23 ವರ್ಷಗಳ ಹಿಂದೆ ಬೆಳ್ಳಿತೆರೆ ಮೇಲೆ ಉದಯಿಸಿದ ಧ್ರುವತಾರೆ: ಅಪ್ಪು ಖದರ್ ನೋಡಿ ಸಿಂಹದ ಮರಿ ಎಂದಿದ್ರು ತಲೈವಾ!

23 ವರ್ಷಗಳ ಹಿಂದೆ ಬೆಳ್ಳಿತೆರೆ ಮೇಲೆ ಉದಯಿಸಿದ ಧ್ರುವತಾರೆ: ಅಪ್ಪು ಖದರ್ ನೋಡಿ ಸಿಂಹದ ಮರಿ ಎಂದಿದ್ರು ತಲೈವಾ!

Published : Mar 15, 2025, 01:04 PM ISTUpdated : Mar 15, 2025, 01:15 PM IST

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ನಟನೆಯ ಅಪ್ಪು ಸಿನಿಮಾ ರಾಜ್ಯಾದ್ಯಂತ ಮರುಬಿಡುಗಡೆಯಾಗಿದೆ. ಹೊಸ ರೂಪದಲ್ಲಿ ಹೊಸ ತಂತ್ರಜ್ಞಾನದಲ್ಲಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಚಿತ್ರವನ್ನ ಮರುಬಿಡುಗಡೆ ಮಾಡಿದ್ದಾರೆ. 

ಕಳೆದ ವರ್ಷ ಪುನೀತ್ ರಾಜ್​ಕುಮಾರ್ ಬರ್ತ್​ಡೇಗೆ ಜಾಕಿ ಸಿನಿಮಾ ರೀ-ರಿಲೀಸ್ ಆಗಿತ್ತು. ಈ ಸಾರಿ ಅಪ್ಪು ಬರ್ತ್​ಡೇ ಪ್ರಯುಕ್ತ ಪುನೀತ್ ನಟನೆಯ ಚೊಚ್ಚಲ ಸಿನಿಮಾ ಅಪ್ಪು ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ಬಂದಿದೆ. ಹೊಸ ಸಿನಿಮಾಗಳಿಗೂ ಸಿಗದಂತಾ ಓಪನಿಂಗ್ ಅಪ್ಪುಗೆ ಸಿಕ್ಕಿದೆ. ಫ್ಯಾನ್ಸ್ ಅಕ್ಷರಶಃ ಅಪ್ಪು ಉತ್ಸವ ಮಾಡ್ತಾ ಇದ್ದಾರೆ. ಅಷ್ಟಕ್ಕೂ 23 ವರ್ಷಗಳ ಹಿಂದೆ ಈ ಸಿನಿಮಾ ಬಂದ ಹೊತ್ತಲ್ಲಿ ಏನೆಲ್ಲಾ ನಡೆದಿತ್ತು ಗೊತ್ತಾ..? ಸ್ಯಾಂಡಲ್​ವುಡ್ ಆಗಸದಲ್ಲಿ ಪವರ್ ಸ್ಟಾರ್ ಅನ್ನೋ ನಕ್ಷತ್ರ ಉದಯಿಸಿದ್ದು ಹೇಗೆ..? ಆ ಕುರಿತ ರೋಚಕ ಸ್ಟೋರಿ ಇಲ್ಲಿದೆ ನೋಡಿ. ಸ್ಯಾಂಡಲ್​ವುಡ್​​ನ ಅಜಾತಶತ್ರು.. ಅಭಿಮಾನಿಗಳ ಪ್ರೀತಿಯ ರಾಜರತ್ನ.. 

