South Korea ವ್ಯಕ್ತಿಯನ್ನು ತರಕಾರಿ ಬಾಕ್ಸ್‌ ಎಂದು ತಿಳಿದು ಜಜ್ಜಿ ಸಾಯಿಸಿದ ರೋಬಾಟ್‌!

By Santosh NaikFirst Published Nov 9, 2023, 4:19 PM IST
Highlights

ಮನುಷ್ಯ ಮತ್ತು ವಸ್ತುವಿನ ನಡುವಿನ ವ್ಯತ್ಯಾಸವನ್ನು ಗುರುತಿಸಲು ವಿಫಲವಾದ ರೋಬಾಟ್‌, ವ್ಯಕ್ತಿಯನ್ನು ಜಜ್ಜಿ ಸಾಯಿಸಿದ ಭೀಕರ ಘಟನೆ ದಕ್ಷಿಣ ಕೊರಿಯಾದಲ್ಲಿ ವರದಿಯಾಗಿದೆ.

ನವದೆಹಲಿ (ನ.9):  ನಿಮ್ಮಲ್ಲಿ ಎಷ್ಟು ಮಂದಿ 2019ರಲ್ಲಿ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾದ ಆಂಡ್ರಾಯ್ಡ್ ಕುಂಜಪ್ಪನ್ Ver 5.25 ಸಿನಿಮಾವನ್ನು ವೀಕ್ಷಿಸಿದ್ದೀರೋ ಗೊತ್ತಿಲ್ಲ. ಆದರೆ, ಆ ಚಿತ್ರದ ಆರಂಭದಲ್ಲಿ ಬರುವ ಸೀನ್‌ನಂಥ ನಿಜವಾದ ಘಟನೆ ದಕ್ಷಿಣ ಕೊರಿಯಾದಲ್ಲಿ ನಡೆದಿದೆ. ಮನುಷ್ಯ ಮತ್ತು ವಸ್ತುವಿನ ನಡುವಿನ ವ್ಯತ್ಯಾಸವನ್ನು ಪತ್ತೆ ಮಾಡುವಲ್ಲಿ ವಿಫಲವಾದ ರೋಬಾಟ್‌, ವ್ಯಕ್ತಿಯನ್ನು ಜಜ್ಜಿ ಸಾಯಿಸಿದ ಘಟನೆ ವರದಿಯಾಗಿದೆ. ವ್ಯಕ್ತಿಯು ತನ್ನ ಕೈಯಲ್ಲಿ ಹಿಡಿದುಕೊಂಡಿದ್ದ ತರಕಾರಿ ಬಾಕ್ಸ್‌ ಹಾಗೂ ಆತನ ನಡುವಿನ ವ್ಯತ್ಯಾಸವನ್ನು ಅರಿಯುವಲ್ಲಿ ರೋಬಾಟ್‌ ಸಂಪೂರ್ಣವಾಗಿ ವಿಫಲವಾಗಿದೆ. ಮೆಣಸು ತುಂಬಿದ್ದ ಪೆಟ್ಟಿಗೆಗಳನ್ನು ಕಟ್ಟಿಗೆ ಪಟ್ಟಿಗಳ ಮೇಲೆ ಇರಿಸುವಂಥ ಜವಾಬ್ದಾರಿಗಳನ್ನು ನೀಡಲಾಗಿತ್ತು. ಆದರೆ, ಈ ವೇಳೆ ವ್ಯಕ್ತಿ ಹಾಗೂ ತರಕಾರಿ ಬುಟ್ಟಿಯ ನಡುವಿನ ವ್ಯತ್ಯಾಸವನ್ನು ಗುರುತಿಸಲು ರೋಬಾಟ್‌ ವಿಫಲವಾಗಿದ್ದು, ವ್ಯಕ್ತಿಯನ್ನು ಜಜ್ಜಿ ಸಾಯಿಸಿದೆ.

ರೋಬಾಟ್‌ ಈ ಹಂತದಲ್ಲಿ ಸಂಪೂರ್ಣ ಅಸಮರ್ಪಕವಾಗಿ ಕಾರ್ಯ ನಿರ್ವಹಿಸಿತು. ತರಕಾರಿ ಬುಟ್ಟಿ ಹಿಡಿದುಕೊಂಡಿದ್ದ ವ್ಯಕ್ತಿಯನ್ನು ಹಿಡಿದುಕೊಂಡ ರೋಬಾಟ್‌ ಆತನನ್ನು ಕನ್ವೇನರ್‌ ಬೆಲ್ಟ್‌ಗೆ ಆತನ ಮುಖ ಹಾಗೂ ಎದೆಯ ಭಾಗವನ್ನು ಅಪ್ಪಳಿಸಿದೆ. ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಬಳಿಕ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಅಲ್ಲಿಯೇ ಸಾವು ಕಂಡಿದ್ದಾನೆ ಎಂದು ದಕ್ಷಿಣ ಕೊರಿಯಾದ ನ್ಯೂಸ್‌ ಏಜೆನ್ಸಿ ತಿಳಿಸಿದೆ.

