ನಟ ದರ್ಶನ್ ಕೊಲೆ ಮಾಡಿದ್ದೇ ಆದ್ರೆ ಶಿಕ್ಷೆ ಆಗಲಿ, ಆದರೆ..: ರಾಜ್ ಬಿ ಶೆಟ್ಟಿ ಹೇಳಿದ್ದೇನು?

Jul 18, 2024, 11:29 AM IST

ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರೋ ದರ್ಶನ್​ ಬಗ್ಗೆ ಸ್ಯಾಂಡಲ್​ವುಡ್​ ಮಂದಿ ಅವರದ್ದೇ ಆದ ಅಭಿಪ್ರಾಯ ಹೇಳುತ್ತಾರೆ. ಕೆಲವ್ರು ದರ್ಶನ್ ಪರ ನಿಂತ್ರೆ ಇನ್ ಕೆಲವ್ರು ನಾವು ನ್ಯಾಯದ ಪರ, ತಪ್ಪು ಮಾಡಿದ್ರೆ ಶಿಕ್ಷೆ ಆಗಲಿ. ರೇಣುಕಾಸ್ವಾಮಿಗೆ ನ್ಯಾಯ ಸಿಗಲಿ ಎನ್ನುತ್ತಿದ್ದಾರೆ. ಇದೀಗ ಕನ್ನಡದ ದೊಡ್ಡ ಟ್ಯಾಲೆಂಟ್ ರಾಜ್​ ಬಿ ಶೆಟ್ಟಿ ಕೂಡ ದರ್ಶನ್​ ಕೇಸ್​ ಬಗ್ಗೆ ತನ್ನ ರೂಪಾಂತರ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಮೌನ ಮುರಿದಿದ್ದಾರೆ.  ರೂಪಾಂತರ ಸಿನಿಮಾ ಟ್ರೈಲರ್​ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿರೋ ರಾಜ್ ಬಿ ಶೆಟ್ಟಿ ದರ್ಶನ್ ಕೊಲೆ ಕೇಸ್​ನಲ್ಲಿ ಅರೆಸ್ಟ್ ಆಗಿದ್ದು ಕನ್ನಡ ಚಿತ್ರರಂಗಕ್ಕೆ ದೊಡ್ಡ ಹೊಡೆತ. 

ಒಂದು ವೇಳೆ ತಪ್ಪು ಆಗಿದೆ ಎಂಬುದು ನಿಜವಾದರೆ ಅದಕ್ಕೆ ಕಾನೂನು ಇದೆ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಎಲ್ಲರಿಗೂ ನ್ಯಾಯ ಸಿಗಲೇಬೇಕು. ಅಪರಾಧ ಅವರಿಂದಲೇ ಆಗಿದ್ದರೆ ಶಿಕ್ಷೆ ಆಗಬೇಕು. ಎಂದಿದ್ದಾರೆ ರಾಜ್ ಬಿ ಶೆಟ್ಟಿ. ರಾಜ್ ಬಿ ಶೆಟ್ಟಿ ಈಗ ಲೀಡ್​ ರೋಲ್​ನಲ್ಲಿ ನಟಿಸಿರೋ ಮತ್ತೊಂದು ಸಿನಿಮಾ ರೂಪಾಂತರ. ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಕನ್ನಡ ಸಿನಿ ಪ್ರೇಕ್ಷಕರು ರೂಪಾಂತರದ ಬಗ್ಗೆ ಮಾತಾಡುವಂತಾಗಿದೆ. ವಿಶೇಷ ಅಂದ್ರೆ ರಾಜ್ ಬಿ ಶೆಟ್ಟಿಯ ಒಂದು ಮೊಟ್ಟೆಯ ಕತೆ ಸಿನಿಮಾ ಮಾಡಿದ್ದ ತಂಡವೇ ರೂಪಾಂತರಕ್ಕೂ ಕೆಲಸ ಮಾಡಿದ್ದಾರೆ. 

ಈ ಟ್ರೈಲರ್ ನೋಡುತ್ತಿದ್ರೆ ರಾಜ್ ಬಿ ಶೆಟ್ಟಿ ಮತ್ತೊಮ್ಮೆ ಪ್ರೇಕ್ಷಕರ ಮನ ಮುಟ್ಟೊದು ಗ್ಯಾರಂಟಿ ಅನ್ನಿಸುತ್ತೆ. ರೂಪಾಂತರ ಸಿನಿಮಾದ ಡೈರೆಕ್ಟರ್ ಮಿಥಿಲೇಶ್ ಎಡವಲತ್.. ಈ ಸಿನಿಮಾದಲ್ಲಿ ನಾಲ್ಕು ಕಥೆಗಳನ್ನ ಹೇಳುತ್ತಿದ್ದಾರೆ. ಈ ಟ್ರೈಲರ್​ ನೋಡಿದ್ರೆ  ಒಂದೊಂದು ಕಥೆನೂ ಜೀವನಕ್ಕೆ ಹತ್ತಿರ ಅನಿಸುತ್ತದೆ. ವ್ಯವಸ್ಥೆಯ ಅಸಲಿ ಮುಖಗಳು ಇಲ್ಲಿ ಅನಾವರಣ ಗೊಂಡಂತಿದೆ. ರೂಪಾಂತರಕ್ಕೆ ನಟ-ನಿರ್ದೇಶಕ ರಾಜ್ ಬಿ ಶೆಟ್ಟಿ ಸ್ಕ್ರಿಪ್ಟ್ ಕೆಲಸಕ್ಕೂ ಸಾಥ್ ಕೊಟ್ಟಿದ್ದು, ಈ ಸಿನಿಮಾ ಮೇಲಿನ ನಿರೀಕ್ಷೆಯ ಹೆಚ್ಚಾಗಿದೆ. ರಾಜ್ ಬಿ ಶೆಟ್ಟಿ, ಸೋಮಶೇಖರ್ ಬೋಲೇಗಾಂವ್, ಲೇಖಾ ನಾಯ್ಡು, ಹನುಮ್ಮಕ್ಕ, ಭರತ್ ಜಿ.ಬಿ, ಅಂಜನ್ ಭಾರಧ್ವಾಜ್ ಮತ್ತಿರರ ತಾರಗಣ ಈ  ಚಿತ್ರಕ್ಕಿದೆ.