PM Modi security breach :  ಪ್ರಧಾನಿ ಮೋದಿ ಭದ್ರತಾ ಲೋಪದ ಹಿಂದಿರುವ ಅಸಲಿಯತ್ತು..!

PM Modi security breach : ಪ್ರಧಾನಿ ಮೋದಿ ಭದ್ರತಾ ಲೋಪದ ಹಿಂದಿರುವ ಅಸಲಿಯತ್ತು..!

Published : Jan 06, 2022, 05:48 PM IST

20 ನಿಮಿಷಗಳ ಕಾಲ ಫ್ಲೈಓವರ್ ಮೇಲೆ ಇದ್ದ ಮೋದಿ
ಪ್ರಧಾನಿ ರಕ್ಷಣೆಯ ವಿಚಾರದಲ್ಲಿ ಪಂಜಾಬ್ ಸರ್ಕಾರದ ಮೈಮೆರವು
ರಾಷ್ಟ್ರಾದ್ಯಂತ ಪಂಜಾಬ್ ಸರ್ಕಾರದ ವರ್ತನೆಗೆ ಕಿಡಿ

ನವದೆಹಲಿ (ಜ. 6): ದೇಶದ ಅತ್ಯಂತ ಸುರಕ್ಷಿತ ವ್ಯಕ್ತಿ. ಸಾಲು ಸಾಲು ಬೆಂಗಾವಲು ಪಡೆಯ ರಕ್ಷಣೆ, ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ ನ (SPG) ರಕ್ಷಣಾ ಕೋಟೆಯ ಒಳಗಿರುವ ವ್ಯಕ್ತಿ ದೇಶದ ಪ್ರಧಾನ ಮಂತ್ರಿಗೆ ಪಂಜಾಬ್ ನಲ್ಲಿ ಭದ್ರತಾ ಆತಂಕ ಎದುರಾಗಿದೆ. ಪ್ರಧಾನಿ ಮೋದಿ (Prime Minister Narendra Modi)ಸೇರಿದಂತೆ ಇಡೀ ಬೆಂಗಾವಲು ಪಡೆಯ ವಾಹನಗಳು ಪಂಜಾಬ್ ನ ಮೇಲ್ಸೇತುವೆ ಮೇಲೆ ರೈತರ ಪ್ರತಿಭಟನೆಯ ಕಾರಣ 20 ನಿಮಿಷಗಳ ಕಾಲ ನಿಂತಿದ್ದವು. ಅಕ್ಕ ಪಕ್ಕ ಸಾರ್ವಜನಿಕ ವಾಹನಗಳೂ ತಿರುಗಾಡುತ್ತಿದ್ದವು. ಅಂಥದ್ದೊಂದು ದೊಡ್ಡ ಭದ್ರತಾ ಲೋಪಕ್ಕೆ ಪಂಜಾಬ್ ಸರ್ಕಾರ (Punjab government) ಗುರಿಯಾಗಿದೆ. ಎಷ್ಟೇ ರಾಜಕೀಯ ಕೆಸರೆರಚಾಟ ನಡೆದರೂ ದೇಶದ ಪ್ರಧಾನ ವ್ಯಕ್ತಿಯ ರಕ್ಷಣೆಯಲ್ಲಿ ಮೈಮೆರವು ಸಲ್ಲದು. ಅಂಥದ್ದೊಂದು ದುಸ್ಸಾಸಹ ಪಂಜಾಬ್ ಸರ್ಕಾರ ಮಾಡಿದ್ದು, ಇದರ ಪರಿಣಾಮ ಇನ್ನು ಮುಂದೆಯಷ್ಟೇ ತಿಳಿಯಬೇಕಿದೆ.

PM Modi security breach : ಚನ್ನಿಗೆ ಹೇಳ್ಬಿಡಿ, "ಟೈಗರ್ ಅಭಿ ಜಿಂದಾ ಹೇ" ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಮೋದಿ ಅಲೆ!
ಈಗಾಗಲೇ ರಕ್ಷಣೆಯಲ್ಲಿ ಎಸಗಿದ ಪ್ರಮಾದದಿಂದಾಗಿ ಭಾರತ ಇಬ್ಬರು ಪ್ರಧಾನಮಂತ್ರಿಗಳನ್ನು ಕಳೆದುಕೊಂಡಿದೆ. ಅದೇ ಕಾರಣಕ್ಕೆ ಮೋದಿ, ವಾಪಸ್ ದೆಹಲಿಗೆ ತೆರಳುವ ವೇಳೆ "ಜೀವಂತವಾಗಿ ಕಳಿಸಿದ್ದಕ್ಕೆ ಥ್ಯಾಂಕ್ಸ್" ಎಂದಿದ್ದರು. ಮೋದಿ ಅವರ ಕಾರು ಫ್ಲೈ ಓವರ್ ಮೇಲೆ ನಿಂತಿದ್ದು ಇಷ್ಟೆಲ್ಲಾ ಆಘಾತ ಹುಟ್ಟಿಸಿರೋದ್ಯಾಕೆ..?ಅಸಲಿಗೆ ದೇಶದ ಸುರಕ್ಷಿತ ವ್ಯಕ್ತಿಗೇ ಇಂಥಾ ಗತಿ ಹೇಗೆ ಬಂತು..? ಪ್ರಧಾನಿ ಪ್ರಾಣಕ್ಕೇ ಸಂಚಕಾರ ತರಬಲ್ಲ ಪ್ರತಿಭಟನೆ ನಡೆಸೋ ಜರೂರತ್ತು ಯಾರಿಗಿತ್ತು..? ಇವೆಲ್ಲವೂಗಳೂ ಈಗ ಹುಟ್ಟಿರೋ ಪ್ರಶ್ನೆಗಳು. ಪಾಕಿಸ್ತಾನದ ಗಡಿಯ ಸಮೀಪದಲ್ಲೇ ಪ್ರಧಾನಿ ಮೋದಿ ಅವರನ್ನ ನಿಲ್ಲಿಸಿತ್ತು ಪಂಜಾಬ್ ಸರ್ಕಾರದ ಮೈಮರೆವು.. ಹಾಗಾಗಿನೇ, ಇದು ಬರೀ ಬೇಕಂತಲೇ ಮಾಡಿದ ಕುತಂತ್ರ ಅಷ್ಟೇ ಅಲ್ಲ, ಇದು ಪಾಕ್ ಕಾಂಗ್ರೆಸ್ ಸೇರಿ ನಡೆಸಿದ ಷಡ್ಯಂತ್ರ ಅನ್ನೋ ಮಾತೂ ಕೇಳಿಬರ್ತಿದೆ.

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more