
ಬೆಂಗಳೂರು, (ಜೂನ್.12): ರಾಜ್ಯದಲ್ಲೂ ನ್ಯಾನೋ ಯೂರಿಯಾ ಘಟಕ ಸ್ಥಾಪನೆಯಾಗುವ ಕಾಲ ಕೂಡಿಬಂದಿದ್ದು, ಇದರ ಭಾಗವಾಗಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದಗೌಡ ಅವರು ದ್ರವ ರೂಪದ ನ್ಯಾನೋ ಯೂರಿಯಾಗೆ ಚಾಲನೆ ನೀಡಿದರು.
ಇಂದು (ಶನಿವಾರ) ತಮ್ಮ ನಿವಾಸದಿಂದ ವರ್ಚುವಲ್ ಮೂಲಕ ಗುಜರಾತ್ ನ ಕಲೋಲ್ ಸ್ಥಾವರದಿಂದ ನ್ಯಾನೋ ಯೂರಿಯಾ ರಾಜ್ಯಕ್ಕೆ ಸಾಗಣೆಕೆಗೆ ಚಾಲನೆ ನೀಡಿದರು.
ರೈತರಿಗೆ ಗುಡ್ನ್ಯೂಸ್: ಭತ್ತ ಸೇರಿ 14 ಬೆಳೆಗಳ ಬೆಂಬಲ ಬೆಲೆ ಹೆಚ್ಚಳ!
ಗುಜರಾತ್ ನ ಕಲೋಲ್ ಸ್ಥಾವರದಿಂದ ನ್ಯಾನೋ ಯೂರಿಯಾ ರಾಜ್ಯ ಬರಲಿದ್ದು, ಇಫ್ಕೋ ಉತ್ಪಾದಿತ ನ್ಯಾನೋ ಯೂರಿಯಾ ದಾಸ್ತಾನಿನ ಮೊದಲ ಕಂತು ಸಾಗಣೆಯಾಗಲಿದೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನ್ಯಾನೋ ಯೂರಿಯಾ ಪರಿಸರ ಸ್ನೇಹಿ. ರಾಸಾಯನಿಕ ರಸಗೊಬ್ಬರಗಳಿಂದ ಪರಿಸರಕ್ಕೆ ಅಪಾಯ ಇದೆ ಎಂದು ತಿಳಿಸಿದರು.
ಇವತ್ತು ಇಫ್ಕೋ ಸಂಸ್ಥೆಯಿಂದ ನ್ಯಾನೋ ಯೂರಿಯಾ ಬಿಡುಗಡೆ ಆಗಿದೆ. ಗುಜರಾತ್ ನ ಕಲೋಲ್ ಸ್ಥಾವರ ದಿಂದ 16,600 ಬಾಟಲ್ ನ್ಯಾನೋ ಯೂರಿಯಾ ತರಲಾಗ್ತಿದೆ. ರಾಜ್ಯದಲ್ಲೂ ನ್ಯಾನೋ ಯೂರಿಯಾ ಘಟಕ ಸ್ಥಾಪನೆಯಾಗುತ್ತಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