ಬೇಡರ ಕಣ್ಣಪ್ಪನ ಕಥೆಗೆ ಹೊಸ ರೂಪ ! ಇವನು ಶಿವಭಕ್ತ ಕಣ್ಣಪ್ಪ ಅಲ್ಲ, ಫೈಟರ್ ಕಣ್ಣಪ್ಪ!

ಬೇಡರ ಕಣ್ಣಪ್ಪನ ಕಥೆಗೆ ಹೊಸ ರೂಪ ! ಇವನು ಶಿವಭಕ್ತ ಕಣ್ಣಪ್ಪ ಅಲ್ಲ, ಫೈಟರ್ ಕಣ್ಣಪ್ಪ!

Published : Jun 27, 2025, 12:45 PM IST
ಡಾ. ರಾಜ್‌ಕುಮಾರ್ ಅವರ ಬೇಡರ ಕಣ್ಣಪ್ಪ ಚಿತ್ರದ ಮರುಕಲ್ಪನೆಯು ಶಿವಭಕ್ತ ಕಣ್ಣಪ್ಪನ ಕಥೆಯನ್ನು ಹೊಸ ತಲೆಮಾರಿಗೆ ಪರಿಚಯಿಸುತ್ತಿದೆ. ಈ ಚಿತ್ರವು ಭಕ್ತಿ, ತ್ಯಾಗ ಮತ್ತು ಯುದ್ಧದ ಅಂಶಗಳನ್ನು ಸಮತೋಲನಗೊಳಿಸುತ್ತದೆ, ಮಂಚು ವಿಷ್ಣು, ಪ್ರಭಾಸ್, ಅಕ್ಷಯ್ ಕುಮಾರ್ ಸೇರಿದಂತೆ ದೊಡ್ಡ ತಾರಾಬಳಗವನ್ನು ಒಳಗೊಂಡಿದೆ.

ಬೇಡರ ಕಣ್ಣಪ್ಪ. ಡಾಕ್ಟರ್ ರಾಜ್​ ಗೆ ಹೀರೋ ಪಟ್ಟ ಕಟ್ಟಿಕೊಟ್ಟ ಸಿನಿಮಾ.. ತನ್ನ ಎರಡೂ ಕಣ್ಣುಗಳನ್ನು ಕಿತ್ತುಕೊಳ್ಳುವ ಮೂಲಕ ಹಿಂದೂ ದೇವರು ಶಿವನ ಮೇಲಿನ ತನ್ನ ತೀವ್ರ ಭಕ್ತಿಯನ್ನು ಸಾಬೀತುಪಡಿಸುವ ಪೌರಾಣಿಕ ಕಥೆಯ ಈ ಸಿನಿಮಾ ಅಣ್ಣಾವ್ರ ಹೆಸರಿನ ಕೀರ್ತಿ ಪತಾಕೆಯಲ್ಲೊಂದು. 1954ರಲ್ಲಿ ಬಂದ ಬೇಡರ ಕಣ್ಣಪ್ಪ ಸಿನಿಮಾ ಇಂದಿಗೂ ಜನ ಮಾನಸದಲ್ಲಿ ಅಚ್ಚೊತ್ತಿದೆ. ಇದೇ ಕಥೆ ಈಗ ಹೊಸ ರೂಪದಲ್ಲಿ ಸ್ಟಾರ್​ ಹೀರೋಗಳ ಹೊಳಪಿನಲ್ಲಿ ಕಣ್ಣಪ್ಪನಾಗಿ ತೆರೆ ಮೇಲೆ ಮೇಳೈಸೋಕೆ ಬರುತ್ತಿದೆ.

