ತೆಲುಗು ನಟಿಯರೂ ಇಂಡಸ್ಟ್ರಿಗೆ ಬರಬೇಕೆಂದ ಸ್ಟೈಲಿಷ್ ಸ್ಟಾರ್: ತೆಲುಗು ನಾಯಕಿಯರೇ ಇಲ್ವಾ?

ತೆಲುಗು ನಟಿಯರೂ ಇಂಡಸ್ಟ್ರಿಗೆ ಬರಬೇಕೆಂದ ಸ್ಟೈಲಿಷ್ ಸ್ಟಾರ್: ತೆಲುಗು ನಾಯಕಿಯರೇ ಇಲ್ವಾ?

Published : Aug 13, 2023, 10:04 AM IST

ತೆಲುಗು ನಟಿಯರ ಬಗ್ಗೆ ಬೇಸರ ವ್ಯಕ್ತಪಡಿಸಿದ ನಟ
ಅಲ್ಲು ಅರ್ಜುನ್ ಹೇಳಿಕೆ ಇದೀಗ ಎಲ್ಲೆಡೆ ವೈರಲ್‌
ನಟ ಅಲ್ಲು ಅರ್ಜುನ್ ಬೇಸರ ಯಾಕೆ ಗೊತ್ತಾ?
 

ಪ್ರತಿ ಸಿನಿಮಾ ಇಂಡಸ್ಟ್ರಿಯ ಬಗ್ಗೆಯೂ ಆಯಾ ಕಲಾವಿದರಿಗೆ ಪ್ರೀತಿ, ಅಭಿಮಾನ, ಗೌರವ ಇದ್ದೇ ಇರುತ್ತದೆ. ಹಾಗೆ ನೋಡಿದ್ರೆ ತೆಲುಗು ಸೀರಿಯಲ್ ಮತ್ತು ಸಿನಿಮಾ ಇಂಡಸ್ಟ್ರಿಯನ್ನು ಆಳುತ್ತಿರುವುದೇ ಕನ್ನಡ ನಟಿಯರು(kannada heroines)  ಅನ್ನೋದು ಇಂಟ್ರೆಸ್ಟಿಂಗ್ ವಿಚಾರ. ಪೂಜಾ ಹೆಗ್ಡೆ, ರಶ್ಮಿಕಾ, ಕೃತಿ ಶೆಟ್ಟಿ, ಶ್ರೀಲೀಲಾ ಸೇರಿದಂತೆ ಕನ್ನಡ ಚಿತ್ರರಂಗದ ನಟಿಯರದ್ದೇ ಮೇಲುಗೈ. ಹೀಗಿರುವಾಗ ಅಲ್ಲೂ ಅರ್ಜುನ್ ಇತ್ತೀಚೆಗೆ ಮಾತಾಡಿರೋ ವಿಡಿಯೋವೊಂದು ಇದೀಗ ವೈರಲ್ ಆಗಿದೆ. ಇದರಲ್ಲಿ ಎಲ್ಲ ಭಾಷೆಯಲ್ಲೂ ಆಯಾ ಭಾಷೆಯ ಹೀರೋಯಿನ್ಸ್ ಇದ್ದಾರೆ. ಆದರೆ ತೆಲುಗು ಭಾಷೆಯಲ್ಲಿ(telugu) ಹೀರೋಯಿನ್ಸ್ ಬಹಳ ಕಡಿಮೆ ಇದ್ದಾರೆ. ಅವಾರ್ಡ್ ಕಾರ್ಯಕ್ರಮವೊಂದರಲ್ಲಿ ಆಯಾ ಭಾಷೆಯ ನಟಿಯರು ಬಂದು ಅವರ ಭಾಷೆಯಲ್ಲಿ ಮಾತನಾಡಿ ಅವಾರ್ಡ್ ತೆಗೆದುಕೊಂಡರು. ಕನ್ನಡದ ನಟಿಯರೂ  ಕೂಡ ಬೊಂಬಾಟಾಗಿ ಕನ್ನಡದಲ್ಲೆ ಮಾತಾಡಿದರು. ಆದರೆ ತೆಲುಗು ನಟಿಯರು(Telugu actresses) ಇಂಡಸ್ಟ್ರಿಯಲ್ಲಿ ಬೆಳೆಯುತ್ತಿಲ್ಲ. ಆ ಬೇಸರ ಕೊರಗು ನನಗೆ ಬಹಳ ದಿನಗಳಿಂದ ಇತ್ತು. ಇದೀಗ ಶ್ರೀಲೀಲಾ ಮತ್ತು ಬೇಬಿ ಸಿನಿಮಾ ಮೂಲಕ ವೈಷ್ಣವಿ ಇಂಡಸ್ಟ್ರಿಯಲ್ಲಿ ಬೆಳೆಯುತ್ತಿರೋದು ಖುಷಿಯ ವಿಚಾರ ಎಂದಿದ್ದಾರೆ. ಹಾಗೆ ನೋಡಿದ್ರೆ ಶ್ರೀಲೀಲಾ ತೆಲುಗು ಹುಡುಗಿಯೆಂದೆ ಅಲ್ಲೂ ಅರ್ಜುನ್ ಮೆನ್ಷನ್ ಮಾಡಿದ್ದಾರೆ. ಶ್ರೀಲೀಲಾ ಮನೆ ಭಾಷೆ ತೆಲುಗು ಆದರೂ ಕರ್ನಾಟಕದವರು(karnataka). ಕನ್ನಡದಲ್ಲೇ ಜರ್ನಿ ಶುರು ಮಾಡಿದವರು. ಏನೇ ಆದರೂ  ಅಲ್ಲೂ ಅರ್ಜುನ್ ಬೇಬಿ ಸಿನಿಮಾದಲ್ಲಿ ನಟಿಸಿರೋ ವೈಷ್ಣವಿ ಕುರಿತು ಖುಷಿಯಿಂದ ಮಾತನಾಡಿದ್ದಾರೆ. ಆಯಾ ಭಾಷೆಯಲ್ಲಿ ಆಯಾ ನಾಯಕಿಯರು ಬೆಳೆಯಬೇಕು ಎನ್ನುವ ಅವರ ಹೇಳಿಕೆ ಇದೀಗ ವೈರಲ್ ಆಗುತ್ತಿದೆ.

ಇದನ್ನೂ ವೀಕ್ಷಿಸಿ:  ದುಬೈನಲ್ಲಿ ಸೈಮಾ ಸಂಭ್ರಮ: ಕಾರ್ಯಕ್ರಮದ ಸುದ್ದಿಗೋಷ್ಠಿಯಲ್ಲಿ ಡಾಲಿ, ಶ್ರುತಿ ಹಾಸನ್‌ ಭಾಗಿ..!

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!