ದರ್ಶನ್ ಬೇಲ್​ ಭವಿಷ್ಯ ಸದ್ಯದಲ್ಲೇ ನಿರ್ಧಾರ: ಪವಿತ್ರಾ ಗೌಡ ಲಿಖಿತ ವಾದದಲ್ಲಿ ಏನಿದೆ?

ದರ್ಶನ್ ಬೇಲ್​ ಭವಿಷ್ಯ ಸದ್ಯದಲ್ಲೇ ನಿರ್ಧಾರ: ಪವಿತ್ರಾ ಗೌಡ ಲಿಖಿತ ವಾದದಲ್ಲಿ ಏನಿದೆ?

Published : Aug 07, 2025, 12:04 PM IST

ಪವಿತ್ರಾ ತನಗೆ ದರ್ಶನ್ ಬಿಟ್ರೆ ಉಳಿದ ಆರೋಪಿಗಳ ಪರಿಚಯವೇ ಇಲ್ಲ. ತನಗೆ ಮಗಳು ಮತ್ತು ವಯಸ್ಸಾದ ತಾಯಿಯನ್ನ ನೋಡಿಕೊಳ್ಳುವ ಜವಾಬ್ದಾರಿ ಇದ್ದು ಬೇಲ್ ರದ್ದು ಮಾಡಬೇಡಿ ಅಂತ ವಿನಂತಿಸಿಕೊಂಡಿದ್ದಾಳೆ.

ದರ್ಶನ್ & ಗ್ಯಾಂಗ್​ನ ಬೇಲ್ ಭವಿಷ್ಯ ನಿರ್ಧಾರವಾಗುವ ಸಮಯ ಬಂದಿದೆ. ಸುಪ್ರೀಂ ಕೋರ್ಟ್​ಗೆ ಡಿ ಗ್ಯಾಂಗ್ ಮತ್ತು ಸರ್ಕಾರದ ಪರ ಲಿಖಿತ ವಾದ ಸಲ್ಲಿಕೆಯಾಗಿದ್ದು ಇನ್ನೇನು ಅಂತಿಮ ತೀರ್ಪು ಬರೋದು ಮಾತ್ರ ಬಾಕಿ ಇದೆ. ಹಾಗಾದ್ರೆ ಏನಾಗಲಿದೆ ದಾಸನ ಬೇಲ್ ಭವಿಷ್ಯ.. ವಾಚ್ ದಿಸ್ ಸ್ಟೋರಿ. ರೇಣುಕಾಸ್ವಾಮಿ ಮರ್ಡರ್ ಕೇಸ್​​ನಲ್ಲಿ ದರ್ಶನ್ ಅಂಡ್​​ ಗ್ಯಾಂಗ್​ಗೆ ನೀಡಿರುವ ಬೇಲ್ ರದ್ದು ಮಾಡಬೇಕು ಅಂತ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಸರ್ಕಾರ ಮತ್ತು ದರ್ಶನ್​  ಗ್ಯಾಂಗ್​ಗೆ ಲಿಖಿತ ವಾದ ಸಲ್ಲಿಸೋಕೆ ಸುಪ್ರೀಂ ಕೋರ್ಟ್ ಸೂಚನೆ ಕೊಟ್ಟಿತ್ತು. ಇದೀಗ ಲಿಖಿತ ವಾದ ಕೋರ್ಟ್​ಗೆ ತಲುಪಿದ್ದು ಅತೀ ಶಿಘ್ರದಲ್ಲೇ ಅಂತಿಮ ತೀರ್ಪು ಹೊರಬೀಳಲಿದೆ.  ಹೌದು ಪೊಲೀಸ್ ತನಿಖೆಯ ಲೋಪಗಳನ್ನು ಉಲ್ಲೇಖಿಸಿ ದರ್ಶನ್ ಪರ ವಕೀಲರು ಲಿಖಿತ ವಾದವನ್ನ ಸಲ್ಲಿಸಿದ್ದಾರೆ. ಇನ್ನೂ ಪವಿತ್ರಾ ಗೌಡ ಪರವಾಗಿ ಪ್ರತ್ಯೇಕವಾಗಿ ವಾದಮಂಡಿಸಲಾಗಿದೆ.

ಹೌದು ಪವಿತ್ರಾ ತನಗೆ ದರ್ಶನ್ ಬಿಟ್ರೆ ಉಳಿದ ಆರೋಪಿಗಳ ಪರಿಚಯವೇ ಇಲ್ಲ. ತನಗೆ ಮಗಳು ಮತ್ತು ವಯಸ್ಸಾದ ತಾಯಿಯನ್ನ ನೋಡಿಕೊಳ್ಳುವ ಜವಾಬ್ದಾರಿ ಇದ್ದು ಬೇಲ್ ರದ್ದು ಮಾಡಬೇಡಿ ಅಂತ ವಿನಂತಿಸಿಕೊಂಡಿದ್ದಾಳೆ. ಆದ್ರೆ ಪೊಲೀಸರು ಕೂಡ ಈ ಕೊಲೆ ಆರೋಪಿಗಳ   ಬೇಲ್ ಯಾಕೆ ರದ್ದು ಮಾಡಬೇಕು ಅನ್ನೋದಕ್ಕೆ ಲಿಖಿತ ಕಾರಣಗಳನ್ನ ಕೊಟ್ಟಿದ್ದಾರೆ. ದರ್ಶನ್ ಮತ್ತು ಇತರ ಆರೋಪಿಗಳ ಬೇಲ್​ನ ಯಾಕೆ ರದ್ದು ಮಾಡಬೇಕು ಅನ್ನೋದನ್ನ ಲಿಖಿತ ರೂಪದಲ್ಲಿ ಸ್ಪಷ್ಟವಾಗಿ ವಿವರಿಸಿದ್ದಾರೆ ಪೊಲೀಸರು. ಸದ್ಯ ಎರಡೂ ಕಡೆಯ ವಾದವನ್ನ ಪಡೆದುಕೊಂಡಿರೋ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸೋದು ಮಾತ್ರ ಬಾಕಿ ಉಳಿದಿದೆ. ಹೌದು ಸುಪ್ರೀಂ ಕೋರ್ಟ್​ನಲ್ಲಿ ಲಿಖಿತ ವಾದ ಮಂಡನೆ ಆದ ಬೆನ್ನಲ್ಲೇ ದರ್ಶನ್ ಮೈಸೂರಿನ ಚಾಮುಂಡೇಶ್ವರಿ ದೇಗುಲಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ. ಬೇಲ್ ರದ್ದಾಗುವ ಭೀತಿಯಲ್ಲಿರೋ ದರ್ಶನ್ ‘ತನ್ನನ್ನ ದೇವರೇ ಕಾಪಾಡಬೇಕು’ ಅಂತ  ದೇವಸ್ಥಾನಗಳಿಗೆ ಅಲೀತಾ ಇದ್ದಾರೆ. ಆದ್ರೆ ನ್ಯಾಯದೇಗುಲ ಏನು ತೀರ್ಪು ಕೊಡುತ್ತೆ ಅನ್ನೋದರ ಮೇಲೆ ಡಿ ಗ್ಯಾಂಗ್ ಭವಿಷ್ಯ ನಿಂತುಕೊಂಡಿದೆ.

03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
Read more