ಬಳ್ಳಾರಿ ಜೈಲು ಸಿಬ್ಬಂದಿ ಕಣ್ಣಿಗೆ ಬಿದ್ರೆ ಸಾಕು, ಕಟ ಕಟ ಅಂತಿದಾರಂತೆ ಕಾಟೇರ!

ಬಳ್ಳಾರಿ ಜೈಲು ಸಿಬ್ಬಂದಿ ಕಣ್ಣಿಗೆ ಬಿದ್ರೆ ಸಾಕು, ಕಟ ಕಟ ಅಂತಿದಾರಂತೆ ಕಾಟೇರ!

Published : Sep 15, 2024, 12:01 PM ISTUpdated : Sep 15, 2024, 12:06 PM IST

ಬಳ್ಳಾರಿ ಜೈಲು ಸೆಲೆಬ್ರಿಟಿ ಆಗಿರೋ ನಟ ದರ್ಶನ್​​ಗೆ ಆ ಜೈಲು ಸಹವಾಸ ಸಾಕ್ ಸಾಕಾಗಿದೆ. ಬಳ್ಳಾರಿ ಜೈಲಲ್ಲಿ ದಚ್ಚು ದರ್ಪ ಒಂದ್ ಕಡೆ ಆದ್ರೆ ಆ ಜೈಲಲ್ಲಿರಲಾಗದೆ ಪರದಾಡುತ್ತಿದ್ದಾರೆ, ಹೈ ಸೆಕ್ಯುರಿಟಿ ಸೆಲ್ ನಲ್ಲಿ ಏಕಾಂಗಿಯಾಗಿರವ ದರ್ಶನ್..

ಚಾಲೆಂಜಿಂಗ್ ಸ್ಟಾರ್ ದರ್ಶನ್​ರ 70 ದಿನದ ಜೈಲು ವಾಸದ ಕಾಲ್​ ಶೀಟ್ ಮುಗಿದೆ. ದರ್ಶನ್​ ಕಾಲ್​ ಶೀಟ್​​ ಮತ್ತೆ 14 ದಿನ ಹೆಚ್ಚಾಗಿದ್ದು, ಜೈಲುವಾಸ ಬಳ್ಳಾರಿಯಲ್ಲಿ ಜೋರಾಗೆ ನಡೆಯುತ್ತಿದೆ. ಪರಪ್ಪನ ಅಗ್ರಹಾರದಿಂದ ಬಳ್ಳಾರಿಗೆ ಶಿಫ್ಟ್ ಆದ್ರೂ ದರ್ಶನ್​​​ ದರ್ಪ ಕುಗ್ಗಿಲ್ಲ. ಅಸಭ್ಯ ವರ್ತನೆ ಜೊತೆ ಜೈಲು ಸಿಬ್ಬಂಧಿಗಳ ಮೇಲೆ ಕೋಪದ ಜ್ವಾಲೆ ಹೆಚ್ಚಿಸಿಕೊಂಡಿದ್ದಾರೆ. 

ಜೈಲು ಸಿಬ್ಬಂದಿಸಿಬ್ಬಂದಿ ಕಣ್ಣಿಗೆ ಬಿದ್ರೆ ಸಾಕು ಕಾಟೇರ ಕಟ ಕಟ ಎನ್ನುತ್ತಿದ್ದಾರಂತೆ. ಹಾಗಾದ್ರೆ ಏನಿದು ಕಾಟೇರನ ಕೋಪ ದರ್ಪದ ಕತೆ.? ಇಲ್ಲಿದೆ ನೋಡಿ ಫುಲ್ ಡಿಟೈಲ್ಸ್.. ಬಳ್ಳಾರಿ ಜೈಲು ಕಂಬಿ ಹಿಂದೆ ಇದ್ರೂ ಕಟ ಕಟ ಎನ್ನುತ್ತಿರೋ 'ಕಾಟೇರ' ದಾಸನಿಗೆ ಹೆಚ್ಚಾಗಿದೆಯಂತೆ ಕೋಪ ದ್ವೇಷ, ಅಸಭ್ಯ ವರ್ತನೆ ಹುಚ್ಚು..!  

