ಸಲಾರ್‌ನಲ್ಲಿ ಕೆಜಿಎಫ್ ತಾತ! ಹಿರಿಯ ನಟ ಕೃಷ್ಣಾಜಿ ರಾವ್‌ಗೆ ಮತ್ತೊಂದ್ ದೊಡ್ಡ ಚಾನ್ಸ್!

Jun 13, 2022, 5:11 PM IST

ಹಿರಿಯ ನಟ ಕೃಷ್ಣಾಜಿ ರಾವ್ (Krishnaji Rao) ಎಂದರೆ ನಿಮಗೆ ಗೊತ್ತಾಗಲಿಕ್ಕಿಲ್ಲ. ಆದರೆ 'ಕೆಜಿಎಫ್' ತಾತ ಅಂದರೆ ತಕ್ಷಣವೇ ತಿಳಿಯುತ್ತೆ. ಅವರು ಅಷ್ಟು ಫೇಮಸ್. ಕೆಜಿಎಫ್ ಸಿನಿಮಾದಲ್ಲಿ ದೃಷ್ಟಿ ವಿಶೇಷಚೇತನ ಮುದುಕನಾಗಿ ಕಾಣಿಸಿಕೊಂಡು ಅದ್ಭುತ ನಟನೆ ಮಾಡಿ ಫೇಮಸ್ ಆಗಿದ್ದ ಹಿರಿಯ ನಟ ಕೃಷ್ಣಾಜಿ ರಾವ್‌ಗೆ ಈಗ ಮತ್ತೊಂದ್ ದೊಡ್ಡ ಚಾನ್ಸ್ ಅರಸಿ ಬಂದಿದೆ. ಅದು ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಕೃಷ್ಣಾಜಿ ರಾವ್ಗೆ ಒಲಿದು ಬಂದಿದ್ದು, ನಟ ಪ್ರಭಾಸ್ ಜೊತೆ ಕೃಷ್ಣಾಜಿ ರಾವ್ ತೆರೆ ಹಂಚಿಕೊಳ್ಳಲಿದ್ದಾರೆ. 

ಆ ವಿಷಯದಲ್ಲೂ ರಾಕಿಂಗ್ ಸ್ಟಾರ್ ಯಶ್ ನಂ-1

ಟಾಲಿವುಡ್ ನಟ ಅಲ್ಲು ಅರ್ಜುನ್ ಮೇಲೆ ಜಾಹೀರಾತಿನ ಮೂಲಕ ಜನರನ್ನು ತಪ್ಪು ದಾರಿಗೆಳೆಯುವ ಕೆಲಸ ಮಾಡಿದ್ದಾರೆ ಎಂಬ ಆರೋಪ ಬಂದಿದೆ. ಶಿಕ್ಷಣ ಸಂಸ್ಥೆಯೊಂದಕ್ಕೆ ಅಲ್ಲು ಅರ್ಜುನ್ ರಾಯಭಾರಿಯಾಗಿದ್ದು, ಆ ಸಂಸ್ಥೆ ಜಾಹೀರಾತಿನಲ್ಲಿ ವಿಧ್ಯಾರ್ಥಿಗಳನ್ನ ತಪ್ಪು ದಾರಿಗೆಳೆಯುವ ರೀತಿ ಜಾಹೀರಾತು ಮಾಡಿದ್ದಾರೆ ಅಂತ ಸಾಮಾಜಿಕ ಕಾರ್ಯಕರ್ತ ಕೋತಾ ಉಪೇಂದ್ರ ರೆಡ್ಡಿ ಆರೋಪ ಮಾಡಿದ್ದಾರೆ. ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಅಲ್ಲು ಅರ್ಜುನ್ ವಿರುದ್ಧ ಅಂಬರಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ.