'ಇದು ಹೊಸ ಭಾರತ': ಕಾನ್ಸ್ ಚಲನಚಿತ್ರೋತ್ಸವದಲ್ಲಿ ಪ್ರಧಾನಿ ಮೋದಿ ಡಿಜಿಟಲ್ ಆರ್ಥಿಕತೆ ಶ್ಲಾಘಿಸಿದ ನಟ ಆರ್ ಮಾಧವನ್

Published : May 20, 2022, 05:37 PM ISTUpdated : May 20, 2022, 05:40 PM IST
'ಇದು ಹೊಸ ಭಾರತ': ಕಾನ್ಸ್ ಚಲನಚಿತ್ರೋತ್ಸವದಲ್ಲಿ ಪ್ರಧಾನಿ ಮೋದಿ ಡಿಜಿಟಲ್ ಆರ್ಥಿಕತೆ ಶ್ಲಾಘಿಸಿದ ನಟ ಆರ್ ಮಾಧವನ್

ಸಾರಾಂಶ

ಪ್ರಧಾನಿ ಮೋದಿಯವರ ಡಿಜಿಟಲ್ ಆರ್ಥಿಕತೆಯು ಪ್ರಪಂಚದಾದ್ಯಂತ ಕೋಲಾಹಲವನ್ನು ಸೃಷ್ಟಿಸಿದೆ ಮತ್ತು ಆರ್ಥಿಕ ಸಮುದಾಯವು ಇದು ದುರಂತವಾಗಲಿದೆ ಎಂದು ನಂಬಿತ್ತು, ಆದರೆ ಅದು ಹಾಗಾಗಲಿಲ್ಲ ಎಂದು ನಟ ಮಾಧವನ್ ಹೇಳಿದ್ದಾರೆ. 

ನವದೆಹಲಿ (ಮೇ 20): ನಟ ಆರ್ ಮಾಧವನ್  ಗುರುವಾರ ಕಾನ್ಸ್‌ನಲ್ಲಿ ತಮ್ಮ ಚೊಚ್ಚಲ ನಿರ್ದೇಶನದ 'ರಾಕೆಟ್ರಿ: ದಿ ನಂಬಿ ಎಫೆಕ್ಟ್' ಕುರಿತು ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಾರೆ. ಈ ವರ್ಷದ ಕಾನ್ಸ್‌ ಚಿತ್ರೋತ್ಸವದಲ್ಲಿ ಭಾಗವಹಿಸಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್  ಪ್ರಧಾನಿ ಮೋದಿಯವರ ಡಿಜಿಟಲ್ ಆರ್ಥಿಕತೆಯ ದೃಷ್ಟಿಕೋನವನ್ನು ಅರ್ಥಶಾಸ್ತ್ರಜ್ಞರು ಹೇಗೆ ವಿಪತ್ತು ಎಂದು ಭಾವಿಸಿದ್ದರು ಆದರೆ ಅದು ಹೇಗೆ ಸಂಭವಿಸಲಿಲ್ಲ ಎಂಬುದನ್ನು ವಿವರಿಸುವ ಮಾಧವನ್ ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ರೈತರಿಗೆ ಫೋನ್ ಬಳಸಲು ಶಿಕ್ಷಣ ನೀಡುವ ಅಗತ್ಯವಿಲ್ಲ ಎಂದು ನಟ ಮಾಧವನ್‌ ಹೇಳಿದ್ದಾರೆ. 

"ಭಾರತದ ಪ್ರಧಾನ ಮಂತ್ರಿ ತಮ್ಮ ಅಧಿಕಾರಾವಧಿಯನ್ನು ಪ್ರಾರಂಭಿಸಿದಾಗ, ಅವರು ಮೈಕ್ರೋ ಎಕಾನಮಿ ಮತ್ತು ಡಿಜಿಟಲ್ ಕರೆನ್ಸಿಯನ್ನು ಪರಿಚಯಿಸಿದರು. ಪ್ರಪಂಚದಾದ್ಯಂತ, ಆರ್ಥಿಕ ಸಮುದಾಯದಲ್ಲಿ, 'ಇದು ಕೆಲಸ ಮಾಡುವುದಿಲ್ಲ. ಇದು ದುರಂತ' ಎಂದು ಹೇಳುವ ಕೋಲಾಹಲವಿತ್ತು. ಸಣ್ಣ ಹಳ್ಳಿಗಳಲ್ಲಿರುವ ರೈತರು ಮತ್ತು ಅವಿದ್ಯಾವಂತರು ಸಣ್ಣ ಫೋನ್ ಅಥವಾ ಸ್ಮಾರ್ಟ್‌ಫೋನ್ ನಿಭಾಯಿಸಲು ಮತ್ತು ಲೆಕ್ಕಪತ್ರವನ್ನು ನಿರ್ವಹಿಸಲು ಹೇಗೆ ಸಾಧ್ಯ ಹೇಳಲಾಗಿತ್ತು ”ಎಂದು ನಟ ಹೇಳಿದ್ದಾರೆ

