Republic Day: 75 ವಿಮಾನಗಳಿಂದ ಮನಮೋಹಕ ಪ್ರದರ್ಶನ, ಆಗಸದಿಂದಲೇ ನೇರ ಪ್ರಸಾರ

Republic Day: 75 ವಿಮಾನಗಳಿಂದ ಮನಮೋಹಕ ಪ್ರದರ್ಶನ, ಆಗಸದಿಂದಲೇ ನೇರ ಪ್ರಸಾರ

Suvarna News   | Asianet News
Published : Jan 27, 2022, 02:10 PM ISTUpdated : Apr 22, 2022, 12:25 PM IST

ಸ್ವಾತಂತ್ರ್ಯ ಲಭಿಸಿ 75 ವರ್ಷ ತುಂಬುತ್ತಿದ್ದು, ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಬಾನಿನಲ್ಲಿ 75 ವಿಮಾನಗಳ ನಡೆಸಿದ ವಿವಿಧ ವಿನ್ಯಾಸಗಳು ಪ್ರಮುಖ ಆಕರ್ಷಣೆಯಾಗಿದ್ದವು. ವಿಮಾನಗಳು ಧ್ವಜ್ ವಿನ್ಯಾಸ್ ಮಾಡಿ, ತಮ್ಮ ಶಕ್ತಿಯನ್ನು ಹೇಗೆ ಪ್ರದರ್ಶಿಸಿದ್ದವು. 

ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ವೈಮಾನಿಕ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಬಾನಿನಲ್ಲಿಯೇ 75 ವಿಮಾನಗಳು ನಡೆಸಿದ ವಿವಿಧ ವಿನ್ಯಾಸಗಳು ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆಯಾಗಿತ್ತು. ಭಾರತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ನೆನಪಿನಲ್ಲಿ ವಿಮಾನಗಳು ಭಾರತ ಸೇನೆಯ ಶಕ್ತಿಯನ್ನು ಪ್ರದರ್ಶಿಸಿದವು. 4 ಎಂಐ-17 ವಿಮಾನಗಳು ‘ಧ್ವಜ್‌’ ವಿನ್ಯಾಸ ಮಾಡುವುದರೊಂದಿಗೆ ಮೈಮಾನಿಕ ಪ್ರದರ್ಶನ ಆರಂಭವಾಯಿತು. ನಂತರ 4 ಸುಧಾರಿತ ಹಗುರ ಯುದ್ಧ ಹೆಲಿಕಾಪ್ಟರ್‌ಗಳು ‘ರುದ್ರ’ ಮತ್ತು 5 ಹೆಲಿಕಾಪ್ಟರ್‌ಗಳು ‘ರಾಹತ್‌’ ವಿನ್ಯಾಸವನ್ನು ರೂಪಿಸಿದವು. 1971 ತಂಗೈಲ್‌ ಏರ್‌ಡ್ರಾಪ್‌ ಆಪರೇಶನ್‌ಗೆ ಗೌರವ ಸಲ್ಲಿಸಲು 1 ಡಕೋಟ ಮತ್ತು 2 ಡ್ರೋನಿಯರ್‌ ವಿಮಾನಗಳು ಸೇರಿ ‘ವಿಕ್‌’ ವಿನ್ಯಾಸವನ್ನು ರೂಪಿಸದವು. ನಂತರ 5 ರಫೇಲ್‌ ವಿಮಾನಗಳು ‘ವಿನಾಶ್‌’, ‘ಬಾಜ್‌’ ಮತ್ತು ‘ತ್ರಿಶೂಲ’ ವಿನ್ಯಾಸಗಳನ್ನು ರೂಪಿಸಿದವು. 17 ಜಗ್ವಾರ್‌ ವಿಮಾನಗಳು ‘ಅಮೃತ’ ವಿನ್ಯಾಸ ರೂಪಿಸುವುದರೊಂದಿಗೆ ವೈಮಾನಿಕ ಪ್ರದರ್ಶನ ಮುಕ್ತಾಯವಾಯಿತು. ಅಷ್ಟಕ್ಕೂ ಈ ವಿಮಾನಗಳು ಎಲ್ಲಿಂದ ಟೇಕ್ ಆಫ್ ಆಗುತ್ತವೆ? ಬೇರೆ ಬೇರೆ ವಿಮಾನ ನಿಲ್ದಾಣಗಳಿಂದ ಟೇಕ್ ಆಫ್ ಆದರೂ ರಜ್‌ಪಥ್ ಮೇಲೆ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದು ಹೇಗೆ. ಈ ಗಣ ರಾಜ್ಯೋತ್ಸವದಲ್ಲಿ ಭಾರತದ ವೈವಿಧ್ಯತೆ ಮತ್ತು ಆರ್ಥಿಕ ಶಕ್ತಿ ಪ್ರದರ್ಶಿತಗೊಂಡಿದ್ದು ಹೇಗೆ ಹೇಳುತ್ತಾರೆ ಕೇಳಿ ಏರ್ ಮಾರ್ಷಲ್ ಮುರಳೀಯವರು. 

45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
19:23₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?
19:54ಮುಖ್ಯಮಂತ್ರಿ ವಿಜಯ್ ಫಸ್ಟ್ ಡೇ ಫಸ್ಟ್ ಶೋ: ಭರವಸೆಗಳ ಬೆಟ್ಟ, ಖಜಾನೆಗೆ ಭಾರಿ ಹೊರೆ!
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
Read more