ರಾಮನಗರದಲ್ಲಿ ಮಂಗಗಳ ಮಾರಣಹೋಮ; ವಿಷವುಣಿಸಿ ಸಾಯಿಸಿದ  ದುಷ್ಕರ್ಮಿಗಳು!

Published : Oct 30, 2023, 01:56 PM IST
ರಾಮನಗರದಲ್ಲಿ ಮಂಗಗಳ ಮಾರಣಹೋಮ; ವಿಷವುಣಿಸಿ ಸಾಯಿಸಿದ  ದುಷ್ಕರ್ಮಿಗಳು!

ಸಾರಾಂಶ

ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಕಾಡುಪ್ರಾಣಿಗಳ ಹಾವಳಿ ಹೆಚ್ಚುತಲೆ ಇದೆ, ಒಂದು ಕಡೆ ಆನೆ ಮತ್ತೊಂದು ಕಡೆ ಚಿರತೆ,ಹಾಗೂ ಕರಡಿ ಹೀಗೆ ಹಲವಾರು ಪ್ರಾಣಿಗಳ ಹಾವಳಿಯಿಂದ ಜನರು ಬೇಸತ್ತು ಹೋಗಿದ್ದಾರೆ, ಆದರೆ ಜನರಿಗೆ ತೊಂದರೆ ಕೊಡದೆ ಎಳನೀರು, ಕಡಲೆಕಾಯಿ, ತಿಂದು ಬದುಕುತ್ತಿದ್ದ ಕೋತಿಗಳಿಗೆ ವಿಷ ಹಾಕಿ ಸಾಯಿಸಿರುವ ಘಟನೆ ಬೆಳಕಿಗೆ ಬಂದಿದೆ.

ವರದಿ- ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ

ರಾಮನಗರ (ಅ.30):  ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಕಾಡುಪ್ರಾಣಿಗಳ ಹಾವಳಿ ಹೆಚ್ಚುತಲೆ ಇದೆ, ಒಂದು ಕಡೆ ಆನೆ ಮತ್ತೊಂದು ಕಡೆ ಚಿರತೆ,ಹಾಗೂ ಕರಡಿ ಹೀಗೆ ಹಲವಾರು ಪ್ರಾಣಿಗಳ ಹಾವಳಿಯಿಂದ ಜನರು ಬೇಸತ್ತು ಹೋಗಿದ್ದಾರೆ, ಆದರೆ ಜನರಿಗೆ ತೊಂದರೆ ಕೊಡದೆ ಎಳನೀರು, ಕಡಲೆಕಾಯಿ, ತಿಂದು ಬದುಕುತ್ತಿದ್ದ ಕೋತಿಗಳಿಗೆ ವಿಷ ಹಾಕಿ ಸಾಯಿಸಿರುವ ಘಟನೆ ಬೆಳಕಿಗೆ ಬಂದಿದೆ.

ಸಾಯಿಸಿದ ಕೋತಿಗಳನ್ನು ಮೂಟೆಕಟ್ಟಿ ಎಸೆದು ಹೋದ ನರಭಕ್ಷಕರು

ರಾಮನಗರ ಜಿಲ್ಲೆಗೆ ಹೊಸದಾಗಿ ಆರಂಭಗೊಂಡ ಹಾರೋಹಳ್ಳಿ ತಾಲೂಕಿನ ಯಲಚವಾಡಿ ಪಂಚಾಯಿತಿ ವ್ಯಾಪ್ತಿಯ ಭೀಮ ಚಂದ್ರ ದೊಡ್ಡಿ ಗ್ರಾಮದ ರಸ್ತೆ ಬದಿಯ ಪಕ್ಕ ಗೋಣಿಚೀಲ ಎಸೆದು ಹೋಗಿದ್ದ ದುಷ್ಕರ್ಮಿಗಳು. ದಾರಿಹೋಕನೊಬ್ಬ ಗೋಣಿಚೀಲ ಬಿಚ್ಚಿ ನೋಡಿದಾಗ ಸುಮಾರು 3 ಕೋತಿಗಳು ಹಾಗೂ ನಾಲ್ಕು ಕೋತಿ ಮರಿಗಳು ಸತ್ತಿರುವ ಘಟನೆ ಬೆಳಕಿಗೆ ಬಂದಿದೆ. ಇನ್ನು ಈಉ ಕೋತಿಗಳನ್ನು ಬೇರೆಡೆ ಸಾಯಿಸಿ ಇಲ್ಲಿ ತಂದು ಎಸೆದಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Haveri: ಸರ್ಕಾರಿ ಬಸ್‍ ಏರಿದ ಆಂಜನೇಯ: 30 ಕಿಲೋ ಮೀಟರ್ ಪ್ರಯಾಣಿಸಿದ ಕೋತಿ!