ಸಾಧು ಕೋಕಿಲ ಬಗ್ಗೆ ಉಪೇಂದ್ರ ಹೇಳಿದ್ದೇನು? ರಕ್ತ ಕಣ್ಣೀರು ಟೈಮಲ್ಲಿ ಏನ್ ಮಾಡಿದ್ರಂತೆ..!?

ಜೈಲು ಸೆಲೆಬ್ರಿಟಿ ದರ್ಶನ್​ ಜೈಲು ವಾಸಕ್ಕೆ 84 ದಿನ ಆಗಿದೆ. ದಾಸನ ಜೈಲು ವಾಸದ 100 ಡೇಸ್ ಸೆಲಬ್ರೇಷನ್​​ಗೆ ಇನ್ನು 16 ದಿನ ಬಾಕಿ ಇದೆ. ಅಷ್ಟರಲ್ಲಾಗಲೇ ಜೈಲೊಳಗಿರೋ ದರ್ಶನ್ ಕಟ ಕಟ ಅಂತ ಹಲ್ಲು ಗಿರಿಯುತ್ತಿದ್ದಾರೆ. ಕೋಪ ದ್ವೇಷ, ಅಸಭ್ಯ ವರ್ತನೆ ಹುಚ್ಚು ದಾಸನಿಗೆ ಹೆಚ್ಚಾಗಿದೆಯಂತೆ.

ಟಿವಿ ಕೊಡದಿದ್ದಕ್ಕೆ ಜೈಲು ಸಿಬ್ಬಂದಿ ಮೇಲೆ ದರ್ಶನ್ ಗರಂ..!
ಜೈಲಿಗೆ ಹೋದ್ರೂ ಪಾಠ ಕಲಿಯದ ದರ್ಶನ್ ನಿನ್ನೆ ಕ್ಯಾಮೆರಾಗಳು ಕಂಡ ಕೂಡ್ಲೆ ಅಸಭ್ಯ ವರ್ತನೆ ತೋರಿದ್ರು. ಮಧ್ಯದ ಬೆರಳು ತೋರಿಸಿ ಕೆಟ್ಟದಾಗಿ ನಡೆದು ಬಂದಿದ್ರು. ದರ್ಶನ್​ರ ಈ ವರ್ತನೆ ಕಂಡು ಜೈಲಲ್ಲಿದ್ರೂ ಈ ಮನುಷ್ಯ ಬುದ್ಧಿ ಕಲಿತಿಲ್ವಲ್ಲಾ ಅಂತ ಉಗಿದವರು ಎಷ್ಟೋ ಜನ. ಆದ್ರೆ ಇವತ್ತು ಜೈಲು ಸಿಬ್ಬಂದಿ ಮೇಲೆಯೇ ದರ್ಶನ್ ದರ್ಪ ತೀರಿಸಿದ್ದಾರೆ. 

ಜೈಲಿನ ನಿಯಮಗಳಲ್ಲಿ ಟಿವಿ ಕೊಡಬೇಕೆಂದು ಇದೆ ಏಕೆ ಕೊಡ್ತಿಲ್ಲ. ಅದಕ್ಕೂ ಕೋರ್ಟ್ ಗೆ ಅಪ್ಲಿಕೇಶನ್ ಹಾಕಬೇಕಾ ಅಂತ ದರ್ಶನ್ ಜೈಲಿ ಸಿಬ್ಬಂದಿ ಮೇಲೆ ಕೊತ ಕೊತಾ ಅಂತ ಕುದಿಯುತ್ತಿದ್ದಾರಂತೆ.  ನಾನಿನ್ನೂ ಆರೋಪಿ ಅಷ್ಟೇ ಅಪರಾಧಿಯಲ್ಲ, ಒಳ್ಳೆ ಟಿವಿ ಕೊಡಿ ನಾಲ್ಕೇ ದಿನಕ್ಕೆ ಕೆಟ್ಟು ಹೋಗೋ ಟಿವಿ ಕೊಡಬೇಡಿ ಎಂದು ಎಂದು ದರ್ಶನ್​ ಆವಾಜ್. ಹಾಕಿದ್ದಾರಂತೆ. 

