ಡಿಕೆಶಿ ಭೇಟಿ ಮಾಡಿದ ಉಪೇಂದ್ರ, ದಿಢೀರ್ ಭೇಟಿ ಹಿಂದಿನ ರಹಸ್ಯ ಏನು: ಕೊನೆಗೂ ರಿವೀಲ್ ಆಯ್ತು?

ಡಿಕೆಶಿ ಭೇಟಿ ಮಾಡಿದ ಉಪೇಂದ್ರ, ದಿಢೀರ್ ಭೇಟಿ ಹಿಂದಿನ ರಹಸ್ಯ ಏನು: ಕೊನೆಗೂ ರಿವೀಲ್ ಆಯ್ತು?

Published : Nov 06, 2025, 04:38 PM ISTUpdated : Nov 06, 2025, 04:50 PM IST

ರಿಯಲ್ ಸ್ಟಾರ್ ಉಪೇಂದ್ರ ದಿಢೀರ್ ಅಂತ ಡಿಸಿಎಂ ಡಿ.ಕೆ.ಶಿವಕುಮಾರ್​​ರನ್ನ ಭೇಟಿ ಮಾಡಿದ್ದಾರೆ. ಡಿಸಿಎಂ ನಿವಾಸಕ್ಕೆ ತೆರಳಿ ಭೇಟಿ ಮಾಡಿರೋ ಉಪ್ಪಿ ಕೆಲ ಹೊತ್ತು ಡಿಕೆಶಿ ಜೊತೆ ಕುಳಿತು ಚರ್ಚೆ ಮಾಡಿದ್ದಾರೆ. ಉಪ್ಪಿಯ ಈ ದಿಢೀರ್ ಭೇಟಿ ಹಿಂದಿನ ರಹಸ್ಯ ಏನು.

ರಿಯಲ್ ಸ್ಟಾರ್ ಉಪೇಂದ್ರ ದಿಢೀರ್ ಅಂತ ಡಿಸಿಎಂ ಡಿ.ಕೆ.ಶಿವಕುಮಾರ್​​ರನ್ನ  ಭೇಟಿ ಮಾಡಿದ್ದಾರೆ. ಡಿಸಿಎಂ ನಿವಾಸಕ್ಕೆ ತೆರಳಿ ಭೇಟಿ ಮಾಡಿರೋ ಉಪ್ಪಿ ಕೆಲ ಹೊತ್ತು ಡಿಕೆಶಿ ಜೊತೆ ಕುಳಿತು ಚರ್ಚೆ ಮಾಡಿದ್ದಾರೆ. ಉಪ್ಪಿಯ ಈ ದಿಢೀರ್ ಭೇಟಿ ಹಿಂದಿನ ರಹಸ್ಯ ಏನು. ಅಂತ ಸಿನಿಲೋಕದಲ್ಲಿ-ರಾಜಕೀಯ ಲೋಕದಲ್ಲೂ ಚರ್ಚೆಯಾಗ್ತಾ ಇದೆ. ಯೆಸ್ ರಿಯಲ್ ಸ್ಟಾರ್ ಉಪೇಂದ್ರ , ಡಿಸಿಎಂ ಡಿ.ಕೆ ಶಿವಕುಮಾರ್ ನಿವಾಸಕ್ಕೆ ಭೇಟಿ ಕೊಟ್ಟಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಜೊತೆ ಕುಳಿತು ಕೆಲ ಹೊತ್ತು ಚರ್ಚೆ ಮಾಡಿದ್ದಾರೆ. ಖುದ್ದು ಡಿ.ಕೆ.ಶಿ ಉಪೇಂದ್ರ ಜೊತೆಗಿನ ಭೇಟಿಯ ಫೋಟೋಗಳನ್ನ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದ್ರೆ ಈ ಭೇಟಿ ಹಿಂದಿನ ಕಾರಣವನ್ನ ಮಾತ್ರ ಡಿಕೆಶಿನೂ ಹೇಳಿಕೊಂಡಿಲ್ಲ. ಉಪ್ಪಿ ಕೂಡ ಹೇಳಿಲ್ಲ. ಅದ್ಯಾವ್ ಕಾರಣಕ್ಕೆ ಈ ದಿಡೀರ್ ಭೇಟಿ ಅಂತ ಸಿನಿಮಾ ಮತ್ತು ರಾಜಕೀಯ ಅಂಗಳದಲ್ಲಿ ಚರ್ಚೆ ಶುರುವಾಗಿದೆ.

