Republic Day: 75 ವಿಮಾನಗಳಿಂದ ಮನಮೋಹಕ ಪ್ರದರ್ಶನ, ಆಗಸದಿಂದಲೇ ನೇರ ಪ್ರಸಾರ

Republic Day: 75 ವಿಮಾನಗಳಿಂದ ಮನಮೋಹಕ ಪ್ರದರ್ಶನ, ಆಗಸದಿಂದಲೇ ನೇರ ಪ್ರಸಾರ

Suvarna News   | Asianet News
Published : Jan 27, 2022, 02:10 PM ISTUpdated : Apr 22, 2022, 12:25 PM IST

ಸ್ವಾತಂತ್ರ್ಯ ಲಭಿಸಿ 75 ವರ್ಷ ತುಂಬುತ್ತಿದ್ದು, ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಬಾನಿನಲ್ಲಿ 75 ವಿಮಾನಗಳ ನಡೆಸಿದ ವಿವಿಧ ವಿನ್ಯಾಸಗಳು ಪ್ರಮುಖ ಆಕರ್ಷಣೆಯಾಗಿದ್ದವು. ವಿಮಾನಗಳು ಧ್ವಜ್ ವಿನ್ಯಾಸ್ ಮಾಡಿ, ತಮ್ಮ ಶಕ್ತಿಯನ್ನು ಹೇಗೆ ಪ್ರದರ್ಶಿಸಿದ್ದವು. 

ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ವೈಮಾನಿಕ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಬಾನಿನಲ್ಲಿಯೇ 75 ವಿಮಾನಗಳು ನಡೆಸಿದ ವಿವಿಧ ವಿನ್ಯಾಸಗಳು ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆಯಾಗಿತ್ತು. ಭಾರತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ನೆನಪಿನಲ್ಲಿ ವಿಮಾನಗಳು ಭಾರತ ಸೇನೆಯ ಶಕ್ತಿಯನ್ನು ಪ್ರದರ್ಶಿಸಿದವು. 4 ಎಂಐ-17 ವಿಮಾನಗಳು ‘ಧ್ವಜ್‌’ ವಿನ್ಯಾಸ ಮಾಡುವುದರೊಂದಿಗೆ ಮೈಮಾನಿಕ ಪ್ರದರ್ಶನ ಆರಂಭವಾಯಿತು. ನಂತರ 4 ಸುಧಾರಿತ ಹಗುರ ಯುದ್ಧ ಹೆಲಿಕಾಪ್ಟರ್‌ಗಳು ‘ರುದ್ರ’ ಮತ್ತು 5 ಹೆಲಿಕಾಪ್ಟರ್‌ಗಳು ‘ರಾಹತ್‌’ ವಿನ್ಯಾಸವನ್ನು ರೂಪಿಸಿದವು. 1971 ತಂಗೈಲ್‌ ಏರ್‌ಡ್ರಾಪ್‌ ಆಪರೇಶನ್‌ಗೆ ಗೌರವ ಸಲ್ಲಿಸಲು 1 ಡಕೋಟ ಮತ್ತು 2 ಡ್ರೋನಿಯರ್‌ ವಿಮಾನಗಳು ಸೇರಿ ‘ವಿಕ್‌’ ವಿನ್ಯಾಸವನ್ನು ರೂಪಿಸದವು. ನಂತರ 5 ರಫೇಲ್‌ ವಿಮಾನಗಳು ‘ವಿನಾಶ್‌’, ‘ಬಾಜ್‌’ ಮತ್ತು ‘ತ್ರಿಶೂಲ’ ವಿನ್ಯಾಸಗಳನ್ನು ರೂಪಿಸಿದವು. 17 ಜಗ್ವಾರ್‌ ವಿಮಾನಗಳು ‘ಅಮೃತ’ ವಿನ್ಯಾಸ ರೂಪಿಸುವುದರೊಂದಿಗೆ ವೈಮಾನಿಕ ಪ್ರದರ್ಶನ ಮುಕ್ತಾಯವಾಯಿತು. ಅಷ್ಟಕ್ಕೂ ಈ ವಿಮಾನಗಳು ಎಲ್ಲಿಂದ ಟೇಕ್ ಆಫ್ ಆಗುತ್ತವೆ? ಬೇರೆ ಬೇರೆ ವಿಮಾನ ನಿಲ್ದಾಣಗಳಿಂದ ಟೇಕ್ ಆಫ್ ಆದರೂ ರಜ್‌ಪಥ್ ಮೇಲೆ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದು ಹೇಗೆ. ಈ ಗಣ ರಾಜ್ಯೋತ್ಸವದಲ್ಲಿ ಭಾರತದ ವೈವಿಧ್ಯತೆ ಮತ್ತು ಆರ್ಥಿಕ ಶಕ್ತಿ ಪ್ರದರ್ಶಿತಗೊಂಡಿದ್ದು ಹೇಗೆ ಹೇಳುತ್ತಾರೆ ಕೇಳಿ ಏರ್ ಮಾರ್ಷಲ್ ಮುರಳೀಯವರು. 

19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
24:19ಮುಸ್ಲಿಮರೆಲ್ಲಾ ಒಂದೇ ಥರ ಅಲ್ಲ.. ಹೀಗೆ ಹೇಳಿದ್ದೇಕೆ ಭಾಗವತ್? RSS ವಿರುದ್ಧದ ಪ್ರಶ್ನೆಗಳಿಗೆಲ್ಲಾ ಮೋಹನ್ ಭಾಗವತ್ ಉತ್ತರ!
Read more