ್​ವುಡ್​​ನಲ್ಲೂ ಇದ್ರು. 

ಅವರೇ ಭಾರತೀಯ ಚಿತ್ರರಂಗದ ಆರಡಿ ಕಟೌಟ್ ಕಿಚ್ಚ ಸುದೀಪ್ ಹಾಗು ಸ್ಯಾಂಡಲ್​ವುಡ್​ನ ಆರಡಿ ಕಟೌಟ್ ನಟ ದರ್ಶನ್. ಕಿಚ್ಚ ಸುದೀಪ್ ದಿಢೀರ್ ಅಂತ ಸುದ್ದಿಗೋಷ್ಟಿ ಮಾಡಿದ್ರು. ಕಿಚ್ಚನ ಈ ಮಾಧ್ಯಮ ಗೋಷ್ಠಿ ಸಾಕಸ್ಟು ಕುತೂಹಲ ಮೂಡಿಸಿತ್ತು. ಇಲ್ಲಿ ಸಿಕ್ಕಾಪಟ್ಟೆ ಹೈಲೆಟ್ ಆಗಿದ್ದು, ಕಿಚ್ಚ ತನ್ನ ಮಾಜಿ ಸ್ನೇಹಿತ ದರ್ಶನ್ ಬಗ್ಗೆ ಬೇಸರದ ಮಾತನಾಡಿದ್ದು. ದರ್ಶನ್ ನಾನು ಮಾತೇ ಆಡುತ್ತಿಲ್ಲ. ನಾವಿಬ್ಬರು ಒಟ್ಟಿಗೆ ಸೇರಿಲ್ಲ. ಸೂರ್ಯ- ಚಂದ್ರ ಬೆಳಗ್ಗೆ-ರಾತ್ರಿ ಇದ್ರೆನೆ ಚೆಂದ. ಒಟ್ಟಿಗೆ ಬಂದ್ರೆ ಸಮಸ್ಯೆ. ಹಾಗಂತ ಸಮಾಜಕ್ಕೆ ಹೆದರಿ ಇರಲ್ಲ. ಮನಸ್ಸಿಗೆ ಬಂದ್ರೆ ನಾನು ದರ್ಶನ್​ ಜೊತೆ ಮಾತಾಡ್ತೀನಿ ಎಂದಿದ್ದಾರೆ ಸುದೀಪ್. ಸೆಪ್ಟೆಂಬರ್​ 2ಕ್ಕೆ ಹೆಬ್ಬುಲಿ ಕಿಚ್ಚನ ಬರ್ತ್​​ಡೇ.. ಆ ದಿನ ನೆಚ್ಚಿನ ನಟನ ಭೇಟಿಗೆ ಜೆಪಿ ನಗರದಲ್ಲಿರೋ ಸುದೀಪ್​ ನಿವಾಸದ ಮುಂದೆ ಅಭಿಮಾನಿಗಳ ದೊಡ್ಡ ಸಾಗರವೇ ಬಂದು ಸೇರಿತ್ತೆ. 

ಆದ್ರೆ ಈ ಭಾರಿ ಕಿಚ್ಚ ಮನೆ ಮುಂದೆ ಫ್ಯಾನ್ಸ್​ ಜೊತೆ ಸೆಲೆಬ್ರೇಷನ್ ಮಾಡುತ್ತಿಲ್ಲ. ಅದಕ್ಕಾಗಿ ಒಂದು ಜಾಗ ಫಿಕ್ಸ್ ಮಾಡಿದ್ದಾರೆ ಬಾದ್ ಷಾ. ಸೆಪ್ಟೆಂಬರ್​ 2ರಂದು ಬೆಳ್ಳಗೆ 10 ಗಂಟೆಯಿಂದ 12ರವರಗೆ ಜಯನಗರದ MES ಗ್ರೌಂಡ್​ನಲ್ಲಿ ಸುದೀಪ್​ ಫ್ಯಾನ್ಸ್ ಜೊತೆ ಬರ್ತ್​ಡೇ ಸೆಲೆಬ್ರೆಷನ್ ಮಾಡುತ್ತಿದ್ದಾರೆ. ಕಳೆದ ವರ್ಷ ಸುದೀಪ್ ಹುಟ್ಟುಹಬ್ಬ ಮಾಡಿಕೊಂಡಾಗ ಅಭಿಮಾನಿಗಳ ನೂಕು ನುಗ್ಗಲಿನಿಂದ ಭಾರಿ ತೊಂದರೆ ಆಗಿತ್ತು. ಹೀಗಾಗಿ ನನ್ನ ಬರ್ತ್​ ಡೇಯಿಂದ ಮತ್ತೊಬ್ಬರಿಗೆ ತೊಂದರೆ ಆಗವುದು ಬೇಡ. ಯಾವುದೇ ಗಲಾಟೆ ಇಲ್ಲದೇ ಬರ್ತ್​ ಡೇ ಸೆಲೆಬ್ರೇಟ್ ಮಾಡೋಣ. ನನಗೆ ಅಂತ ಕೇಕ್ ತರೋದು ಬೇಡ. ಅದರ ಬಲದು ಬೇರೆಯವರಿಗೆ ಊಟ ಹಾಕಿಸಿ ಎಂದಿದ್ದಾರೆ ಸುದೀಪ್. ಅಷ್ಟೆ ಅಲ್ಲ ಹುಟ್ಟುಹಬ್ಬದ ದಿನ ಕಿಚ್ಚನ ಮ್ಯಾಕ್ಸ್​ ಅಪ್ಡೇಟ್​ ಕೂಡ ಕೊಡಲಿದ್ದಾರೆ. ಒಟ್ನಲ್ಲಿ ಈ ಭಾರಿ ಬಾದ್ ಷಾ ಫ್ಯಾನ್ಸ್​ ಭೇಟಿಗೆ ಸಖತ್ ಪ್ಲಾನ್ ಮಾಡಿದ್ದಾರೆ.

22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:23Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
04:33Cine Express: '8' ಗ್ಲಿಂಪ್ಸ್‌ನಿಂದ 'ಊರಬ್ಬ' ಟ್ರೇಲರ್‌ವರೆಗೆ: ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳ ಹವಾ
04:30Cine Express: ಈ ವಾರ ಸಿನಿ ಇಂಡಸ್ಟ್ರಿಯಲ್ಲಿ ಹೆಚ್ಚು ಚರ್ಚೆಯಾದ 5 ದೊಡ್ಡ ಅಪ್‌ಡೇಟ್‌ಗಳು ಯಾವುವು?
04:09ಅಪ್ಪನಿಗಾಗಿ ಬಂದ ಹೊಸ ಹಾಡು, ಕಾನ್ಸ್‌ನಲ್ಲಿ ಮೆಚ್ಚುಗೆ ಪಡೆದ ಚಿತ್ರದ ಟ್ರೇಲರ್: ಸಿನಿರಂಗದಲ್ಲಿ ಏನಾಗುತ್ತಿದೆ?
Read more