Coronavirus Karnataka

ಲಾಕ್‌ಡೌನ್‌ನಿಂದ ವಾಹನ ಸಿಗದೇ ದಾರಿ ಮಧ್ಯದಲ್ಲೇ ಕೊನೆಯುಸಿರೆಳೆದ ಮಹಿಳೆ

Apr 7, 2020, 3:39 PM IST

ಸಿಂಧನೂರು(ಏ.07): ಕೊರೋನಾ ವೈರಸ್ ತಡೆಯುವ ಮುನ್ನೆಚ್ಚರಿಕಾ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ 21 ದಿನಗಳ ಲಾಕ್‌ಡೌನ್‌ ಘೋ‍ಷಿಸಿದ್ದಾರೆ. ಹೀಗಿರುವಾಗ ವಾಹನ ಸಿಗದೇ ನಡದೇ ಊರಿಗೆ ಸೇರುವ ಯತ್ನದಲ್ಲಿದ್ದ ಮಹಿಳೆ ನಿತ್ರಾಣರಾಗಿ ಕೊನೆಯುಸಿರೆಳೆದ ಆಘಾತಕಾರಿ ಘಟನೆ ನಡೆದಿದೆ.

ಚೀನಾ ಕಂಟೈನರ್‌ನಲ್ಲಿ ಕೂತು ಮೈಸೂರಿಗೆ ಬಂದಿತ್ತಾ ಕರೋನಾ ಕಂಟಕ..?

ಬೆಂಗಳೂರಿನಿಂದ ರಾಯಚೂರು ಜಿಲ್ಲೆಯ ಸಿಂಧನೂರಿಗೆ ಮಹಾ ಪ್ರಯಾಣ ಮಾಡಿದ್ದ ಕೂಲಿ ಕೆಲಸ ಮಾಡುತ್ತಿದ್ದ ಗಂಗಮ್ಮ(29) ಕೊನೆಯುಸಿರೆಳೆದ ದುರ್ದೈವಿ. ಹಸಿವನ್ನು ಲೆಕ್ಕಿಸದೇ ಊರು ಸೇರಬೇಕೆಂದು ಮಹಾಪಯಣ ಕೈಗೊಂಡಿದ್ದ ಗಂಗಮ್ಮಳ ಕನಸು ಮಾರ್ಗ ಮಧ್ಯದಲ್ಲೇ ಕಮರಿ ಹೋಗಿದೆ. ಕೆಲ ತಿಂಗಳ ಹಿಂದಷ್ಟೇ ಗಂಗಮ್ಮ ಬೆಂಗಳೂರಿಗೆ ಬಂದಿದ್ದರು. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ!