News Hour: ಕೆಂಪುಕೋಟೆಯಿಂದಲೇ ಯುಸಿಸಿ ಜಾರಿ ಶಪಥಗೈದ ಮೋದಿ!

Aug 15, 2024, 11:53 PM IST

ಬೆಂಗಳೂರು (ಆ.15): ದೇಶಾದ್ಯಂತ 78ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಿಂದ ಆಚರಿಸಲಾಗಿದೆ. 11ನೇ ಬಾರಿ ಕೆಂಪುಕೋಟೆ ಮೇಲೆ ಮೋದಿ ಧ್ವಜಾರೋಹಣ ಮಾಡಿದ್ದು, ಈ ವೇಳೆ ದೇಶಕ್ಕೊಂದೇ ಕಾನೂನು ಎಂದು ಪ್ರಧಾನಿ ಶಪಥ ಕೈಗೊಂಡಿದ್ದಾರೆ.

ದೇಶಕ್ಕೆ ಈ ಹಂತದಲ್ಲಿ ಸೆಕ್ಯುಲರ್ ಸಿವಿಲ್ ಕೋಡ್ ಅಗತ್ಯವಿದೆ ಎಂದು ಮೋದಿ ಹೇಳಿದ್ದಾರೆ. PM ಮೋದಿ ಭಾಷಣಕ್ಕೆ ಅಲ್ಲಿಯೇ ಇದ್ದ ಸಿಜೆಐ ಚಂದ್ರಚೂಡ್ ಮುಗುಳ್ನಕ್ಕಿದ್ದಾರೆ. 1998ರಿಂದಲೇ ಬಿಜೆಪಿ ಪ್ರಣಾಳಿಕೆಯಲ್ಲಿ ಯುಸಿಸಿ ಜಾರಿಯ ಬಗ್ಗೆ ಪ್ರಸ್ತಾಪವಿದೆ.

ಸ್ವಾತಂತ್ರ್ಯೋತ್ಸವದಲ್ಲಿ ಸುದೀರ್ಘ ಭಾಷಣ ದಾಖಲೆ ಬರೆದ ಮೋದಿ: ಇಲ್ಲಿದೆ ಪ್ರಧಾನಿ ಗರಿಷ್ಠ ಸ್ಪೀಚ್ ಲಿಸ್ಟ್!

ವಕ್ಫ್​ ಬಳಿಕ ಏಕರೂಪ ನಾಗರಿಕ ಸಂಹಿತೆ ಜಾರಿ ಆಗುವ ಬಗ್ಗೆ ಮೋದಿ ಮಹತ್ವದ ಸುಳಿವು ನೀಡಿದ್ದಾರೆ. ಎನ್​ಡಿಎ ಮೈತ್ರಿ ಸರ್ಕಾರವಿದ್ರೂ ಯುಸಿಸಿ ಜಾರಿ ಸಾಧ್ಯವೇ ಎನ್ನುವ ಪ್ರಶ್ನೆ ಎದುರಾಗಿದೆ. ಇನ್ನೊಂದೆಡೆ,  ಮೋದಿ ಕಮ್ಯುನಲ್ ಕೋಡ್​ ಮಾತಿಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.