ಉಡುಪಿ: ಹಠಾತ್‌ ಮಳೆಗೆ 40 ಎಕ್ರೆ ಭತ್ತದ ಬೆಳೆ ನಾಶ

Published : Oct 16, 2019, 09:54 AM IST
ಉಡುಪಿ: ಹಠಾತ್‌ ಮಳೆಗೆ 40 ಎಕ್ರೆ ಭತ್ತದ ಬೆಳೆ ನಾಶ

ಸಾರಾಂಶ

ಮಂಗಳವಾರ ಉಡುಪಿ ಭಾಗದಲ್ಲಿ ಸುರಿದ ಹಠಾತ್ ಮಳೆಯಿಂದಾಗಿ 40 ಎಕ್ರೆಯಷ್ಟು ಭತ್ತದ ಗದ್ದೆ ನಾಶವಾಗಿದೆ. ಯಾವುದೇ ಸೂಚನೆ ಇಲ್ಲದದೇ ಹಠಾತ್ ಆಗಿ ಮಳೆ ಬಂದ ಕಾರಣ ಈ ಸ್ಥತಿ ಉಂಚಾಗಿದೆ.

ಉಡುಪಿ(ಅ.16): ಮಂಗಳವಾರ ಸಂಜೆ ಹಠಾತ್ತನೆ ಸುರಿದ ಮಳೆಗೆ ಉಡುಪಿ ತಾಲೂಕಿನ ಬೈರಂಪಳ್ಳಿ ಗ್ರಾಮದಲ್ಲಿ ಸುಮಾರು 40 ಎಕ್ರೆ ಪ್ರದೇಶದಲ್ಲಿ ಕಟಾವು ಮಾಡಿದ ಬತ್ತದ ಬೆಳೆ ಕೊಚ್ಚಿ ಹೋಗಿ ಲಕ್ಷಾಂತರ ರು. ನಷ್ಟವಾಗಿದೆ.

ಬೇಗ ನಾಟಿ ಮಾಡಿದ್ದ ಈ ಪ್ರದೇಶದಲ್ಲಿ ಬತ್ತ ಮಾಗಿದ್ದು, ರೈತರು ಮೂರ್ನಾಲ್ಕು ದಿನದಿಂದ ಕಟಾವು ಮಾಡಿ ಗದ್ದೆಯಲ್ಲಿ ಒಣಗಲು ಬಿಟ್ಟಿದ್ದರು. ತಗ್ಗು ಪ್ರದೇಶದ ಈ ಗದ್ದೆಗಳಲ್ಲಿ ಮಂಗಳವಾರ ಸಂಜೆ ಹಠಾತ್‌ ನೀರು ನುಗ್ಗಿ ಬತ್ತದ ಪೈರೆಲ್ಲ ಕೊಚ್ಚಿ ಹೋಗಿದೆ.

ಡಾಂಬರು ರಸ್ತೆ ಕಡಿತ:

ಹರಿಖಂಡಿಗೆ ಮತ್ತು ಪೆರ್ಡೂರು ಸಂಪರ್ಕ ರಸ್ತೆಯಲ್ಲಿ ಮೋರಿ ಕುಸಿದು, ಎರಡೂ ಗ್ರಾಮಗಳ ನಡುವೆ ವಾಹನ ಸಂಚಾರ ಸಂಪರ್ಕ ಕಡಿದು ಹೋಗಿದೆ. ಈ ರಸ್ತೆಯನ್ನು ಕಳೆದ ವರ್ಷವಷ್ಟೇ ಲೋಕೋಪಯೋಗಿ ಇಲಾಖೆಯವರು ನಿರ್ಮಿಸಿದ್ದರು. ಮೋರಿಯೊಳಗೆ ನೀರು ನುಗ್ಗಿದ್ದರಿಂದ ಮೋರಿಯ ದಂಡೆಗಳು ಕುಸಿದಿದೆ.

ಮಡಿಕೇರಿ: 17,18ರಂದು ಏಕಮುಖ ಸಂಚಾರ

ಸಿಡಿಲಿಗೆ ದನ ಬಲಿ:

ಬ್ರಹ್ಮಾವರ ಸಮೀಪದ ಕರ್ಜೆ ಗ್ರಾಮದ ಹೊಸೂರು ಎಂಬಲ್ಲಿ ದನವೊಂದು ಸಿಡಿಲಿಗೆ ಬಲಿಯಾಗಿದೆ. ಹೇಮಾವತಿ ಶೆಟ್ಟಿಎಂಬವರ ಕೊಟ್ಟಿಗೆಗೆ ಹೊಡೆದ ಸಿಡಿಲಿನ ತೀವ್ರತೆಗೆ ಒಳಗಿದ್ದ ದನ ಸ್ಥಳದಲ್ಲಿಯೇ ಮೃತಪಟ್ಟಿದೆ.

ಹೊಸೂರು ಮತ್ತು ಕುಕ್ಕೆಹಳ್ಳಿಯಲ್ಲಿ ಸುಮಾರು 5 ಮನೆಗಳಿಗೆ ಸಿಡಿಲಿನಿಂದ ಹಾನಿಯಾಗಿದ್ದು, ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

20 ಸಾವಿರ ಜನರಿಂದ ಕೈ ತೊಳೆಯುವ ದಿನ ಆಚರಣೆ..!

PREV
click me!

Recommended Stories

ಕರಾವಳಿಯಿಂದ ಬೆಂಗಳೂರಿಗೆ ಮಾ. 22 ರಂದು ವಿಶೇಷ ರೈಲು ಘೋಷಣೆ, ಮಡ್ಗಾಂವ್‌ನಿಂದ ಮಂಗಳೂರು ಆಗಿ ರಾಜಧಾನಿಗೆ ಪಯಣ
ಇನ್ಸ್‌ಪೆಕ್ಟರ್ ಸಂದೇಶ್ ಕಾಮಕಾಂಡ ಕೇಸ್‌ಗೆ ಬಿಗ್ ಟ್ವಿಸ್ಟ್: ಪೊಲೀಸ್‌ ವರದಿ ಕೇಳಿ ಬೆಚ್ಚಿಬಿದ್ದ ಸಂತ್ರಸ್ಥೆಯರು!