ಪ್ರವಾಸಿಗರೇ ಇಲ್ನೋಡಿ: ಹೊಸ ವರ್ಷಾಚರಣೆಗೆ ನೀವು ಈ ಸ್ಥಳಗಳಿಗೆ ಹೋಗೋಹಾಗಿಲ್ಲ

Kannadaprabha News   | Asianet News
Published : Dec 29, 2020, 12:51 PM ISTUpdated : Dec 29, 2020, 01:15 PM IST
ಪ್ರವಾಸಿಗರೇ ಇಲ್ನೋಡಿ: ಹೊಸ ವರ್ಷಾಚರಣೆಗೆ ನೀವು ಈ ಸ್ಥಳಗಳಿಗೆ ಹೋಗೋಹಾಗಿಲ್ಲ

ಸಾರಾಂಶ

ಕೋವಿಡ್‌ ಆತಂಕದ ಹಿನ್ನೆಲೆ ಜನಸಂದಣಿ ತಪ್ಪಿಸಲು ಜಿಲ್ಲಾಡಳಿತಗಳ ನಿರ್ಧಾರ | ಪ್ರವಾಸಕ್ಕೆ ರೆಡಿಯಾಗಿರೋರು ಈ ಸ್ಥಳಗಳಿಗೆ ಹೋಗೋ ಹಾಗಿಲ್ಲ

ಬೆಂಗಳೂರು(ಡಿ.29): ಕೊರೋನಾ ಆತಂಕದ ಹಿನ್ನೆಲೆಯಲ್ಲಿ ಹೊಸವರ್ಷಾಚರಣೆ ವೇಳೆ ಜನಸಂದಣಿ ತಪ್ಪಿಸುವ ಸಲುವಾಗಿ ನಂದಿಬೆಟ್ಟಸೇರಿದಂತೆ ರಾಜ್ಯದ ಹಲವು ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಇತಿಹಾಸ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾಗಿರುವ ಜಿಲ್ಲೆಯ ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆ ಪ್ರತಿವರ್ಷ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಈ ವರ್ಷ ರೂಪಾಂತರಗೊಂಡ ಕೊರೋನಾ ವೈರಸ್‌ ಸೋಂಕು ಹರಡುವ ಭೀತಿ ಹೆಚ್ಚಾಗಿರುವುದರಿಂದ 2020ರ ಡಿ.30ರಿಂದ 2021ರ ಜ.2ರ ವರೆಗೆ ನಂದಿಗಿರಿಧಾಮದ ಪ್ರವೇಶ ನಿರ್ಬಂಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್‌.ಲತಾ ಆದೇಶ ಹೊರಡಿಸಿದ್ದಾರೆ.

BMTC ಪ್ರಯಾಣಿಕರಿಗೆ ಗುಡ್‌ನ್ಯೂಸ್: ಹೊಸವರ್ಷದಲ್ಲಿ ಟಿಕೆಟ್‌ ದರ ಕಡಿತ

ಅದೇ ರೀತಿ ಮೈಸೂರು ಜಿಲ್ಲೆಯ ಚಾಮುಂಡಿ ಬೆಟ್ಟ, ಮಂಡ್ಯ ಜಿಲ್ಲೆಯ ಬಲಮುರಿ, ಎಡಮುರಿ, ಕೆ.ಆರ್‌.ಎಲ್‌. ಹಿನ್ನೀರು ಪ್ರದೇಶ, ಮುತ್ತತ್ತಿ, ರಾಮನಗರ ಜಿಲ್ಲೆಯ ಚನ್ನ​ಪ​ಟ್ಟಣ ತಾಲೂ​ಕಿನ ಕಣ್ವ ಜಲಾ​ಶಯ, ಮಾಗಡಿ ತಾಲೂ​ಕಿನ ಸಾವನ ದುರ್ಗ ಮತ್ತು ಮಂಚ​ನ​ಬೆಲೆ ಜಲಾ​ಶಯ, ಕನ​ಕ​ಪುರ ತಾಲೂ​ಕಿನ ಸಂಗ​ಮ-ಮೇಕೆ​ದಾಟು, ಚುಂಚಿ ಜಲ​ಪಾತಗಳಿಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧಿಸಿ ಆಯಾ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ಬೀಚ್‌ಗಳಲ್ಲಿ, ಐತಿಹಾಸಿಕ ಸ್ಥಳಗಳಲ್ಲಿ ಡಿ.31ರಿಂದ ಸಂಜೆ 4ರಿಂದ ಜ.1ರ ಬೆಳಗ್ಗೆ 6 ಗಂಟೆವರೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಡಾ.ಹರೀಶ್‌ ಕುಮಾರ್‌ ಆದೇಶ ಹೊರಡಿಸಿದ್ದಾರೆ.

ದೇವಾಲಯ ಪ್ರವೇಶ ನಿರ್ಬಂಧವಿಲ್ಲ: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಕೃಷ್ಣಮಠ, ಕೊಲ್ಲೂರು ಮೂಕಾಂಬಿಕಾ ದೇವಾಲಯ ಸೇರಿದಂತೆ ಯಾವ ದೇವಾಲಯದಲ್ಲೂ ಯಾವುದೇ ಹೊಸ ನಿರ್ಬಂಧವನ್ನು ವಿಧಿಸಲಾಗಿಲ್ಲ. ಈಗಾಗಲೇ ಜಾರಿಯಲ್ಲಿರುವ ಕೋವಿಡ್‌ ನಿಯಮಾವಳಿಗಳಂತೆ ಭಕ್ತರು ದೇವಾಲಯಕ್ಕೆ ತೆರಳಿ ದೇವರ ದರ್ಶನ ಮಾಡಬಹುದಾಗಿದೆ ಎಂದು ಉಡುಪಿ ಜಿಲ್ಲಾಡಳಿತ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ರಾಜ್ಯದಲ್ಲಿ 2.84 ಲಕ್ಷ ಸರ್ಕಾರಿ ಹುದ್ದೆ ಖಾಲಿ: 24,300 ಹುದ್ದೆ ಭರ್ತಿಗೆ ಅಂಕಿತ! ಇಲಾಖಾವಾರು ಮಾಹಿತಿ ಇಲ್ಲಿದೆ!