2017ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹೊಸ ಪಕ್ಷ ಕಟ್ಟೋದಕ್ಕೆ ಮುಂದಾದಾಗ ದೊಡ್ಡ ನಿರೀಕ್ಷೆಗಳು ಇದ್ದವು. ಸಿನಿಮಾಗಳಲ್ಲಿ ರಾಜಕಾರಣ, ಸ್ವಸ್ಥ ಸಮಾಜದ ಬಗ್ಗೆ ನಾನಾ ಕನಸು ಬಿತ್ತಿದ್ದ ಉಪ್ಪಿ ರಾಜಕೀಯದಲ್ಲೂ ಕ್ರಾಂತಿ ಮಾಡಬಹುದು ಅಂದುಕೊಂಡಿದ್ರು ಜನ. ಉಪ್ಪಿ ಪ್ರಜಾಕೀಯ ಅನ್ನೋ ಹೊಸ ಆಲೋಚನೆ ಇಟ್ಟುಕೊಂಡು ಹೊಸ ಪಕ್ಷವನ್ನ ಲಾಂಚ್ ಮಾಡಿದ್ರು. ಉಪ್ಪಿ ಐಡಿಯಾ ಏನೋ ಚೆನ್ನಾಗಿತ್ತು. ಆದ್ರೆ ಅದು ವರ್ಕ್ ಆಗ್ಲಿಲ್ಲ. ಇದೂವರೆಗೂ ಒಂದು ಎಂಎಲ್ಎ ಸೀಟ್ ಇರಲಿ ಒಂದು ಪಂಚಾಯತಿ ಎಲೆಕ್ಷನ್​ನಲ್ಲಿ ಕೂಡ ಪ್ರಜಾಕೀಯದ ಅಭ್ಯರ್ಥಿಗಳು ಗೆಲ್ಲೋದಕ್ಕೆ  ಸಾಧ್ಯ ಆಗ್ಲಿಲ್ಲ. ಸೋ ಪ್ರಜಾಕೀಯ ಈಗ ಸೈಲೆಂಟ್ ಆಗಿದೆ. ಹೀಗಾಗಿ ಉಪ್ಪಿ ಏನಾದ್ರೂ ಪ್ರಜಾಕೀಯ ಬಿಟ್ಟು ರಾಜಕೀಯದ ಕಡೆ ಬಂದ್ರಾ ಅಂತ, ಡಿಕೆ ಜೊತೆ ಅವರನ್ನ ನೋಡಿದ ಫ್ಯಾನ್ಸ್ ಯೋಚನೆ ಮಾಡ್ತಾ ಇದ್ದಾರೆ. ಈ ಭೇಟಿ ಹಿಂದಿನ ಗುಟ್ಟೇನು ಖುದ್ದು ಬುದ್ದಿವಂತನೇ ಹೇಳಬೇಕು.!

22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:23Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
04:33Cine Express: '8' ಗ್ಲಿಂಪ್ಸ್‌ನಿಂದ 'ಊರಬ್ಬ' ಟ್ರೇಲರ್‌ವರೆಗೆ: ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳ ಹವಾ
04:30Cine Express: ಈ ವಾರ ಸಿನಿ ಇಂಡಸ್ಟ್ರಿಯಲ್ಲಿ ಹೆಚ್ಚು ಚರ್ಚೆಯಾದ 5 ದೊಡ್ಡ ಅಪ್‌ಡೇಟ್‌ಗಳು ಯಾವುವು?
04:09ಅಪ್ಪನಿಗಾಗಿ ಬಂದ ಹೊಸ ಹಾಡು, ಕಾನ್ಸ್‌ನಲ್ಲಿ ಮೆಚ್ಚುಗೆ ಪಡೆದ ಚಿತ್ರದ ಟ್ರೇಲರ್: ಸಿನಿರಂಗದಲ್ಲಿ ಏನಾಗುತ್ತಿದೆ?
Read more