ಪಾರ್ವತಮ್ಮನ ಗಂಡನಾಗಿ..ಹೇಗಿರ್ತಾರೆ ಸಿಎಂ..? ಸಿದ್ದು ಭೇಟಿಗೆ ಬಂದ ವಿಶೇಷ ಅತಿಥಿ ಯಾರು ಗೊತ್ತಾ?

Sep 28, 2023, 9:13 AM IST

ಮೊನ್ನೆ ವೀಕೆಂಡ್‌ನಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಅನುಬಂಧ ಅವಾರ್ಡ್ಸ್ (Anubandha Awards) ಕಾರ್ಯಕ್ರಮ ಪ್ರಸಾರವಾಯ್ತು. ಈ ಕಾರ್ಯಕ್ರಮ ಅದ್ದೂರಿಯಾಗಿ ಮೂಡಿ ಬಂದಿತು. ಹಾಗೆನೇ ಈ ಕಾರ್ಯಕ್ರಮವ ವಿಶೇಷತೆ ಏನೆಂದ್ರೆ, ಸಿಎಂ ಸಿದ್ದರಾಮಯ್ಯನವರನ್ನು(Siddaramaiah) ಇದಕ್ಕೆ ಆಹ್ವಾನಿಸಲಾಗಿತ್ತು. ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ವಿಶೇಷ ಆತಿಥ್ಯವನ್ನು ನೀಡಲಾಗಿತ್ತು. ಇನ್ನು ಈ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯನವರನ್ನು ಭೇಟಿಯಾಗಲೆಂದೇ ವಿಶೇಷ ಅತಿಥಿಯೊಬ್ಬರು ಬಂದಿದ್ದರು. ಶಕ್ತಿ ಯೋಜನೆ(Shakti Scheme) ಲಾಂಚ್ ಸಂದರ್ಭದಲ್ಲಿ ತುಂಬಾನೇ ಫೇಮಸ್ ಆಗಿದ್ದ ಅತಿಥಿಯೊಬ್ಬರು ಈ ಕಾರ್ಯಕ್ರಮಕ್ಕೆ ಸಹ ಬಂದಿದ್ದರು. ರಾಜ್ಯದ ಮಹಿಳೆಯರಿಗೆ ಶಕ್ತಿ ಯೋಜನೆ ಅಡಿಯಲ್ಲಿ, ರಾಜ್ಯ ಸರ್ಕಾರಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಘೋಷಿಸಿತ್ತು ರಾಜ್ಯ ಸರ್ಕಾರ. ಈ ಯೋಜನೆ ಜಾರಿ ದಿನದಂದು ಉತ್ತರ ಕರ್ನಾಟಕದ ಅಜ್ಜಿಯೊಬ್ಬರು ಬಸ್ಸಿಗೆ ಹಣೆ ಮುಟ್ಟಿ ನಮಸ್ಕರಿಸುವ ಮೂಲಕ ಫೇಮಸ್ ಆಗಿದ್ದರು. ಆ ಅಜ್ಜಿ ಸಿದ್ದರಾಮಯ್ಯವರನ್ನು ಭೇಟಿಯಾಗಲು ಅನುಬಂಧ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಬಂದಿದ್ದರು. ಸಿದ್ದರಾಮಯ್ಯನವರು ಈ ಕಾರ್ಯಕ್ರಮಕ್ಕೆ ಹೋದಾಗ ಕಲರ್ಸ್ ಕನ್ನಡ ವಾಹಿನಿಯವರು ತುಂಬಾ ವಿಶೇಷವಾದ ರೀತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸ್ವಾಗತಿಸಿದ್ದರು. ಸಿದ್ದರಾಮಯ್ಯವರು, ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಹೋದಾಗ ಅವರ ಎಂಟ್ರಿ ಹೇಗಿತ್ತು ಅಂತ ಇಲ್ಲಿ ನೋಡಿ.

ಇದನ್ನೂ ವೀಕ್ಷಿಸಿ: Today Horoscope: ಇಂದು ಅನಂತ ಚತುರ್ದಶಿ ಇದ್ದು..ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ ?