ಸಾಲ ಮಾಡಿ ಆದರೂ ಆಲಮಟ್ಟಿ ಎತ್ತರ ಹೆಚ್ಚಿಸುತ್ತೇವೆ: ಬಿಎಸ್‌ವೈ

Published : Aug 26, 2020, 07:34 AM ISTUpdated : Aug 26, 2020, 07:46 AM IST
ಸಾಲ ಮಾಡಿ ಆದರೂ ಆಲಮಟ್ಟಿ ಎತ್ತರ ಹೆಚ್ಚಿಸುತ್ತೇವೆ: ಬಿಎಸ್‌ವೈ

ಸಾರಾಂಶ

ಬಹು​ವ​ರ್ಷ​ಗಳ ಬೇಡಿ​ಕೆ​ಯಾದ ಆಲ​ಮಟ್ಟಿಜಲಾ​ಶ​ಯದ ಎತ್ತ​ರ​ವನ್ನು ಹೆಚ್ಚಿ​ಸ​ಬೇ​ಕೆಂಬ ಆಗ್ರ​ಹ​| ಸಾಲ ಮಾಡಿ ಆದರೂ ಆಲಮಟ್ಟಿ ಎತ್ತರ ಹೆಚ್ಚಿಸುತ್ತೇವೆ: ಬಿಎಸ್‌ವೈ| 

ವಿಜಯಪುರ(ಆ.26): ಉತ್ತರ ಕರ್ನಾ​ಟ​ಕ ಭಾಗದ ಬಹು​ವ​ರ್ಷ​ಗಳ ಬೇಡಿ​ಕೆ​ಯಾದ ಆಲ​ಮಟ್ಟಿಜಲಾ​ಶ​ಯದ ಎತ್ತ​ರ​ವನ್ನು ಹೆಚ್ಚಿ​ಸ​ಬೇ​ಕೆಂಬ ಆಗ್ರ​ಹ​ದ ಈಡೇ​ರಿ​ಕೆಗೆ ರಾಜ್ಯ ಬಿಜೆಪಿ ಸರ್ಕಾರ ಬದ್ಧ​ವಾ​ಗಿದೆ ಎಂದು ಮುಖ್ಯ​ಮಂತ್ರಿ ಬಿ.ಎ​ಸ್‌.​ಯ​ಡಿ​ಯೂ​ರಪ್ಪ ಹೇಳಿ​ದ್ದಾರೆ. ಜತೆ​ಗೆ, ಸಾಲ ಮಾಡಿಯಾದರೂ ಆಲಮಟ್ಟಿಅಣೆಕಟ್ಟೆಯನ್ನು ಎತ್ತ​ರಿ​ಸ​ಲಾ​ಗು​ವುದು ಎಂದೂ ಭರ​ವಸೆ ನೀಡಿ​ದ್ದಾ​ರೆ.

ಮಂಗಳವಾರ ಆಲಮಟ್ಟಿಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಆಲಮಟ್ಟಿಅಣೆಕಟ್ಟೆಎತ್ತರವನ್ನು 524.256 ಮೀಟರ್‌ವರೆಗೆ ಹೆಚ್ಚಿ​ಸಲು ಸರ್ಕಾರ ಬದ್ಧವಿದೆ. ನ್ಯಾಯಾಧಿಕರಣದ ತೀರ್ಪಿನ ಅನ್ವಯ ರಾಜ್ಯಕ್ಕೆ ದೊರೆತಿರುವ 130 ಟಿಎಂಸಿ ನೀರಿನ ಸದ್ಬಳಕೆಗೆ ಸರ್ಕಾ​ರ ಆದ್ಯತೆ ನೀಡಲಿದೆ ಎಂದು ಹೇಳಿದರು.

ಈಗಾಗಲೇ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಕೇಂದ್ರದ ಜಲ ಸಂಪನ್ಮೂಲ ಇಲಾಖೆ ಸಭೆಯಲ್ಲಿ ಆಲಮಟ್ಟಿ ಅಣೆಕಟ್ಟೆಎತ್ತರ ಹೆಚ್ಚಳಕ್ಕೆ ಅಧಿಸೂಚನೆ ಹೊರಡಿಸುವ ಕುರಿತು ಗಮನ ಸೆಳೆದಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆ(ಯು​ಕೆ​ಪಿ​)ಯ 3ನೇ ಹಂತದ ಯೋಜನಾ ಕಾಮಗಾರಿಗಳು ಹಾಗೂ ಆಲಮಟ್ಟಿಅಣೆಕಟ್ಟೆಎತ್ತರ ಹೆಚ್ಚ​ಳಕ್ಕೆ ಸಂಬಂಧಿಸಿ ಸದ್ಯ​ದಲ್ಲೇ ನಾನೂ ಪ್ರಧಾನಿ ಅವರನ್ನು ಭೇಟಿಯಾಗಿ ಚರ್ಚಿಸುತ್ತೇನೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