ದೆಹಲಿ ಸರ್ಕಾರದಿಂದ ಕೊರೋನಾ ಪ್ಯಾಕೇಜ್ ಘೋಷಣೆ; ಸಂಕಷ್ಟದಲ್ಲಿದ್ದವರಿಗೆ ನೆರವು!

May 18, 2021, 11:34 PM IST

ದೆಹಲಿ(ಮೇ.18): ಕೊರೋನಾ ವೈರಸ್ ಸಂಕಷ್ಟದಲ್ಲಿರುವ ದೆಹಲಿ ನಾಗರೀಕರಿಗೆ ಅರವಿಂದ್ ಕೇಜ್ರಿವಾಲ್ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿ ಘೋಷಿಸಿಲಾಗಿದೆ. ರೇಶನ್ ಕಾರ್ಡ್ ಇಲ್ಲದ ಬಡವರಿಗೂ ಅಕ್ಕಿ ಉಚಿತ. ಕೋವಿಡ್‌ನಿಂದ ಸಾವಾದರೆ ಕುಟುಂಬದವರಿಗ 50 ಸಾವಿರ ರೂಪಾಯಿ ಪರಿಹಾರ, ಮೃತರ ಕುಟುಂಬಕ್ಕೆ ಪ್ರತಿ ತಿಂಗಳು 2,000 ರೂಪಾಯಿ ಪಿಂಚಣಿ, ಪೋಷಕರ ಕಳೆದು ಕೊಂಡ ಮಕ್ಕಳಿಗೆ ಪ್ರತಿ ತಿಂಗಳು 2,500 ರೂಪಾಯಿ ಪಿಂಚಣಿ ಘೋಷಿಸಲಾಗಿದೆ. ಕೇಜ್ರಿವಾಲ್ ಪ್ಯಾಕೇಜ್ ವಿವರ ಇಲ್ಲಿದೆ.