ಬೇರೇ ಜೈಲಿಗೆ ಶಿಫ್ಟ್ ಮಾಡಿ ಪ್ಲೀಸ್ ಬಳ್ಳಾರಿ ಜೈಲಲ್ಲಿ ಸುಸ್ತಾದ ದರ್ಶನ್.!
ಬಳ್ಳಾರಿ ಜೈಲು ಸೆಲೆಬ್ರಿಟಿ ಆಗಿರೋ ನಟ ದರ್ಶನ್​​ಗೆ ಆ ಜೈಲು ಸಹವಾಸ ಸಾಕ್ ಸಾಕಾಗಿದೆ. ಬಳ್ಳಾರಿ ಜೈಲಲ್ಲಿ ದಚ್ಚು ದರ್ಪ ಒಂದ್ ಕಡೆ ಆದ್ರೆ ಆ ಜೈಲಲ್ಲಿರಲಾಗದೆ ಪರದಾಡುತ್ತಿದ್ದಾರೆ, ಹೈ ಸೆಕ್ಯುರಿಟಿ ಸೆಲ್ ನಲ್ಲಿ ಏಕಾಂಗಿಯಾಗಿರವ ದರ್ಶನ್ ಬಳ್ಳಾರಿ ಜೈಲಿನ ಕಠಿಣ ನಿಯಮಗಳಿಗೆ ಬೆಂಡಾಗಿದ್ದಾರಂತೆ. ಅನಾರೋಗ್ಯದ ನೆಪವೊಡ್ಡಿ ಬೆಂಗಳೂರು ಸುತ್ತ ಮುತ್ತ ಇರೋ ಬೇರೆ ಜೈಲಿಗೆ ಶಿಪ್ಟ್ ಮಾಡುವಂತೆ ಮನವಿ ಮಾಡೋ ಆಲೋಚನೆಯಲ್ಲೂ ಇದ್ದಾರೆ. 

'ಸೂಪರ್‌ ಸ್ಟಾರ್‌'ಗೆ ನಾಗತಿಹಳ್ಳಿ ಬಂದಿದ್ದು ಯಾಕೆಂಬ ಸಂಗತಿಯನ್ನು ಬಿಚ್ಚಿಟ್ಟ ಉಪೇಂದ್ರ!

ಮತ್ತೆ ನಾಲ್ಕು ದಿನ 'ದಚ್ಚು' ನ್ಯಾಯಾಂಗ ಬಂಧನ ವಿಸ್ತರಣೆ..!
ನಟ ದರ್ಶನ್ ಗ್ಯಾಂಗ್​ನ ನ್ಯಾಯಾಂಗ ಬಂಧನ ಇಂದಿಗೆ ಮುಗಿದಿತ್ತು. ಇಂದು ಮತ್ತೆ ವಿಚಾರಣೆ ಮಾಡಿದ ಕೋರ್ಟ್​ ದಾಸನಿಗೆ 4 ದಿನ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದೆ. ಸೆಪ್ಟೆಂಬರ್​ 17ರ ವರೆಗೆ ದಾಸನ ಗ್ಯಾಂಗ್​ಗೆ ಜೈಲೂಟವೇ ಗತಿ. ಆ ಕಡೆ ಹೈಕೋರ್ಟ್ ನಲ್ಲಿ ಪವಿತ್ರಾಗೌಡ ಜಾಮೀನು ಅರ್ಜಿ ವಿಚಾರಣೆ ಆಗಿದ್ದು, ಪವಿತ್ರಾಗೌಡ ಜಾಮೀನು ಅರ್ಜಿ ಹಿಂಪಡೆದಿದ್ದಾರೆ. 

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
Read more