ದರ್ಶನ್ ಬೇಲ್​ ಭವಿಷ್ಯ ಸದ್ಯದಲ್ಲೇ ನಿರ್ಧಾರ: ಪವಿತ್ರಾ ಗೌಡ ಲಿಖಿತ ವಾದದಲ್ಲಿ ಏನಿದೆ?

ದರ್ಶನ್ ಬೇಲ್​ ಭವಿಷ್ಯ ಸದ್ಯದಲ್ಲೇ ನಿರ್ಧಾರ: ಪವಿತ್ರಾ ಗೌಡ ಲಿಖಿತ ವಾದದಲ್ಲಿ ಏನಿದೆ?

Published : Aug 07, 2025, 12:04 PM IST

ಪವಿತ್ರಾ ತನಗೆ ದರ್ಶನ್ ಬಿಟ್ರೆ ಉಳಿದ ಆರೋಪಿಗಳ ಪರಿಚಯವೇ ಇಲ್ಲ. ತನಗೆ ಮಗಳು ಮತ್ತು ವಯಸ್ಸಾದ ತಾಯಿಯನ್ನ ನೋಡಿಕೊಳ್ಳುವ ಜವಾಬ್ದಾರಿ ಇದ್ದು ಬೇಲ್ ರದ್ದು ಮಾಡಬೇಡಿ ಅಂತ ವಿನಂತಿಸಿಕೊಂಡಿದ್ದಾಳೆ.

ದರ್ಶನ್ & ಗ್ಯಾಂಗ್​ನ ಬೇಲ್ ಭವಿಷ್ಯ ನಿರ್ಧಾರವಾಗುವ ಸಮಯ ಬಂದಿದೆ. ಸುಪ್ರೀಂ ಕೋರ್ಟ್​ಗೆ ಡಿ ಗ್ಯಾಂಗ್ ಮತ್ತು ಸರ್ಕಾರದ ಪರ ಲಿಖಿತ ವಾದ ಸಲ್ಲಿಕೆಯಾಗಿದ್ದು ಇನ್ನೇನು ಅಂತಿಮ ತೀರ್ಪು ಬರೋದು ಮಾತ್ರ ಬಾಕಿ ಇದೆ. ಹಾಗಾದ್ರೆ ಏನಾಗಲಿದೆ ದಾಸನ ಬೇಲ್ ಭವಿಷ್ಯ.. ವಾಚ್ ದಿಸ್ ಸ್ಟೋರಿ. ರೇಣುಕಾಸ್ವಾಮಿ ಮರ್ಡರ್ ಕೇಸ್​​ನಲ್ಲಿ ದರ್ಶನ್ ಅಂಡ್​​ ಗ್ಯಾಂಗ್​ಗೆ ನೀಡಿರುವ ಬೇಲ್ ರದ್ದು ಮಾಡಬೇಕು ಅಂತ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಸರ್ಕಾರ ಮತ್ತು ದರ್ಶನ್​  ಗ್ಯಾಂಗ್​ಗೆ ಲಿಖಿತ ವಾದ ಸಲ್ಲಿಸೋಕೆ ಸುಪ್ರೀಂ ಕೋರ್ಟ್ ಸೂಚನೆ ಕೊಟ್ಟಿತ್ತು. ಇದೀಗ ಲಿಖಿತ ವಾದ ಕೋರ್ಟ್​ಗೆ ತಲುಪಿದ್ದು ಅತೀ ಶಿಘ್ರದಲ್ಲೇ ಅಂತಿಮ ತೀರ್ಪು ಹೊರಬೀಳಲಿದೆ.  ಹೌದು ಪೊಲೀಸ್ ತನಿಖೆಯ ಲೋಪಗಳನ್ನು ಉಲ್ಲೇಖಿಸಿ ದರ್ಶನ್ ಪರ ವಕೀಲರು ಲಿಖಿತ ವಾದವನ್ನ ಸಲ್ಲಿಸಿದ್ದಾರೆ. ಇನ್ನೂ ಪವಿತ್ರಾ ಗೌಡ ಪರವಾಗಿ ಪ್ರತ್ಯೇಕವಾಗಿ ವಾದಮಂಡಿಸಲಾಗಿದೆ.

ಹೌದು ಪವಿತ್ರಾ ತನಗೆ ದರ್ಶನ್ ಬಿಟ್ರೆ ಉಳಿದ ಆರೋಪಿಗಳ ಪರಿಚಯವೇ ಇಲ್ಲ. ತನಗೆ ಮಗಳು ಮತ್ತು ವಯಸ್ಸಾದ ತಾಯಿಯನ್ನ ನೋಡಿಕೊಳ್ಳುವ ಜವಾಬ್ದಾರಿ ಇದ್ದು ಬೇಲ್ ರದ್ದು ಮಾಡಬೇಡಿ ಅಂತ ವಿನಂತಿಸಿಕೊಂಡಿದ್ದಾಳೆ. ಆದ್ರೆ ಪೊಲೀಸರು ಕೂಡ ಈ ಕೊಲೆ ಆರೋಪಿಗಳ   ಬೇಲ್ ಯಾಕೆ ರದ್ದು ಮಾಡಬೇಕು ಅನ್ನೋದಕ್ಕೆ ಲಿಖಿತ ಕಾರಣಗಳನ್ನ ಕೊಟ್ಟಿದ್ದಾರೆ. ದರ್ಶನ್ ಮತ್ತು ಇತರ ಆರೋಪಿಗಳ ಬೇಲ್​ನ ಯಾಕೆ ರದ್ದು ಮಾಡಬೇಕು ಅನ್ನೋದನ್ನ ಲಿಖಿತ ರೂಪದಲ್ಲಿ ಸ್ಪಷ್ಟವಾಗಿ ವಿವರಿಸಿದ್ದಾರೆ ಪೊಲೀಸರು. ಸದ್ಯ ಎರಡೂ ಕಡೆಯ ವಾದವನ್ನ ಪಡೆದುಕೊಂಡಿರೋ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸೋದು ಮಾತ್ರ ಬಾಕಿ ಉಳಿದಿದೆ. ಹೌದು ಸುಪ್ರೀಂ ಕೋರ್ಟ್​ನಲ್ಲಿ ಲಿಖಿತ ವಾದ ಮಂಡನೆ ಆದ ಬೆನ್ನಲ್ಲೇ ದರ್ಶನ್ ಮೈಸೂರಿನ ಚಾಮುಂಡೇಶ್ವರಿ ದೇಗುಲಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ. ಬೇಲ್ ರದ್ದಾಗುವ ಭೀತಿಯಲ್ಲಿರೋ ದರ್ಶನ್ ‘ತನ್ನನ್ನ ದೇವರೇ ಕಾಪಾಡಬೇಕು’ ಅಂತ  ದೇವಸ್ಥಾನಗಳಿಗೆ ಅಲೀತಾ ಇದ್ದಾರೆ. ಆದ್ರೆ ನ್ಯಾಯದೇಗುಲ ಏನು ತೀರ್ಪು ಕೊಡುತ್ತೆ ಅನ್ನೋದರ ಮೇಲೆ ಡಿ ಗ್ಯಾಂಗ್ ಭವಿಷ್ಯ ನಿಂತುಕೊಂಡಿದೆ.

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more