Coronavirus Karnataka

ಬಸ್ ಇಲ್ಲ, ಕೆಲಸವೂ ಇಲ್ಲ; ಮಂಗಳೂರಿನಿಂದ ಕೊಪ್ಪಳಕ್ಕೆ ಪಾದಯಾತ್ರೆ ಹೊರಟ ಕುಟುಂಬ!

Mar 28, 2020, 9:32 PM IST

ಮಂಗಳೂರು(ಮಾ.28): ಕೊರೋನಾ ವೈರಸ್‌ನಿಂದ ದೇಶವೇ ಲಾಕ್‌ಡೌನ್ ಆಗಿದೆ. ಇದು ದಿನಗೂಲಿ ಕಾರ್ಮಿಕರಿಗೆ ಹೊಡೆತ ನೀಡಿದೆ. ದಕ್ಷಿಣ ಕನ್ನಡದ ಬಿ.ಸಿ.ರೋಡ್‌ನಲ್ಲಿ ಕೆಲಸ ಮಾಡುತ್ತಿದ್ದ ಕೊಪ್ಪಳ ಮೂಲದ ಕುಟುಂಬ ಇದೀಗ ಕೆಲಸ ಇಲ್ಲ. ಕೈಯಲ್ಲಿ ಹಣವೂ ಇಲ್ಲ. ಇತ್ತ ಹೇಗಾದರೂ ಹಣ ಹೊಂದಿಸಿ ಬಸ್‌ನಲ್ಲಿ ತಮ್ಮ ಊರಿಗೆ ತೆರಳಲು ಸಾರಿಗೆ ಕೂಡ ಇಲ್ಲ. ಹೀಗಾಗಿ ಕೊಪ್ಪಳದ ಕುಟುಂಬದ 12 ಮಂದಿ ನಡೆದುಕೊಂಡೇ ಕೊಪ್ಪಳಕ್ಕೆ ಪ್ರಯಾಣ ಬೆಳೆಸಿದ್ದಾರೆ.