ತೆಲುಗು ನಟಿಯರೂ ಇಂಡಸ್ಟ್ರಿಗೆ ಬರಬೇಕೆಂದ ಸ್ಟೈಲಿಷ್ ಸ್ಟಾರ್: ತೆಲುಗು ನಾಯಕಿಯರೇ ಇಲ್ವಾ?

ತೆಲುಗು ನಟಿಯರೂ ಇಂಡಸ್ಟ್ರಿಗೆ ಬರಬೇಕೆಂದ ಸ್ಟೈಲಿಷ್ ಸ್ಟಾರ್: ತೆಲುಗು ನಾಯಕಿಯರೇ ಇಲ್ವಾ?

Published : Aug 13, 2023, 10:04 AM IST

ತೆಲುಗು ನಟಿಯರ ಬಗ್ಗೆ ಬೇಸರ ವ್ಯಕ್ತಪಡಿಸಿದ ನಟ
ಅಲ್ಲು ಅರ್ಜುನ್ ಹೇಳಿಕೆ ಇದೀಗ ಎಲ್ಲೆಡೆ ವೈರಲ್‌
ನಟ ಅಲ್ಲು ಅರ್ಜುನ್ ಬೇಸರ ಯಾಕೆ ಗೊತ್ತಾ?
 

ಪ್ರತಿ ಸಿನಿಮಾ ಇಂಡಸ್ಟ್ರಿಯ ಬಗ್ಗೆಯೂ ಆಯಾ ಕಲಾವಿದರಿಗೆ ಪ್ರೀತಿ, ಅಭಿಮಾನ, ಗೌರವ ಇದ್ದೇ ಇರುತ್ತದೆ. ಹಾಗೆ ನೋಡಿದ್ರೆ ತೆಲುಗು ಸೀರಿಯಲ್ ಮತ್ತು ಸಿನಿಮಾ ಇಂಡಸ್ಟ್ರಿಯನ್ನು ಆಳುತ್ತಿರುವುದೇ ಕನ್ನಡ ನಟಿಯರು(kannada heroines)  ಅನ್ನೋದು ಇಂಟ್ರೆಸ್ಟಿಂಗ್ ವಿಚಾರ. ಪೂಜಾ ಹೆಗ್ಡೆ, ರಶ್ಮಿಕಾ, ಕೃತಿ ಶೆಟ್ಟಿ, ಶ್ರೀಲೀಲಾ ಸೇರಿದಂತೆ ಕನ್ನಡ ಚಿತ್ರರಂಗದ ನಟಿಯರದ್ದೇ ಮೇಲುಗೈ. ಹೀಗಿರುವಾಗ ಅಲ್ಲೂ ಅರ್ಜುನ್ ಇತ್ತೀಚೆಗೆ ಮಾತಾಡಿರೋ ವಿಡಿಯೋವೊಂದು ಇದೀಗ ವೈರಲ್ ಆಗಿದೆ. ಇದರಲ್ಲಿ ಎಲ್ಲ ಭಾಷೆಯಲ್ಲೂ ಆಯಾ ಭಾಷೆಯ ಹೀರೋಯಿನ್ಸ್ ಇದ್ದಾರೆ. ಆದರೆ ತೆಲುಗು ಭಾಷೆಯಲ್ಲಿ(telugu) ಹೀರೋಯಿನ್ಸ್ ಬಹಳ ಕಡಿಮೆ ಇದ್ದಾರೆ. ಅವಾರ್ಡ್ ಕಾರ್ಯಕ್ರಮವೊಂದರಲ್ಲಿ ಆಯಾ ಭಾಷೆಯ ನಟಿಯರು ಬಂದು ಅವರ ಭಾಷೆಯಲ್ಲಿ ಮಾತನಾಡಿ ಅವಾರ್ಡ್ ತೆಗೆದುಕೊಂಡರು. ಕನ್ನಡದ ನಟಿಯರೂ  ಕೂಡ ಬೊಂಬಾಟಾಗಿ ಕನ್ನಡದಲ್ಲೆ ಮಾತಾಡಿದರು. ಆದರೆ ತೆಲುಗು ನಟಿಯರು(Telugu actresses) ಇಂಡಸ್ಟ್ರಿಯಲ್ಲಿ ಬೆಳೆಯುತ್ತಿಲ್ಲ. ಆ ಬೇಸರ ಕೊರಗು ನನಗೆ ಬಹಳ ದಿನಗಳಿಂದ ಇತ್ತು. ಇದೀಗ ಶ್ರೀಲೀಲಾ ಮತ್ತು ಬೇಬಿ ಸಿನಿಮಾ ಮೂಲಕ ವೈಷ್ಣವಿ ಇಂಡಸ್ಟ್ರಿಯಲ್ಲಿ ಬೆಳೆಯುತ್ತಿರೋದು ಖುಷಿಯ ವಿಚಾರ ಎಂದಿದ್ದಾರೆ. ಹಾಗೆ ನೋಡಿದ್ರೆ ಶ್ರೀಲೀಲಾ ತೆಲುಗು ಹುಡುಗಿಯೆಂದೆ ಅಲ್ಲೂ ಅರ್ಜುನ್ ಮೆನ್ಷನ್ ಮಾಡಿದ್ದಾರೆ. ಶ್ರೀಲೀಲಾ ಮನೆ ಭಾಷೆ ತೆಲುಗು ಆದರೂ ಕರ್ನಾಟಕದವರು(karnataka). ಕನ್ನಡದಲ್ಲೇ ಜರ್ನಿ ಶುರು ಮಾಡಿದವರು. ಏನೇ ಆದರೂ  ಅಲ್ಲೂ ಅರ್ಜುನ್ ಬೇಬಿ ಸಿನಿಮಾದಲ್ಲಿ ನಟಿಸಿರೋ ವೈಷ್ಣವಿ ಕುರಿತು ಖುಷಿಯಿಂದ ಮಾತನಾಡಿದ್ದಾರೆ. ಆಯಾ ಭಾಷೆಯಲ್ಲಿ ಆಯಾ ನಾಯಕಿಯರು ಬೆಳೆಯಬೇಕು ಎನ್ನುವ ಅವರ ಹೇಳಿಕೆ ಇದೀಗ ವೈರಲ್ ಆಗುತ್ತಿದೆ.

ಇದನ್ನೂ ವೀಕ್ಷಿಸಿ:  ದುಬೈನಲ್ಲಿ ಸೈಮಾ ಸಂಭ್ರಮ: ಕಾರ್ಯಕ್ರಮದ ಸುದ್ದಿಗೋಷ್ಠಿಯಲ್ಲಿ ಡಾಲಿ, ಶ್ರುತಿ ಹಾಸನ್‌ ಭಾಗಿ..!

24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್