
ಕಾರವಾರ, ಉತ್ತರಕನ್ನಡ (ಅ.14):ಹಾವು ಹಿಡಿಯುವಾಗ ಉರಗ ತಜ್ಞನಿಗೆ ಹಾವು ಕಚ್ಚಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗುಂಡಬಾಳ ಗ್ರಾಮದಲ್ಲಿ ನಡೆದಿದೆ.
ಉರಗ ತಜ್ಞ ಅಬು ತಲಾ ಎಂಬುವವರಿಗೆ ಕಚ್ಚಿದ ಹಾವು.ಗುಂಡಬಾಳ ಸಮೀಪ ಮನೆಯೊಂದರಲ್ಲಿ ರಾತ್ರಿವೇಳೆ ಕಾಣಿಸಿಕೊಂಡಿದ್ದ ನಾಗರಹಾವು. ಹಾವನ್ನು ಕಂಡು ಭಯಭೀತರಾಗಿದ್ದ ಮನೆಯವರು. ಸುತ್ತಮುತ್ತಲು ಎಲ್ಲೆ ಹಾವುಗಳನ್ನು ಕಂಡರು ರಕ್ಷಣೆ ಮಾಡುವ ಉರಗ ತಜ್ಞ ಅಬು ತಲಾ. ಮನೆಯವರು ಅಬು ತಲಾಗೆ ಕರೆ ಮಾಡಿ ಮಾಹಿತಿ ನೀಡಿದ್ದರು.
ಬಾಲಕನಿಗೆ 9 ಬಾರಿ ಹಾವು ಕಚ್ಚಿರೋದು ನಿಜನಾ..? ಖ್ಯಾತ ಉರಗ ತಜ್ಞರು, ವೈದ್ಯರು ಈ ಬಗ್ಗೆ ಹೇಳೋದೇನು..?
ತಕ್ಷಣ ಸ್ಥಳಕ್ಕೆ ಬಂದಿರುವ ಉರಗ ತಜ್ಞ. ಹಾವನ್ನು ಹಿಡಿಯುವಾಗ ದಿಢೀರ್ ಕೈ ಭಾಗಕ್ಕೆ ಕಚ್ಚಿದ ನಾಗರಹಾವು. ಕಚ್ಚಿದರೂ ಲೆಕ್ಕಿಸದೇ ಹಾವನ್ನು ಹಿಡಿದು ಸುರಕ್ಷಿತ ಜಾಗಕ್ಕೆ ಬಿಟ್ಟ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದಾನೆ. ಹೊನ್ನಾವರದ ತಾಲೂಕು ಆಸ್ಪತ್ರೆಗೆ ದಾಖಲಾಗಿರುವ ಉರಗ ತಜ್ಞ. ವಿಷಪೂರಿತ ನಾಗರಹಾವು ಕಚ್ಚಿರುವುದರಿಂದ ಸ್ಥಿತಿ ಗಂಭೀರವಾಗಿದೆ. ಅಲ್ಲಿಂದ ಕೂಡಲೇ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇತ್ತ ಉರಗ ತಜ್ಞ ಬೇಗ ಗುಣಮುಖ ಆಗಲಿ ಎಂದು ಹೊನ್ನಾವರದ ಜನರು ಪ್ರಾರ್ಥಿಸುತ್ತಿದ್ದಾರೆ. ಆದಷ್ಟು ಬೇಗ ಗುಣಮುಖವಾಗಲಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