Rajiv Jyothi Yatra: ಇಂದು ರಾಜೀವ್‌ ಗಾಂಧಿ ಜ್ಯೋತಿ ಯಾತ್ರೆಗೆ ಡಿಕೆಶಿ ಚಾಲನೆ

Published : May 15, 2023, 03:59 AM IST
Rajiv Jyothi Yatra: ಇಂದು ರಾಜೀವ್‌ ಗಾಂಧಿ ಜ್ಯೋತಿ ಯಾತ್ರೆಗೆ ಡಿಕೆಶಿ ಚಾಲನೆ

ಸಾರಾಂಶ

ರಾಜೀವ್‌ ಗಾಂಧಿ ಜ್ಯೋತಿ ಯಾತ್ರೆ’ಯು ಸೋಮವಾರ ನಗರದ ಕೆಪಿಸಿಸಿ ಕಚೇರಿಯಿಂದ ತಮಿಳುನಾಡಿನ ಶ್ರೀಪೆರಂಬದೂರಿನತ್ತ ತೆರಳಲಿದ್ದು, ಬೆಳಗ್ಗೆ 10ಗಂಟೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಯಾತ್ರೆ ಉದ್ಘಾಟಿಸಲಿದ್ದಾರೆ.

ಬೆಂಗಳೂರು (ಮೇ.15) : ರಾಜೀವ್‌ ಗಾಂಧಿ ಜ್ಯೋತಿ ಯಾತ್ರೆ’ಯು ಸೋಮವಾರ ನಗರದ ಕೆಪಿಸಿಸಿ ಕಚೇರಿಯಿಂದ ತಮಿಳುನಾಡಿನ ಶ್ರೀಪೆರಂಬದೂರಿನತ್ತ ತೆರಳಲಿದ್ದು, ಬೆಳಗ್ಗೆ 10ಗಂಟೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಯಾತ್ರೆ ಉದ್ಘಾಟಿಸಲಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಮ್‌ ಅಹ್ಮದ್‌, ರಾಮಲಿಂಗಾರೆಡ್ಡಿ ಅವರು ಯಾತ್ರೆಗೆ ಚಾಲನೆ ನೀಡುವರು. ಬಳಿಕ ಶೇಷಾದ್ರಿಪುರದಲ್ಲಿನ ರಾಜೀವ್‌ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಗುವುದು. ಆರ್‌.ದೊರೈವೇಲು ನೇತೃತ್ವದಲ್ಲಿ ಕಾರ್ಯಕರ್ತರು ಜ್ಯೋತಿ ಯಾತ್ರೆ ಹೊರಡಲಿದ್ದಾರೆ.

ಚಿತ್ರಗಳಲ್ಲಿ, ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟ ಡಿಕೆಶಿ

ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಮೈಸೂರು, ನಂಜನಗೂಡು, ಗುಂಡ್ಲುಪೇಟೆ, ಚಾಮರಾಜನಗರ ಮೂಲಕ ಅಲ್ಲಿಂದ ಸತ್ಯಮಂಗಲಂ ಮೂಲಕ ಮೂಲಕ ತಮಿಳುನಾಡು ಪ್ರವೇಶಿಸಲಿರುವ ಜ್ಯೋತಿಯು ರಾಜೀವ್‌ ಗಾಂಧಿ ಹುತಾತ್ಮರಾದ ದಿನವಾದ ಮೇ 21ರಂದು ಚೆನ್ನೈ ಮೂಲಕ ಶ್ರೀಪೆರಂಬದೂರು ತಲುಪಲಿದೆ. ಇದೇ ಊರಿನಲ್ಲಿ ರಾಜೀವ್‌ ಹತ್ಯೆ ನಡೆದಿತ್ತು.

ಅಲ್ಲಿ ತಮಿಳುನಾಡು ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಅಳಗಿರಿ ಹಾಗೂ ಹಿರಿಯ ನಾಯಕರು ಯಾತ್ರೆಯನ್ನು ಬರಮಾಡಿಕೊಳ್ಳುವರು. ಸಂಜೆ 6ಕ್ಕೆ ಹುತಾತ್ಮ ಸ್ಥಳದಲ್ಲಿ ಮೊಂಬತ್ತಿ ಬೆಳಗಿ ಗೌರವ ಸಲ್ಲಿಸಲಾಗುವುದು ಎಂದು ರಾಜೀವ್‌ ಗಾಂಧಿ ಜ್ಯೋತಿ ಯಾತ್ರಾ ಸಮಿತಿ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್