Jan 16, 2022, 4:18 PM IST
ಲಕ್ನೋ(ಜ.16) ದಲಿತರ ಮನೆಯಲ್ಲಿ ಭೋಜನ ಮಾಡುವ ಮೂಲಕ ಎದುರಾಳಿಗಳ ಮತಬೇಟೆಗೆ ಯೋಗಿ ಟಕಕ್ಕರ್. ಗೆದ್ದು ಸೋತ ಜಾಗದಲ್ಲೇ ಯೋಗಿ ಅಗ್ನಿ ಪರೀಕ್ಷೆಗೆ ಧುಮುಕಿದ್ರಾ? ಸೋಲಿನ ಸುಳಿ ಸೀಳಿ ಬರಲು ಯೋಗಿ ಬಳಿ ಯಾವ ರಣತಂತ್ರವಿದೆ? ಪ್ರಬಲ ಎದುರಾಳಿ ಅಖಿಲೇಶ್ ಯಾದವ್ ಘೋಷಿಸಿರೋ ಮಂಡಲ್ ವರ್ಸಸ್ ಕಮಂಡಲ್ ಯುದ್ಧದಲ್ಲಿ ಗೆಲ್ಲೋದ್ಯಾರು?
ಹೌದು ಉತ್ತರ ಪ್ರದೇಶ ರಾಜಕೀಯ ದಿನೇ ದಿನೇ ಬಿರುಸಾಗುತ್ತಿದೆ. ಎದುರಾಳಿಗಳ ನಿರ್ನಾಮಕ್ಕೆ ಬಿಜೆಪಿ ರಣತಂತ್ರ ಹೆಣೆದಿದ್ದು, ಚುನಾವಣೆಯಲ್ಲಿ ಸೋಲಿಸಲು ಭರ್ಜರಿ ಸಿದ್ಧತೆ ನಡೆಸಿದೆ. ಅಷ್ಟಕ್ಕೂ ಮೋದಿ ಯೋಗಿ ಜೋಡಿಯ ಆಟವೇನು? ಇಲ್ಲಿದೆ ವಿವರ