ಡಿಕೆಶಿ ಭೇಟಿ ಮಾಡಿದ ಉಪೇಂದ್ರ, ದಿಢೀರ್ ಭೇಟಿ ಹಿಂದಿನ ರಹಸ್ಯ ಏನು: ಕೊನೆಗೂ ರಿವೀಲ್ ಆಯ್ತು?

ಡಿಕೆಶಿ ಭೇಟಿ ಮಾಡಿದ ಉಪೇಂದ್ರ, ದಿಢೀರ್ ಭೇಟಿ ಹಿಂದಿನ ರಹಸ್ಯ ಏನು: ಕೊನೆಗೂ ರಿವೀಲ್ ಆಯ್ತು?

Published : Nov 06, 2025, 04:38 PM ISTUpdated : Nov 06, 2025, 04:50 PM IST

ರಿಯಲ್ ಸ್ಟಾರ್ ಉಪೇಂದ್ರ ದಿಢೀರ್ ಅಂತ ಡಿಸಿಎಂ ಡಿ.ಕೆ.ಶಿವಕುಮಾರ್​​ರನ್ನ ಭೇಟಿ ಮಾಡಿದ್ದಾರೆ. ಡಿಸಿಎಂ ನಿವಾಸಕ್ಕೆ ತೆರಳಿ ಭೇಟಿ ಮಾಡಿರೋ ಉಪ್ಪಿ ಕೆಲ ಹೊತ್ತು ಡಿಕೆಶಿ ಜೊತೆ ಕುಳಿತು ಚರ್ಚೆ ಮಾಡಿದ್ದಾರೆ. ಉಪ್ಪಿಯ ಈ ದಿಢೀರ್ ಭೇಟಿ ಹಿಂದಿನ ರಹಸ್ಯ ಏನು.

ರಿಯಲ್ ಸ್ಟಾರ್ ಉಪೇಂದ್ರ ದಿಢೀರ್ ಅಂತ ಡಿಸಿಎಂ ಡಿ.ಕೆ.ಶಿವಕುಮಾರ್​​ರನ್ನ  ಭೇಟಿ ಮಾಡಿದ್ದಾರೆ. ಡಿಸಿಎಂ ನಿವಾಸಕ್ಕೆ ತೆರಳಿ ಭೇಟಿ ಮಾಡಿರೋ ಉಪ್ಪಿ ಕೆಲ ಹೊತ್ತು ಡಿಕೆಶಿ ಜೊತೆ ಕುಳಿತು ಚರ್ಚೆ ಮಾಡಿದ್ದಾರೆ. ಉಪ್ಪಿಯ ಈ ದಿಢೀರ್ ಭೇಟಿ ಹಿಂದಿನ ರಹಸ್ಯ ಏನು. ಅಂತ ಸಿನಿಲೋಕದಲ್ಲಿ-ರಾಜಕೀಯ ಲೋಕದಲ್ಲೂ ಚರ್ಚೆಯಾಗ್ತಾ ಇದೆ. ಯೆಸ್ ರಿಯಲ್ ಸ್ಟಾರ್ ಉಪೇಂದ್ರ , ಡಿಸಿಎಂ ಡಿ.ಕೆ ಶಿವಕುಮಾರ್ ನಿವಾಸಕ್ಕೆ ಭೇಟಿ ಕೊಟ್ಟಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಜೊತೆ ಕುಳಿತು ಕೆಲ ಹೊತ್ತು ಚರ್ಚೆ ಮಾಡಿದ್ದಾರೆ. ಖುದ್ದು ಡಿ.ಕೆ.ಶಿ ಉಪೇಂದ್ರ ಜೊತೆಗಿನ ಭೇಟಿಯ ಫೋಟೋಗಳನ್ನ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದ್ರೆ ಈ ಭೇಟಿ ಹಿಂದಿನ ಕಾರಣವನ್ನ ಮಾತ್ರ ಡಿಕೆಶಿನೂ ಹೇಳಿಕೊಂಡಿಲ್ಲ. ಉಪ್ಪಿ ಕೂಡ ಹೇಳಿಲ್ಲ. ಅದ್ಯಾವ್ ಕಾರಣಕ್ಕೆ ಈ ದಿಡೀರ್ ಭೇಟಿ ಅಂತ ಸಿನಿಮಾ ಮತ್ತು ರಾಜಕೀಯ ಅಂಗಳದಲ್ಲಿ ಚರ್ಚೆ ಶುರುವಾಗಿದೆ.

2017ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹೊಸ ಪಕ್ಷ ಕಟ್ಟೋದಕ್ಕೆ ಮುಂದಾದಾಗ ದೊಡ್ಡ ನಿರೀಕ್ಷೆಗಳು ಇದ್ದವು. ಸಿನಿಮಾಗಳಲ್ಲಿ ರಾಜಕಾರಣ, ಸ್ವಸ್ಥ ಸಮಾಜದ ಬಗ್ಗೆ ನಾನಾ ಕನಸು ಬಿತ್ತಿದ್ದ ಉಪ್ಪಿ ರಾಜಕೀಯದಲ್ಲೂ ಕ್ರಾಂತಿ ಮಾಡಬಹುದು ಅಂದುಕೊಂಡಿದ್ರು ಜನ. ಉಪ್ಪಿ ಪ್ರಜಾಕೀಯ ಅನ್ನೋ ಹೊಸ ಆಲೋಚನೆ ಇಟ್ಟುಕೊಂಡು ಹೊಸ ಪಕ್ಷವನ್ನ ಲಾಂಚ್ ಮಾಡಿದ್ರು. ಉಪ್ಪಿ ಐಡಿಯಾ ಏನೋ ಚೆನ್ನಾಗಿತ್ತು. ಆದ್ರೆ ಅದು ವರ್ಕ್ ಆಗ್ಲಿಲ್ಲ. ಇದೂವರೆಗೂ ಒಂದು ಎಂಎಲ್ಎ ಸೀಟ್ ಇರಲಿ ಒಂದು ಪಂಚಾಯತಿ ಎಲೆಕ್ಷನ್​ನಲ್ಲಿ ಕೂಡ ಪ್ರಜಾಕೀಯದ ಅಭ್ಯರ್ಥಿಗಳು ಗೆಲ್ಲೋದಕ್ಕೆ  ಸಾಧ್ಯ ಆಗ್ಲಿಲ್ಲ. ಸೋ ಪ್ರಜಾಕೀಯ ಈಗ ಸೈಲೆಂಟ್ ಆಗಿದೆ. ಹೀಗಾಗಿ ಉಪ್ಪಿ ಏನಾದ್ರೂ ಪ್ರಜಾಕೀಯ ಬಿಟ್ಟು ರಾಜಕೀಯದ ಕಡೆ ಬಂದ್ರಾ ಅಂತ, ಡಿಕೆ ಜೊತೆ ಅವರನ್ನ ನೋಡಿದ ಫ್ಯಾನ್ಸ್ ಯೋಚನೆ ಮಾಡ್ತಾ ಇದ್ದಾರೆ. ಈ ಭೇಟಿ ಹಿಂದಿನ ಗುಟ್ಟೇನು ಖುದ್ದು ಬುದ್ದಿವಂತನೇ ಹೇಳಬೇಕು.!

24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
Read more