ಅಮರನಾಥದಲ್ಲಿ ಮೇಘ ಸ್ಫೋಟ: ಹಿಮಲಿಂಗ ದರ್ಶನಕ್ಕೆ ಹೋದವರು ಜಲಸಮಾಧಿ!

Jul 10, 2022, 7:16 PM IST

ಕಾಶ್ಮೀರ(ಜು.10):  ಪವಿತ್ರ ಅಮರನಾಥ ಯಾತ್ರೆಯಲ್ಲಿ ನಡೆದ ಮೇಘಸ್ಫೋಟ ದುರಂತಕ್ಕೆ 16 ಮಂದಿ ನಿಧನರಾಗಿದ್ದರೆ, 40ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ. ಬೇಸ್ ಕ್ಯಾಂಪ್ ಬಳಿ ಪ್ರವಾಹ ಉಕ್ಕಿ ಬಂದ ಕಾರಣ ಭಕ್ತರು ಕೊಚ್ಚಿ ಹೋಗಿದ್ದಾರೆ.  ಹೀಗಾಗಿ 43 ದಿನದ ಅಮರನಾಥ ಯಾತ್ರೆಯನ್ನು ಸರ್ಕಾರ ಸ್ಥಗಿತಗೊಳಿಸಿದೆ.