ಮನಸ್ತಾಪ ಇದ್ದಿದ್ದು ನಿಜ, ಮತ್ತೆ ದರ್ಶನ್ ಜೊತೆ ಸಿನಿಮಾ ಪಕ್ಕಾ: ಮುನಿಸು ಮರೆತ ದಿನಕರ್ ತೂಗುದೀಪ

ಮನಸ್ತಾಪ ಇದ್ದಿದ್ದು ನಿಜ, ಮತ್ತೆ ದರ್ಶನ್ ಜೊತೆ ಸಿನಿಮಾ ಪಕ್ಕಾ: ಮುನಿಸು ಮರೆತ ದಿನಕರ್ ತೂಗುದೀಪ

Published : Dec 29, 2024, 01:08 PM IST

ದರ್ಶನ್ ಸಕ್ಸಸ್​ ಅಲೆಯಲ್ಲಿ ತೇಲ್ತಾ ಇದ್ದ ಹೊತ್ತಲ್ಲಿ ಸಹೋದರ ದಿನಕರ್​ನ ಮರೆತೇ ಬಿಟ್ಟಿದ್ರು. ತೂಗುದೀಪ ಬ್ರದರ್ಸ್ ಪರಸ್ಪರ ಮಾತು ಬಿಟ್ಟು ದೂರ ದೂರವೇ ಉಳಿದಿದ್ರು. ಆದ್ರೆ ದಾಸ ಜೈಲು ಸೇರಿದ ಮೇಲೆ ಆತನ ಬೆಂಬಲಕ್ಕೆ ನಿಂತಿದ್ದೇ ಸೋದರ ದಿನಕರ್. 

ದರ್ಶನ್ ಸಕ್ಸಸ್​ ಅಲೆಯಲ್ಲಿ ತೇಲ್ತಾ ಇದ್ದ ಹೊತ್ತಲ್ಲಿ ಸಹೋದರ ದಿನಕರ್​ನ ಮರೆತೇ ಬಿಟ್ಟಿದ್ರು. ತೂಗುದೀಪ ಬ್ರದರ್ಸ್ ಪರಸ್ಪರ ಮಾತು ಬಿಟ್ಟು ದೂರ ದೂರವೇ ಉಳಿದಿದ್ರು. ಆದ್ರೆ ದಾಸ ಜೈಲು ಸೇರಿದ ಮೇಲೆ ಆತನ ಬೆಂಬಲಕ್ಕೆ ನಿಂತಿದ್ದೇ ಸೋದರ ದಿನಕರ್. ಸದ್ಯ ದರ್ಶನ್​ ಬೇಲ್​ ಶ್ಯೂರಿಟಿಗೆ ಸಹಿ ಹಾಕಿ ಜಾಮೀನು ಕೊಡಿಸಿರೋದು ಇದೇ ದಿನಕರ್.  ಮುನಿಸು ಮರೆತು, ದಾಸನ ಪರ ನಿಂತಿರೋ ದಿನಕರ್ ಇದೇ ಮೊದಲ ಬಾರಿಗೆ ತಮ್ಮ ಮತ್ತು ದರ್ಶನ್ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ದರ್ಶನ್ ಜೈಲು ಪಾಲಾದ ಅವರಿಗೆ ಒಂದು ವಿಷ್ಯ ಅರ್ಥವಾಯ್ತು. ಕಷ್ಟದಲ್ಲಿದ್ದಾಗ ಕೈ ಹಿಡಿಯೋದು ನಮ್ಮ ಮನೆಯವರೇ ಹೊರತು ಬೇರೆಯವರಲ್ಲ ಅನ್ನೋದು. ಅಸಲಿಗೆ ದರ್ಶನ್ 2011ರಲ್ಲಿ ಜೈಲು ಸೇರಿದ ಹೊತ್ತಲ್ಲಿ ಸೋದರ ದಿನಕರ್ ನಿರ್ದೇಶಿಸಿದ ಸಾರಥಿ ಸಿನಿಮಾ ತೆರೆಗೆ ಬಂದು ದರ್ಶನ್ ಲೈಫ್ ಬದಲಾಗಿತ್ತು. 

ಆದ್ರೆ ತನ್ನ ಬದುಕಿಗೆ ತಿರುವುಕೊಟ್ಟ ಸೋದರನನ್ನ ದರ್ಶನ್ ಮರೆತುಬಿಟ್ಟಿದ್ರು. ಇಬ್ಬರ ನಡುವೆ ಕೆಲ ಮನಸ್ತಾಪ ಬಂದು ಮಾತು ನಿಂತುಹೋಗಿದ್ವು. ಆದ್ರೆ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಅಂದರ್ ಆದಾಗ ಮತ್ತೆ ಅಣ್ಣನ ಪರ ನಿಂತಿದ್ದು ಇದೇ ದಿನಕರ್. ಸದ್ಯ ದರ್ಶನ್ ಬೇಲ್ ಮೇಲೆ ಆಚೆ ಬಂದಿದ್ದು ದರ್ಶನ್ ಜಾಮೀನಿಗೆ ಶ್ಯೂರಿಟಿ ಹಾಕಿರೋದೇ ದಿನಕರ್ ತೂಗುದೀಪ. ಹಳೆಯ ಮುನಿಸು ಮರೆತು ದರ್ಶನ್ ಬೆಂಬಲಕ್ಕೆ ನಿಂತಿದ್ದಾರೆ ದಿನಕರ್. ಇಂಥಾ ದಿನಕರ್ ಇದೇ ಮೊದಲ ಬಾರಿ ದರ್ಶನ್ ಬಗ್ಗೆ ಮಾತನಾಡಿದ್ದಾರೆ.   ಅಣ್ಣ ಮಾಡಿದ ಅವಮಾನ ಮರೆತು ಆತನ ಜೊತೆಗೆ ನಿಂತಿರೋ ದಿನಕರ್, ಮುಂದಿನ ದಿನಗಳಲ್ಲಿ ದರ್ಶನ್ ಜೊತೆಗೆ ಸಿನಿಮಾ ಕೂಡ ಮಾಡ್ತಿನಿ ಅಂದಿದ್ದಾರೆ. ಅಲ್ಲಿಗೆ ದಾಸನಿಗೆ ಇನ್ನಾದ್ರೂ ಸಂಬಂಧಗಳ ಬಗ್ಗೆ ಅರಿವು ಮೂಡುತ್ತಾ..? ತೂಗುದೀಪ ಫ್ಯಾಮಿಲಿಯಲ್ಲಿ ಎಲ್ಲವೂ ಸರಿಹೋಗುತ್ತಾ ಕಾದುನೋಡಬೇಕು.

05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
Read more