
ವಾಸ್ತು ಶಾಸ್ತ್ರವು ಜೀವನವನ್ನು ಸುಲಭಗೊಳಿಸುವ ಒಂದು ವಿಜ್ಞಾನವಾಗಿದೆ. ಮನೆಯ ವಾಸ್ತು ನಮ್ಮ ಜೀವನದ ಏರಿಳಿತಗಳಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ವಾಸ್ತು ಪ್ರಕಾರ, ಕೆಲವು ವಸ್ತುಗಳನ್ನು ಮನೆಯಿಂದ ದೂರವಿಡುವುದು ಉತ್ತಮ. ಅವುಗಳಲ್ಲಿ ಒಂದು ಒಡೆದ, ಮುರಿದ ಗಾಜು. ನಿಮ್ಮ ಮನೆಯಲ್ಲಿ ಮುರಿದ ಕನ್ನಡಿ, ಒಡೆದ ಗ್ಲಾಸು, ಮುಂತಾದವು ಇದ್ದರೆ, ಅದನ್ನು ಆದಷ್ಟು ಬೇಗ ಎಸೆಯುವುದು ಉತ್ತಮ. ವಾಸ್ತವವಾಗಿ, ವಾಸ್ತು ತತ್ವಗಳ ಪ್ರಕಾರ, ಮುರಿದ ಗಾಜು ಮನೆಯ ಒಟ್ಟಾರೆ ಹಾನಿಗೆ ಕಾರಣವಾಗಬಹುದು. ಮುರಿದ ಗಾಜಿನಿಂದ ಏನು, ಹೇಗೆ ಉಂಟಾಗುತ್ತೆ? ವಿವರ ಕೆಳಗಿದೆ ನೋಡಿ.
ಒಡೆದ ಗಾಜು ತುಂಬಾ ನಕಾರಾತ್ಮಕತೆಯನ್ನು ಹೊರಸೂಸುತ್ತದೆ. ಅದರ ಪರಿಣಾಮಗಳು ಮನೆಯಾದ್ಯಂತ ಅನುಭವಿಸಲ್ಪಡುತ್ತವೆ. ಈ ನಕಾರಾತ್ಮಕತೆಯು ನಿರಂತರವಾಗಿ ಸಂಘರ್ಷಕ್ಕೆ ಕಾರಣವಾಗುತ್ತದೆ. ಮನೆಯಲ್ಲಿರುವ ಪ್ರತಿಯೊಬ್ಬರೂ ಒಂದಲ್ಲ ಒಂದು ವಿಷಯದ ಬಗ್ಗೆ ನಿರಂತರವಾಗಿ ಜಗಳವಾಡುತ್ತಿರುತ್ತಾರೆ. ಸಣ್ಣ ವಿಷಯಗಳು ಸಹ ಯಾವಾಗಲೂ ಅಸಮಾಧಾನವಾಗಿ ಹೊರಹೊಮ್ಮುತ್ತವೆ. ಪರಿಣಾಮವಾಗಿ, ಸಕಾರಾತ್ಮಕತೆಗೆ ಮನೆಯಲ್ಲಿ ಸ್ಥಾನವಿರುವುದಿಲ್ಲ. ಈ ವಿಷಯಗಳು ಮಾನಸಿಕ ಶಾಂತಿಯನ್ನು ಭಂಗಗೊಳಿಸುತ್ತವೆ ಮತ್ತು ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆ.
2. ಆರ್ಥಿಕ ಪರಿಸ್ಥಿತಿ ಅಪಾಯದಲ್ಲಿ:
ವಾಸ್ತು ಶಾಸ್ತ್ರದ ಪ್ರಕಾರ, ಒಡೆದ ಗಾಜನ್ನು ಮನೆಯಲ್ಲಿ ಎಂದಿಗೂ ಇಡಬಾರದು. ಡ್ರೆಸ್ಸಿಂಗ್ ಟೇಬಲ್ ಅಥವಾ ಚಿತ್ರದ ಗಾಜು ಒಡೆದಿದ್ದರೆ, ಅದನ್ನು ತಕ್ಷಣ ಎಸೆಯಿರಿ. ಏಕೆಂದರೆ ಅದು ಹಣಕಾಸಿನ ಶಕ್ತಿಯ ಮೂಲವಾದ ಲಕ್ಷ್ಮಿದೇವಿಯನ್ನು ಅಪ್ರಸನ್ನಗೊಳಿಸುತ್ತದೆ. ಒಡೆದ ಗಾಜಿನಿಂದ ಬಿಡುಗಡೆಯಾಗುವ ನಕಾರಾತ್ಮಕ ಶಕ್ತಿಯು ಆರ್ಥಿಕ ಯೋಗಕ್ಷೇಮವನ್ನು ಹದಗೆಡಿಸಬಹುದು. ಇದು ಕುಟುಂಬ ಸದಸ್ಯರ ಆರ್ಥಿಕ ಯೋಗಕ್ಷೇಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ, ಒಡೆದ ಗಾಜನ್ನು ಮನೆಯಲ್ಲಿ ಹೆಚ್ಚು ಕಾಲ ಇಡಬಾರದು.