ದೊಡ್ಡ ಸಿನಿಮಾಗಳೇ ಇಲ್ಲದ ಟೈಮ್​​ನಲ್ಲಿ ತೆಲುಗು ಚಿತ್ರರಂಗದಿಂದ ಪೌರಾಣಿಕ ಕಥೆಯ ಕಣ್ಣಪ್ಪ ಸಿನಿಮಾ ಪ್ಯಾನ್ ಇಂಡಿಯಾ ಚಿತ್ರವಾಗಿ ತೆರೆಗೆ ಬರುತ್ತಿದೆ. ಡಾಕ್ಟರ್ ರಾಜ್​​ಕುಮಾರ್​​ರ ಕಣ್ಣಪ್ಪನನ್ನ ನೋಡಿದವರು ಈಗ ಹೊಸ ಟೆಕ್ನಾಲಜಿಯಲ್ಲಿ ಸಿದ್ಧವಾಗಿರೋ ಮಲ್ಟಿಸ್ಟಾರ್ ಕಣ್ಣಪ್ಪನ ಕತೆ ನೋಡಬಹುದು. ಈ ಸಿನಿಮಾದಲ್ಲಿ ಕಣ್ಣಪ್ಪನಾಗಿ ಮಂಚುವಿಷ್ಣು ನಟಿಸಿದ್ದಾರೆ. ಇವರ ಜೊತೆ ಪ್ರಭಾಸ್​, ಅಕ್ಷಯ್ ಕುಮಾರ್, ಮೋಹನ್ ಲಾಲ್, ಮೋಹನ್ ಬಾಬು ಕಾಜೋಲ್ ಈ ಸಿನಿಮಾದಲ್ಲಿದ್ದಾರೆ.

ಡಾಕ್ಟರ್ ರಾಜ್​ಕುಮಾರ್​ರ ಬೇಡರ ಕಣ್ಣಪ್ಪ ಸಿನಿಮಾದಲ್ಲಿ ಅಣ್ಣಾವ್ರು ಶಿವಭಕ್ತ ಕಣ್ಣಪ್ಪನಾಗಿದ್ರು. ಶಿವನಿಗಾಗಿ ತನ್ನೆರಡೂ ಕಣ್ಣುಗಳನ್ನ ಕಿತ್ತುಕೊಟ್ಟಿದ್ರು. ಆದ್ರೆ ಈಗ ಬರ್ತಾ ಇರೋ ಕಣ್ಣಪ್ಪ ಶಿವಭಕ್ತ ಕಣ್ಣಪ್ಪ ಮಾತ್ರ ಅಲ್ಲ ಫೈಟರ್​ ಕಣ್ಣಪ್ಪನೂ ಹೌದು. ಈ ಸಿನಿಮಾದಲ್ಲಿ ಆ್ಯಕ್ಷನ್ ಧಮಾಕ ಇದೆ. ಪ್ಯಾನ್ ಇಂಡಿಯಾ ಸ್ಟೈಲ್​ಗೆ ತಕ್ಕಂತೆ ಕಣ್ಣಪ್ಪನನ್ನು ಆಕ್ಷನ್ ಹೀರೋ, ಮಾಸ್ ಹೀರೋ ಕಣ್ಣಪ್ಪನನ್ನಾಗಿಸಿದ್ದಾರೆ.

ಕಣ್ಣಪ್ಪ ಸಿನಿಮಾದಲ್ಲಿ ಮಂಚು ವಿಷ್ಣು ಭಯವಿಲ್ಲದ ಯೋಧನಿಂದ ಶಿವನ ಪರಮ ಭಕ್ತನಾಗಿ ನಟಿಸಿದ್ದಾರೆ. ಅಕ್ಷಯ್ ಕುಮಾರ್ ಶಿವನ ರೋಲ್ ಮಾಡಿದ್ರೆ, ಕಾಜಲ್ ಅಗರ್ವಾಲ್ ಪಾರ್ವತಿ ಪಾತ್ರ ಮಾಡಿದ್ದಾರೆ. ಮೋಹನ್ ಲಾಲ್ ಕಿರಾತಕನ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಪ್ರಭಾಸ್ ರುದ್ರ ರೋಲ್​ ನೋಡೋ ಆಸೆಯಲ್ಲಿ ಅವರ ಫ್ಯಾನ್ಸ್ ಇದ್ದಾರೆ. ಈ ಸಿನಿಮಾದಲ್ಲಿ ಪ್ರೀತಿ ಮುಕುಂದನ್ ನಾಯಕಿಯಾಗಿ ನಟಿಸಿದ್ದಾರೆ. ಮಂಚು ವಿಷ್ಣು ಮತ್ತು ಮೋಹನ್​ಬಾಬು ಬಂಡವಾಳ ಹೂಡಿರೋ ಕಣ್ಣಪ್ಪ ಇದೇ ಜೂನ್ 27ಕ್ಕೆ ಅಂದರೆ ನಾಳೆ ವಿಶ್ವದಾದ್ಯಂತ ತೆರೆಗೆ ಬರುತ್ತಿದೆ.  

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more