ಕೊರೊನಾ ಸಂಕಷ್ಟದ ನಡುವೆ ಭರವಸೆ ಮೂಡಿಸುವ ಸುದ್ದಿಯೊಂದು ಹೊರ ಬಿದ್ದಿದೆ. ಕೊರೊನಾ ಮಣಿಸಲು ಆಯುರ್ವೇದ ಮದ್ದು ಬಳಸಲಾಗುತ್ತಿದೆ. ಅಹ್ಮದಾಬಾದ್ನಲ್ಲಿ ಆಯುರ್ವೇದ ಚಿಕಿತ್ಸೆ ನಡೆಸಲಾಗುತ್ತಿದೆ. ಸೋಂಕಿತರಿಗೆ ಅಯುರ್ವೇದ ಚಿಕಿತ್ಸೆ ನೀಡಲು ಗುಜರಾತ್ ಸರ್ಕಾರ ಮುಂದಾಗಿದೆ. ರೋಗ ಲಕ್ಷಣ ಇಲ್ಲದೇ ಸೋಂಕು ಪತ್ತೆಯಾದವರನ್ನು ಮಾತ್ರ ಅಧ್ಯಯನಕ್ಕೆ ಬಳಕೆ ಮಾಡಲಾಗುತ್ತಿದೆ. ಇದು ಇನ್ನೂ ಪ್ರಾರಂಭಿಕ ಹಂತದಲ್ಲಿದೆ. ಸಂಶಮನಿ ವಟಿ, ದಶಮೂಲ, ತ್ರಿಕೂಟ ಚೂರ್ಣ , ತುಳಸಿ, ಅರಿಶಿನ, ಲಿಂಬೆಯನ್ನು ಬಳಸಿ ಮದ್ದು ತಯಾರಿಸಲಾಗುತ್ತದೆ. ಇದು ಕೊರೋನಾಗೆ ಮದ್ದಾಗುತ್ತಾ? ಕಾದು ನೋಡಬೇಕಾಗಿದೆ.
ಬೆಂಗಳೂರು (ಏ. 28): ಕೊರೊನಾ ಸಂಕಷ್ಟದ ನಡುವೆ ಭರವಸೆ ಮೂಡಿಸುವ ಸುದ್ದಿಯೊಂದು ಹೊರ ಬಿದ್ದಿದೆ. ಕೊರೊನಾ ಮಣಿಸಲು ಆಯುರ್ವೇದ ಮದ್ದು ಬಳಸಲಾಗುತ್ತಿದೆ. ಅಹ್ಮದಾಬಾದ್ನಲ್ಲಿ ಆಯುರ್ವೇದ ಚಿಕಿತ್ಸೆ ನಡೆಸಲಾಗುತ್ತಿದೆ. ಸೋಂಕಿತರಿಗೆ ಅಯುರ್ವೇದ ಚಿಕಿತ್ಸೆ ನೀಡಲು ಗುಜರಾತ್ ಸರ್ಕಾರ ಮುಂದಾಗಿದೆ.
ರೋಗ ಲಕ್ಷಣ ಇಲ್ಲದೇ ಸೋಂಕು ಪತ್ತೆಯಾದವರನ್ನು ಮಾತ್ರ ಅಧ್ಯಯನಕ್ಕೆ ಬಳಕೆ ಮಾಡಲಾಗುತ್ತಿದೆ. ಇದು ಇನ್ನೂ ಪ್ರಾರಂಭಿಕ ಹಂತದಲ್ಲಿದೆ. ಸಂಶಮನಿ ವಟಿ, ದಶಮೂಲ, ತ್ರಿಕೂಟ ಚೂರ್ಣ , ತುಳಸಿ, ಅರಿಶಿನ, ಲಿಂಬೆಯನ್ನು ಬಳಸಿ ಮದ್ದು ತಯಾರಿಸಲಾಗುತ್ತದೆ. ಇದು ಕೊರೋನಾಗೆ ಮದ್ದಾಗುತ್ತಾ? ಕಾದು ನೋಡಬೇಕಾಗಿದೆ.
"