ಶಾಸ್ತ್ರಗಳ ಪ್ರಕಾರ, ಒಡೆದ ಗಾಜನ್ನು ಮನೆಯ ಯಾವುದೇ ಮೂಲೆಯಲ್ಲಿ ಇಡಬಾರದು. ಅದರಲ್ಲೂ ಈಶಾನ್ಯ, ಪೂರ್ವ ದಿಕ್ಕಿನಲ್ಲಂತೂ ಇರಲೇಬಾರದು. ಒಡೆದ ಗಾಜು ಗಮನಾರ್ಹ ಮಾನಸಿಕ ಒತ್ತಡವನ್ನು ಉಂಟುಮಾಡುತ್ತದೆ ಮತ್ತು ನಿದ್ರೆಯನ್ನು ಕೆಡಿಸುತ್ತದೆ. ಕ್ರಮೇಣ, ಪ್ರತಿಯೊಂದು ಕೆಲಸದಲ್ಲೂ ಅಡೆತಡೆಗಳು ಉದ್ಭವಿಸುತ್ತವೆ. ಇದು ನಮ್ಮ ಬೆಳವಣಿಗೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
4. ಕನ್ನಡಿ ಒಡೆಯುವುದು ಶುಭವೇ?:
ಕನ್ನಡಿ ಅಥವಾ ಇತರ ಗಾಜಿನ ವಸ್ತುಗಳು ಮನೆಯಲ್ಲಿ ಒಡೆಯುವುದು ವಿಭಿನ್ನ ಪರಿಣಾಮಗಳನ್ನ ನೀಡುತ್ತದೆ. ಕೆಲವೊಮ್ಮೆ ಇದು ಶುಭವಾದರೆ, ಇನ್ನೂ ಕೆಲವೊಮ್ಮೆ ಇದು ಅಶುಭ ಪರಿಣಾಮಗಳನ್ನ ಬೀರುತ್ತದೆ. ಕೆಲವರು ಗಾಜು ಒಡೆದರೆ ಶುಭ ಎಂದು ಪರಿಗಣಿಸುತ್ತಾರೆ. ಕೆಲ ನಂಬಿಕೆಗಳ ಪ್ರಕಾರ ಕನ್ನಡಿ ಒಡೆದರೆ ಬಹಳ ಒಳ್ಳೆಯದಾಗುತ್ತದೆ. ಹಾಗೆಯೇ, ಇದರ ಪ್ರಕಾರ ಮನೆಯ ಕಿಟಕಿ ಅಥವಾ ಬಾಗಿಲಿನ ಗಾಜು ಒಡೆದರೆ ಅದು ಅಶುಭವಲ್ಲ. ಮುಂದಿನ ದಿನಗಳಲ್ಲಿ ಒಳ್ಳೆಯ ಸುದ್ದಿ ಕೇಳಲಿದ್ದೀರಿ ಎಂದರ್ಥ. ಕನ್ನಡಿ ಇದ್ದಕ್ಕಿದ್ದಂತೆ ಮನೆಯಲ್ಲಿ ಒಡೆದರೆ ಬಹಳ ಒಳ್ಳೆಯದಂತೆ. ಇದರಿಂದ ಮನೆಯಲ್ಲಿರುವ ಎಲ್ಲಾ ಕಷ್ಟಗಳು ಮಾಯವಾಗುತ್ತದೆ. ಮುಂದಿನ ದಿನಗಳಲ್ಲಿ ಸಂತೋಷ ಹೆಚ್ಚಾಗುತ್ತದೆ ಎನ್ನಲಾಗುತ್ತದೆ.
5. ಆದರೆ ಒಡೆದದ್ದು ಮನೆಯಲ್ಲಿರಬಾರದು:
ಆದರೆ ನೀವು ಮನೆಯಲ್ಲಿ ಕನ್ನಡಿ ಒಡೆದ ತಕ್ಷಣ ಅದನ್ನ ಸ್ವಚ್ಛ ಮಾಡಿ, ಮನೆಯಿಂದ ಹೊರ ಹಾಕಬೇಕು. ಒಡೆದ ಗಾಜುಗಳು ನೆಗೆಟಿವ್ ಎನರ್ಜಿಯನ್ನ ಹೆಚ್ಚು ಮಾಡುತ್ತದೆ. ಹಾಗಾಗಿ ಅದನ್ನ ಬಿಸಾಡಿದರೆ ಒಳ್ಳೆಯದಾಗುತ್ತದೆ. ಇನ್ನು ಒಡೆದ ಕನ್ನಡಿಯಲ್ಲಿ ಎಂದಿಗೂ ಮುಖವನ್ನು ನೋಡಿಕೊಳ್ಳಬಾರದು. ಇದರಿಂದ ನಿಮ್ಮ ಮುಖ ವಿಕೃತವಾಗಿ ಕಂಡು ನಿಮ್ಮ ಬಗ್ಗೆ ನಿಮಗೇ ಜಿಗುಪ್ಸೆ ಮೂಡಬಹುದು. ಪರಿಣಾಮ ಕೆಟ್ಟದ್ದಾಗುತ್ತದೆ.