ಅಂದಹಾಗೆ ಕಳೆದ ಐದು ವರ್ಷಗಳಿಂದ ಕೋತಿಗಳ ಸಂಖ್ಯೆ ಜಿಲ್ಲೆಯಲ್ಲಿ ಗಣನೀಯವಾಗಿ ಹೆಚ್ಚುತ್ತಿದೆ. ಹಾಗಾಗಿ ಕೋತಿಗಳು ಆಹಾರ ಹರಿಸಿ ಗ್ರಾಮಗಳ ಮೇಲೆ ವಲಸೆ ಹೋಗಲು ಆರಂಭಿಸಿವೆ. ಗ್ರಾಮಗಳಲ್ಲಿ ಸಿಗುವ ಎಳನೀರು ಕಡಲೆಕಾಯಿ ಹಾಗೂ ಚೀಪೆ ಇನ್ನು ಮುಂತಾದ ಬೆಳೆಗಳ ಮೇಲೆ ದಾಳಿ ಮಾಡುತ್ತಿದ್ದು, ಇವನ ಹಿಮ್ಮೆಟ್ಟಿಸಲು ಜನರು ಕೂಡ ಹರಸಾಹಸ ಮಾಡುತ್ತಿದ್ದ ಯಾವುದೇ ಪ್ರಯೋಜನ ಆಗಿಲ್ಲ.ಇನ್ನೂ ಅರಣ್ಯ ಇಲಾಖೆಗೆ ದೂರು ನೀಡಿದ್ರು ಇಲಾಖೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಇದರಿಂದ ಬೇಸತ್ತ ಜನರು ವಿಷ ಹಾಕಿ ಕೋತಿಗಳನ್ನು ಸಾಯಿಸಿದ್ದಾರೆ ಎಂದು  ಆರೋಪಿಸಿದ್ದಾರೆ.

ವಕೀಲರ ಕಚೇರಿಲಿ ಕೋತಿಯ ಕಡತ ಪರಿಶೀಲನೆ :ಭಜರಂಗಿಯ ವೀಡಿಯೋ ವೈರಲ್

ಸತ್ತಿರುವ ಕೋತಿಗಳನ್ನು ಮರಣೋತ್ತರ ಪರೀಕ್ಷೆ ನಡೆಸಿದ ಅರಣ್ಯ ಇಲಾಖೆ

ನೆನ್ನೆ ಸಾರ್ವಜನಿಕರು ಮಣ್ಣು ಮಾಡಿದ್ದ ಕೋತಿಗಳನ್ನು ಅರಣ್ಯ ಇಲಾಖೆ ಮತ್ತೆ ಹೊರತೆಗೆದು ಮರಣೋತ್ತರ ಪರೀಕ್ಷೆ ಒಳಪಡಿಸಿತ್ತು. ಮರಣೋತರ ಪರೀಕ್ಷೆ ವರದಿ ಬಂದ ಕೂಡಲೇ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧನಕ್ಕೆ ಕ್ರಮ ತೆಗೆದುಕೊಳ್ತಾರಾ ಕಾದು ನೋಡಬೇಕು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