 

 

ಮೈಕ್ರೋ ಎಕಾನಮಿ ಭಾರತದಲ್ಲಿ ದೊಡ್ಡ ವಿಪತ್ತು ಎಂದು ಪರಿಗಣಿಸಲಾಗಿತ್ತು ಎಂದು ಹೇಳಿದ ಮಾಧವನ್ "ಒಂದೆರಡು ವರ್ಷಗಳಲ್ಲಿ ಇಡೀ ಕಥೆಯು ಬದಲಾಯಿತು ಮತ್ತು ಭಾರತವು ವಿಶ್ವದ ಅತಿ ಹೆಚ್ಚು ಮೈಕ್ರೋ ಎಕಾನಮಿ ಬಳಕೆದಾರರಲ್ಲಿ ಒಂದಾಯಿತು ಮತ್ತು ಇದರ ಹಿಂದಿನ ಕಾರಣವೇನು ಎಂದು ನಿಮಗೆ ತಿಳಿದಿದೆ.  ರೈತರು ತಮ್ಮ ಹಣ ಪಡೆದಿದ್ದಾರೆಯೇ ಅಥವಾ ಯಾರಿಗೆ ಕಳುಹಿಸಿದ್ದಾರೆ ಎಂದು ತಿಳಿಯಲು ಫೋನ್ ಬಳಸಲು ಶಿಕ್ಷಣವನ್ನು ಪಡೆಯಬೇಕಾಗಿಲ್ಲ ... ಇದು ನವ ಭಾರತ" ಎಂದು ಮಾಧವನ್‌ ಹೇಳಿದ್ದಾರೆ.

ಇದನ್ನೂ ಓದಿ: 2030ರ ವೇಳೆಗೆ ಭಾರತದಲ್ಲಿ 6G ನೆಟ್‌ವರ್ಕ್ ಪ್ರಾರಂಭಿಸುವ ಗುರಿ: ಪ್ರಧಾನಿ ನರೇಂದ್ರ ಮೋದಿ

ಮಾಧವನ್ ತಮ್ಮ ಚಿತ್ರದ ಬಗ್ಗೆ ಮಾತನಾಡುತ್ತಾ, "ಆರ್ಯಭಟ್ಟನಿಂದ ಸುಂದರ್ ಪಿಚೈವರೆಗೆ, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ಅಸಾಧಾರಣ ಕಥೆಗಳಿವೆ. ನಾವು ಅವರ ಬಗ್ಗೆ ಚಲನಚಿತ್ರಗಳನ್ನು ಮಾಡುತ್ತಿಲ್ಲ, ಅವರು ಪ್ರಪಂಚದಾದ್ಯಂತದ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ಅವರು ನಟರಿಗಿಂತ ದೊಡ್ಡ ಅಭಿಮಾನಿಗಳನ್ನು ಹೊಂದಿದ್ದಾರೆ." ಎಂದು ಅವರು ಹೇಳಿದ್ದಾರೆ

ಇದಕ್ಕೂ ಮೊದಲು ಕಾನ್ಸ್‌ನಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಭಾರತ ಶ್ರೇಷ್ಠತೆಯ ತುತ್ತ ತುದಿಯಲ್ಲಿದೆ ಎಂದು ಹೇಳಿದ್ದಾರೆ. "ಭಾರತವು ಕಾನ್ಸ್‌ನಲ್ಲಿ ಇರಬೇಕಾಗಿಲ್ಲ ಎಂದು ನಾನು ನಿಜವಾಗಿಯೂ ನಂಬುವ ಒಂದು ದಿನ ಬರುತ್ತದೆ, ಆದರೆ ಕಾನ್ಸ್ ಭಾರತದಲ್ಲಿರುತ್ತದೆ."‌ ಎಂದು ಅವರು ಹೇಳಿದ್ದಾರೆ

ಇದನ್ನೂ ಓದಿ: TRAI ರಜತ ಮಹೋತ್ಸವ ಸಮಾರಂಭ: ಭಾರತದ ಮೊದಲ 5G ಟೆಸ್ಟ್‌ಬೆಡ್ ಉದ್ಘಾಟಿಸಿದ ಪ್ರಧಾನಿ ಮೋದಿ

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಆಧಾರ್​ ಕಾರ್ಡ್​ ಕಳೆದು ನಂಬರ್​ ಮರೆತಿರುವಿರಾ? ಹಾಗಿದ್ರೆ ಈ ಸ್ಟೆಪ್​ ಫಾಲೋ ಮಾಡಿ ವಾಪಸ್​ ಪಡೆಯಿರಿ