ಮಂಡ್ಯ ಬಸ್​ ದುರಂತ: ಸಾವು ಗೆದ್ದು ಬಂದ ಬಾಲಕ ಬಿಚ್ಚಿಟ್ಟ ಭಯಾನಕ ಸತ್ಯ

Published : Nov 24, 2018, 02:55 PM IST
ಮಂಡ್ಯ ಬಸ್​ ದುರಂತ: ಸಾವು ಗೆದ್ದು ಬಂದ ಬಾಲಕ  ಬಿಚ್ಚಿಟ್ಟ ಭಯಾನಕ ಸತ್ಯ

ಸಾರಾಂಶ

ಮಂಡ್ಯದಲ್ಲಿ ಘನಘೋರ ಬಸ್ ದುರಂತದಲ್ಲಿ ಇಡೀ ಬಸ್ ಜಲಸಮಾಧಿಯಾಗಿದೆ. ಈ ದುರ್ಘಟನೆಯಲ್ಲಿ ಒಬ್ಬ ಬಾಲಕ ಮಾತ್ರ ಬದುಕುಳಿದಿದ್ದಾನೆ ಎನ್ನಲಾಗಿತ್ತು. ಆದ್ರೆ ಒಬ್ಬರಲ್ಲ, ಇಬ್ಬರು ಎಂದು ತಿಳಿದುಬಂದಿದ್ದು, ಸಾವು ಗೆದ್ದ ಬಂದ  ಬಾಲಕ​ ಬಿಚ್ಚಿಟ್ಟ ಭಯಾನಕ ಸತ್ಯವಿದು.

ಮಂಡ್ಯ, [ನ.24]: ಇಂದು [ಶನಿವಾರ] ಮಂಡ್ಯದಲ್ಲಿ ಘನಘೋರ ದುರಂತವೊಂದು ನಡೆದುಹೋಗಿದೆ. ಮಂಡ್ಯದ ಕಣಗಾನಮರಡಿ ಬಳಿ ಇರುವ ವಿಸಿ ನಾಲೆಗೆ ಬಸ್​ ಉರುಳಿ ಸುಮಾರು ಈಗಾಗಲೇ 23 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. 

ಈ ಘಟನೆಯಲ್ಲಿ  7ನೇ ತರಗತಿ  ವಿದ್ಯಾರ್ಥಿ ರೋಹಿತ್ ಮಾತ್ರ ಬದುಕುಳಿದಿದ್ದಾನೆ ಎನ್ನಲಾಗಿತ್ತು. ಆದ್ರೆ ಈ ದುರಂತದಲ್ಲಿ ಬದುಕಿ ಬಂದಿದ್ದು ಒಬ್ಬರಲ್ಲ, ಇಬ್ಬರು ಎಂದು ತಿಳಿದುಬಂದಿದೆ. ರೋಹಿತ್ ಜೊತೆಗೆ ಗಿರೀಶ್​ ಎನ್ನುವ ಬಾಲಕ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಮಂಡ್ಯದಲ್ಲಿ ಭೀಕರ ಬಸ್ ಅಪಘಾತ: 20 ಸಾವು!

ಇನ್ನು ಸಾವನ್ನ ಗೆದ್ದು ಬಂದ ಗಿರೀಶ್​  ಘಟನೆ ಬಗ್ಗೆ ವಿವರಿಸಿದ್ದು ಹೀಗೆ.

 ಬಸ್​​ನಲ್ಲಿ ನಾನು ಹಿಂದೆ ಕುಳಿತಿದ್ದೆ. ಬಸ್​​ ನಾಲೆಗೆ ಉರುಳಿದ ನಂತರ ಒಳಗೆ ನೀರು ನುಗ್ಗಲು ಶುರುವಾಯ್ತು. ಗಾಬರಿಯಲ್ಲಿ ನಾನು ಕಿಟಕಿ ಗ್ಲಾಸ್​​ ಒಡೆದು ಹೊರಬಂದೆ. 

ಬಸ್​​ನಲ್ಲಿ ಇದ್ದವರೆಲ್ಲರೂ ಕಿರುಚಾಡುತ್ತಿದ್ದರು. ಈ ವೇಳೆ ಮತ್ತೊಬ್ಬ ಹುಡುಗ ಕೂಡ ಮೇಲೆ ಬರುತ್ತಿದ್ದ. ಅವನನ್ನ ಮೇಲೆತ್ತಿ,  ಈಜಿಕೊಂಡು ದಡಕ್ಕೆ ಬಂದೆವು. ಕೂಗಾಟ ಕೇಳಿ ಅಕ್ಕಪಕ್ಕದಲ್ಲಿದ್ದ ಜನ ಓಡಿಬಂದರು ಎಂದು ಗಿರೀಶ್ ತಿಳಿಸಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭಗವದ್ಗೀತೆ ಬೋಧನೆ ಪ್ರಸ್ತಾಪ ಹಿಂದೆ ಎಚ್ಜಿಕೆ ಅಜೆಂಡಾ : ಮಧು ಬಂಗಾರಪ್ಪ
ದ್ವೇಷ ಭಾಷಣಕ್ಕೆ 7 ವರ್ಷ ಜೈಲು: ವಿಧೇಯಕ ಮಂಡಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