Puneeth Rajkumar Fans: ಅಪ್ಪು ಕೋಟ್ಯಾಧಿಪತಿಯಿಂದ ಸ್ಫೂರ್ತಿ ಪಡೆದು ಅಣ್ಣ -ತಂಗಿ ಸಾಧನೆ!

Puneeth Rajkumar Fans: ಅಪ್ಪು ಕೋಟ್ಯಾಧಿಪತಿಯಿಂದ ಸ್ಫೂರ್ತಿ ಪಡೆದು ಅಣ್ಣ -ತಂಗಿ ಸಾಧನೆ!

Published : Jan 25, 2022, 01:28 PM IST

ಕನ್ನಡದ ಮನೆಯ ಮಗ ಪುನೀತ್ ರಾಜ್‌ಕುಮಾರ್ ಈಗ ನೆನಪು ಮಾತ್ರ. ಆದರೂ ಪುನೀತ್ ರಾಜ್‌ಕುಮಾರ್ ನಡೆಸಿಕೊಟ್ಟ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ನೋಡಿದ ಇಬ್ಬರು ಬಡ ಮಕ್ಕಳು ಅಪ್ಪುನ ಮಾತಿನಿಂದಾಗಿ ಸ್ಫೂರ್ತಿ ಪಡೆದು ಈಗ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ್ದಾರೆ. ಹೇಗೆ ? ಯಾರು ಆ ಮಕ್ಕಳು ಅಂತೀರಾ ಈ ವಿಡಿಯೋ ನೋಡಿ.

ಕೈಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನ  ದಾಖಲೆ ಪತ್ರ ಹಿಡಿದುಕೊಂಡು ನಿಂತಿರೋ ಈ ಇಬ್ಬರು ಮಕ್ಕಳು ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದವರು. ಅಣ್ಣ ಶಿವರಾಜ್ 4 ನೇ ಕ್ಲಾಸ್ ಓದುತ್ತಿದ್ದರೆ, ತಂಗಿ ಸಂಜನಾ 3ನೇ ಕ್ಲಾಸ್‌ನಲ್ಲಿ ಓದುತ್ತಿದ್ದಾಳೆ. ಈ ಪುಟಾಣಿಗಳು ಇಬ್ಬರು ತಮ್ಮ ವಯಸ್ಸಿಗೆ ಮೀರಿದ ಪ್ರತಿಭೆ ಪ್ರದರ್ಶನ ಮಾಡಿ 2022ರ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ್ದಾರೆ. ಅಪ್ಪು ಆರಾಧನೆ ಮಾಡೊ ಇವರಿಬ್ಬರಿಗೂ ಅಪ್ಪು ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಸ್ಪೂರ್ತಿಯಾಗಿತ್ತು. ಮಕ್ಕಳು ಸಾಮಾನ್ಯ ಜ್ಞಾನದ ಜೊತೆಗೆ ಈವರೆಗೆ ನಟ ಪುನೀತ್ ರಾಜ್ಕುಮಾರ್ ಅಭಿನಯದ ಎಲ್ಲಾ ಸಿನಿಮಾಗಳ ಹೆಸರುಗಳು ಸಹ ಪಟಪಟ ಅಂತ ಹೇಳಿಬಿಡುತ್ತಾರೆ. ಇಬ್ಬರು ಮಕ್ಕಳಿಗೆ ಯುವರತ್ನ ಅಪ್ಪುವಿನ ಕನ್ನಡದ ಕೋಟ್ಯಾಧಿಪತಿಯೇ ಸ್ಫೂರ್ತಿಯಾಗಿತ್ತು ಅಂತರೇ ಮಕ್ಕಳ ತಾಯಿ.

ಪವರ್ ಸ್ಟಾರ್ ಕೊನೇ ಚಿತ್ರ 'ಜೇಮ್ಸ್‌' ಶೂಟಿಂಗ್ ಕಂಪ್ಲೀಟ್‌

ಇನ್ನೂ ಶಿವರಾಜ್ ಹಾಗೂ ಸಂಜನಾ ತಲಾ 10 ಸಾವಿರಕ್ಕೂ ಹೆಚ್ಚು ಸಾಮಾನ್ಯ ಜ್ಞಾನ ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ ಇಂಥದ್ದೊಂದು ಅಪರೂಪದ ಸಾಧನೆ ಮಾಡಿದ್ದಾರೆ. ಕೊರೊನಾ ಹಿನ್ನೆಲೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಪತ್ರಗಳನ್ನು ಪೋಸ್ಟ್ ಮುಖಾಂತರ ಕಳುಹಿಸಲಾಗಿದೆ. ದುರದೃಷ್ಟವಶಾತ್ ಪುನೀತ್ ನಮ್ಮೊಂದಿಗಿಲ್ಲ..ಹೀಗಾಗಿ ನಟ ಶಿವಣ್ಣ ಅಥವಾ ರಾಘಣ್ಣ ಯಾರಾದ್ರೂ ಅಪ್ಪು ಅವರ ಸ್ಥಾನದಲ್ಲಿ ನಿಂತು ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಮಾಣ ಪತ್ರವನ್ನು ನಮಗೆ ಹಸ್ತಾಂತರಿಸಬೇಕು ಎನ್ನುವ ಬಯಕೆ ಮಕ್ಕಳದು.

05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
Read more