ಆ ವ್ಯಕ್ತಿ ರೋಬೋಟ್‌ನ ಸೆನ್ಸಾರ್‌ನಲ್ಲಿ ತಪಾಸಣೆ ನಡೆಸುತ್ತಿದ್ದ. ನವೆಂಬರ್ 8 ರಂದು ದಕ್ಷಿಣ ಜಿಯೊಂಗ್‌ಸಾಂಗ್ ಪ್ರಾಂತ್ಯದ ಮೆಣಸು ವಿಂಗಡಣೆ ಘಟಕದಲ್ಲಿ ರೋಬೋಟ್ ಅನ್ನು ಪರೀಕ್ಷಾರ್ಥವಾಗಿ ಕಾರ್ಯನಿರ್ವಹಣೆ ಮಾಡಲು ಬಳಸಿಕೊಳ್ಳಲಾಗಿತ್ತು. ಈ ಘಟನೆಯ ನಂತರ, ಫ್ಲ್ಯಾಂಟ್‌ಅನ್ನು ಹೊಂದಿರುವ ಡಾಂಗ್‌ಸಿಯಾಂಗ್ ರಫ್ತು ಕೃಷಿ ಸಂಕೀರ್ಣದ ಅಧಿಕಾರಿಯೊಬ್ಬರು ಭವಿಷ್ಯದಲ್ಲಿ ಇಂತಹ ದುರಂತಗಳನ್ನು ತಡೆಗಟ್ಟಲು "ನಿಖರ ಮತ್ತು ಸುರಕ್ಷಿತ" ವ್ಯವಸ್ಥೆಯನ್ನು ಸ್ಥಾಪಿಸುವ ಅಗತ್ಯವನ್ನು ಒತ್ತಿ ಹೇಳಿದರು.

ಚೀನಾದಲ್ಲಿ ವಾಹನ ಟೋ ಮಾಡಲು ರೋಬೋ ವಾಹನ, ಬೆಂಗಳೂರಲ್ಲಿ ಸಾಧ್ಯವಿಲ್ಲ ಎಂದ ಜನ!

ದಕ್ಷಿಣ ಕೊರಿಯಾದಲ್ಲಿ ರೋಬೋಟ್‌ನ ಅವಘಡ ಸಂಭವಿಸಿರುವುದು ಇದೇ ಮೊದಲಲ್ಲ. ಮಾರ್ಚ್‌ನಲ್ಲಿ, ಆಟೋಮೊಬೈಲ್ ಬಿಡಿಭಾಗಗಳ ಉತ್ಪಾದನಾ ಘಟಕದಲ್ಲಿ ಕೆಲಸ ಮಾಡುವಾಗ 50 ರ ಹರೆಯದ ವ್ಯಕ್ತಿಯೊಬ್ಬರು ರೋಬೋಟ್‌ಗೆ ಸಿಕ್ಕಿ ತೀವ್ರವಾಗಿ ಗಾಯಗೊಂಡಿದ್ದರು. ಈ ಘಟನೆಯು ವಿಶೇಷವಾಗಿ ಕೈಗಾರಿಕಾ ಸೆಟ್ಟಿಂಗ್‌ಗಳಲ್ಲಿ ರೊಬೊಟಿಕ್ಸ್ ತಂತ್ರಜ್ಞಾನದ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಖಾತ್ರಿಪಡಿಸುವ ಪ್ರಾಮುಖ್ಯತೆಯ ಸಂಪೂರ್ಣ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ. ಇಂತಹ ಅಪಘಾತಗಳು ಮತ್ತೆ ಸಂಭವಿಸದಂತೆ ತಡೆಯಲು ಕಠಿಣ ಪರೀಕ್ಷೆ ಮತ್ತು ಸುರಕ್ಷತಾ ಕ್ರಮಗಳ ಅಗತ್ಯವನ್ನು ಇದು ಒತ್ತಿ ಹೇಳಿದೆ.

ಮೊಬೈಲ್‌ನಂತೆ ಇವಳ ಹೃದಯ ಚಾರ್ಜ್ ಮಾಡ್ತಿದ್ರೆ ಮಾತ್ರ ಈ ಮಹಿಳೆ ಬದುಕೋದು!

click me!