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ನಟನೆಯ ಅಪ್ಪು ಸಿನಿಮಾ ರಾಜ್ಯಾದ್ಯಂತ ಮರುಬಿಡುಗಡೆಯಾಗಿದೆ. ಹೊಸ ರೂಪದಲ್ಲಿ ಹೊಸ ತಂತ್ರಜ್ಞಾನದಲ್ಲಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಚಿತ್ರವನ್ನ ಮರುಬಿಡುಗಡೆ ಮಾಡಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆಗೆ ಬೆಳಿಗ್ಗೆ 6 ಗಂಟೆಯಿಂದಲೇ ಶೋಗಳು ಶುರುವಾಗಿದ್ದು ಫ್ಯಾನ್ಸ್ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಕಟೌಟ್, ಹಾರ, ಹಾಲಿನ ಅಭಿಷೇಕ.. ಹೊಸ ಸಿನಿಮಾಗಳಿಗೂ ಪಡದಷ್ಟು ಸಂಭ್ರಮ, ಹುರುಪು ಅಪ್ಪು ಮರುಬಿಡುಗಡೆಯಲ್ಲಿ ಕಾಣ್ತಾ ಇದೆ. ಬಳ್ಳಾರಿಯಲ್ಲಿ ಬೆಳ್ಳಂ ಬೆಳಿಗ್ಗೆ ಜನ ಎತ್ತಿನ ಗಾಡಿ ಕಟ್ಟಿಕೊಂಡು ಬಂದು ಅಪ್ಪು ಸಿನಿಮಾ ನೋಡಿದ್ದಾರೆ. ಅಪ್ಪು ಸಿನಿಮಾದಲ್ಲಿ ಪುನೀತ್ ಎಂಟ್ರಿ ಸೀನ್​ಗಂತೂ ಥಿಯೇಟರ್ ಮೇಲ್ಛಾವಣಿ ಹಾರಿಹೋಗುವಂತೆ ಶಿಳ್ಳೆ, ಚಪ್ಪಾಳೆ ಬಿದ್ದಿವೆ. 

ಇಂಥದ್ದೊಂದು ಸಂಭ್ರಮದ ವಾತಾವರಣ ಥಿಯೇಟರ್ ಅಂಗಳದಲ್ಲಿ ಮೂಡಿ ಯಾವ ಕಾಲವಾಯ್ತೋ ಗೊತ್ತಿಲ್ಲ. ಹೀಗೆ ಎಲ್ಲಾ ವರ್ಗದ ಫ್ಯಾನ್ಸ್​ ಥಿಯೇಟರ್​ಗೆ ಕರೆಸುವಂಥಾ ಕೆಪಾಸಿಟಿ ಇದ್ದಿದ್ದು ಒನ್ ಌಂಡ್ ಓನ್ಲಿ ಪವರ್ ಸ್ಟಾರ್​ಗೆ. ಈಗಲೇ ಅಪ್ಪು ಕ್ರೇಜ್ ಹೀಗಿದೆ ಅಂದ್ರೆ 23 ವರ್ಷಗಳ ಹಿಂದೆ ಅಪ್ಪು ರಿಲೀಸ್ ದಿನ ಅದ್ಯಾಪರಿ ಕ್ರೇಜ್ ಇತ್ತು ಅನ್ನೋದನ್ನ ನೀವೇ ಊಹೆ ಮಾಡಿಕೊಳ್ಳಿ. ಅಪ್ಪು ಸಿನಿಮಾ ತೆರೆಗೆ ಬಂದಿದ್ದು 26 ಏಪ್ರಿಲ್ 2002ರಂದು. ಎರಡು ದಿನದ ಹಿಂದಷ್ಟೇ ಅಣ್ಣಾವ್ರ ಬರ್ತ್​ಡೇ ಸೆಲೆಬ್ರೇಟ್ ಮಾಡಿದ್ದ ಫ್ಯಾನ್ಸ್ ಅಣ್ಣಾವ್ರ ಕಿರಿಯ ಪುತ್ರನ ಚೊಚ್ಚಲ ಸಿನಿಮಾ ನೋಡೋದಕ್ಕೆ ಕುತೂಹಲದಿಂದ ಸಜ್ಜಾಗಿ ನಿಂತಿದ್ರು. ಅಸಲಿಗೆ ಡಾ.ರಾಜ್​ಕುಮಾರ್ ಕಿರಿಮಗ ಅಂತಿಂಥವನಲ್ಲ ಬಾಲನಟನಾಗಿ ಅದಾಗಲೇ ರಾಷ್ಟ್ರಪ್ರಶಸ್ತಿ ಪಡೆದಿದ್ದ ಪ್ರತಿಭಾನ್ವಿತ.

24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
Read more